ಸಿಂಧನೂರ ದಿನಾಂಕ 03.ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವೀರಾಪುರ್ (ಕೊನೆಯ ಗ್ರಾಮ) ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳು ವ್ಯಾಸಂಗ ಮಾಡಲು ಬಂದ ವಿದ್ಯಾರ್ಥಿಗಳಿಂದ ನೀರಿನ ಟ್ಯಾಂಕ್ ಸ್ವಚ್ಛತೆ ಮತ್ತು ಇನ್ನಿತರ ಕೆಲಸಗಳನ್ನು ಹಚ್ಚಿದ್ದು ಸಾರ್ವಜನಿಕರು ಬಹಿರಂಗವಾಗಿ ಮುಖ್ಯ ಗುರುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸರ್ಕಾರವು ಗ್ರಾಮೀಣ ಭಾಗದ ಅವಿದ್ಯಾವಂತ ಬಾಲಕರಿಗೆ ಶಿಕ್ಷಣ ಯೋಜನೆಯ ರೂಪಿಸಿ ಅದರ ಮೂಲಕ ಗ್ರಾಮೀಣ ಭಾಗದಲ್ಲಿ ಪ್ರೌಢಶಾಲೆ ಪ್ರಾಥಮಿಕ ಶಾಲೆ ಪ್ರಾರಂಭಿಸಿದ್ದು ಅದಕ್ಕಾಗಿ ವಿವಿಧ ಯೋಜನೆಗಳನ್ನು ಸಹ ರೂಪಿಸಿದೆ ಆದರೆ ವೀರಾಪುರ್ ಗ್ರಾಮದ ವೀರಪುರ ಗ್ರಾಮದ ಸರಕಾರಿ ಪ್ರೌಢಶಾಲೆಯ (ಪ್ರಭಾರ) ಮುಖ್ಯ ಗುರುಗಳಾದ ಬಸವರಾಜ್ ಹುಡೆದ್ ವ್ಯಾಸಂಗ ಮಾಡುಲು ಬರುವ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಬೇರೆ ಬೇರೆ ಕೆಲಸಗಳನ್ನು ಹಚ್ಚಿ ಅವರಿಗೆ ಬೋಧನೆ ಮಾಡುವುದನ್ನು ಬಿಟ್ಟು ನೀರಿನ ಟ್ಯಾಂಕ್ ಸ್ವಚ್ಚ ಮಾಡಿಸುವುದು, ಸುಣ್ಣ ಬಣ್ಣ ಬಳಿಸುವುದು ಸೇರಿದಂತೆ ಹಲವಾರು ಕೆಲಸಗಳನ್ನು ಮತ್ತು ತಮ್ಮ ವೈಯಕ್ತಿಕ ಕೆಲಸಗಳನ್ನು ಅಚ್ಚುತ್ತಿರುವುದನ್ನು ಕಂಡು ಗ್ರಾಮೀಣ ಭಾಗದ ಸಾರ್ವಜನಿಕರು ಇದನ್ನು ವಿರೋಧಿಸಿ ಬಹಿರಂಗವಾಗಿ ಮುಖ್ಯ ಗುರುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಂದು ವಿಷಯವೇನೆಂದರೆ ಕೆಲಸ ಮಾಡಲು ವಲ್ಲದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಕಿರುಕುಳ ಕೊಡುವುದು ಮತ್ತು ಶಾಲೆಯಿಂದ ಹೊರಗೆ ಹೋಗಿ ಎಂದು ಬೈಯುವುದು ಅಲ್ಲದೆ ಸರಕಾರ ಕೊಡುತ್ತಿರುವ ಯೋಜನೆಗಳು ಶೂ ಭಾಗ್ಯ ಸೇರಿದಂತೆ ಇನ್ನಿತರ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಎಲ್ಲದರಲ್ಲೂ ಅವ್ಯವಾರ ಮಾಡುತ್ತಿರುವ ಈ ಮುಖ್ಯ ಗುರುಗಳ ವಿರುದ್ಧ ದೂರು ಕೂಡ ಕೇಳಿ ಬರುತ್ತಿದೆ ಈ ಹಿನ್ನೆಲೆಯಲ್ಲಿ ತಮ್ಮಲ್ಲಿ ಈ ದೂರಿನ ಮೂಲಕ ಒತ್ತಾಯಿಸಿಕೊಳ್ಳುವುದೇನೆಂದರೆ ಸರಕಾರದ ಅನುದಾನವನ್ನು ದುರ್ಬಳಕೆ ಮಾಡುವುದು, ವ್ಯಾಸಂಗ ಮಾಡಲು ಬಂದ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕೆಲಸಗಳನ್ನು ಹಚ್ಚಿ ಅವರ ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡಿದ್ದು ಅಲ್ಲದೆ ಅಭ್ಯಾಸಕ್ಕೆ ಕಂಟಕ ಪ್ರಾಯನಾಗಿರುವ ಈ ಮುಖ್ಯ ಗುರುಗಳ ವಿರುದ್ಧ ಪ್ರಕರಣ ದಾಖಲೆಸಿಕೊಂಡು ಕೂಡಲೇ ವಜಗೊಳಿಸಿ ಮತ್ತು ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ, ಪ್ರಪ್ರಥಮ ಬಾರಿಗೆ ಹಾಜರಾಗುವ ಮುನ್ನ ಘೋಷಿಸಿದ ಆಸ್ತಿಗೂ ಮತ್ತು ಇಂದಿನ ಆಸ್ತಿಗೂ ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಆಸ್ತಿಗಳನ್ನು ಪರಿಶೀಲನೆ ಮಾಡಿ ಹೆಚ್ಚಾದಲ್ಲಿ ಇಲಾಖೆ ವತಿಯಿಂದ ಪ್ರಕರಣ ದಾಖಲಿಸಿಕೊಂಡು ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಇಲ್ಲವಾದಲ್ಲಿ ಪಾಲಕರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಹಯೋಗದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಪಾಲಕರೊಬ್ಬರು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ದೂರಿಗೆ ಸ್ಪಂದಿಸಿದ ಮಕ್ಕಳ ರಕ್ಷಣಾ ನಿರ್ದೇಶನಾಲಯ