ಬಡವರ ಬಾರಕೋಲು ಸುದ್ದಿ
ಮಸ್ಕಿ : ದಾರ್ಶನಿಕರು,ಮಹಾನುಭಾವರ ಸಂದೇಶಗಳನ್ನು ಸಮಾಜಕ್ಕೆ ತಿಳಿಸುವ ಸಲುವಾಗಿ ಸರ್ಕಾರದಿಂದ ಜಯಂತಿಗಳನ್ನು ಆಚರಣೆ ಮಾಡಲಾಗುವುದು ಎಂದು ಡಾ.ಮಲ್ಲಪ್ಪ ಕೆ.ಯರಗೋಳ
ತಿಳಿಸಿದರು.
ಇಲ್ಲಿನ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ವಿವಿಧ ಜಯಂತಿಗಳ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು 12 ರಂದು ಬೆಳಿಗ್ಗೆ 10 ಕ್ಕೆ
ರೇಣುಕಾಚಾರ್ಯ ಜಯಂತಿಯನ್ನು
ಮಾರ್ಚ್ 14ರಂದು ಬೆಳಿಗ್ಗೆ 11.30ಕ್ಕೆ ಯೋಗಿ ನಾರಾಯಣ ಯತೀಂದ್ರರ ಜಯಂತಿ,ಹಾಗೂ ಮಾ.28 ರಂದು ಅಗ್ನಿ ಬನ್ನಿರಾಯ ಜಯಂತಿಯನ್ನು
ತಹಶೀಲ್ದಾರರ ಕಚೇರಿ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ
ಆಚರಿಸಲಾಗುವುದು ಎಂದು ಹೇಳಿದರು.
ಮಹನೀಯರ ಜಯಂತಿಗಳ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ ಅದು ಎಲ್ಲಾ ಸಮುದಾಯದವರೂ ಪಾಲ್ಗೊಳ್ಳಬೇಕು ಹಾಗೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಡಾ.ಪಂಚಾಕ್ಷರಯ್ಯ ಸ್ವಾಮಿ ಕಂಬಾಳಿಮಠ,ಕರಿಬಸವಯ್ಯ ಸ್ವಾಮಿ,ಸಿದ್ದಯ್ಯ ಹೆಸರೂರು ಹಿರೇಮಠ,ಗಂಗಾಧರ ಕಂಬಾಳಿಮಠ,ಆದಯ್ಯ ಸ್ವಾಮಿ,ತಿಪ್ಪಯ್ಯಸ್ವಾಮಿ ಸಿದ್ದಲಿಂಗಯ್ಯ ಸ್ವಾಮಿ,ಅಮರೇಶ ಸೊಪ್ಪಿಮಠ,ಶಿವಮೂರ್ತಿ ಸ್ವಾಮಿ,ಮಹೇಶ್ ಕೊಟ್ಟರಮಠ,ಬಸವರಾಜ ಪೂಜಾರಿ
ಸೇರಿದಂತೆ ಅನೇಕರು ಇದ್ದರು.
ವರದಿ : ಎಚ್.ಕೆ.ಬಡಿಗೇರ್