
BB NEWS KANNADA
ಸಿಂಧನೂರು: ನಗರದ ಇಂದಿರಾ ನಗರ ವಾರ್ಡ್ ನಂ.13 ರಲ್ಲಿರುವ ಶ್ರೀ ಮಲ್ಲಯ್ಯಸ್ವಾಮಿ ದೇವಸ್ಥಾನದ ಸಮೀಪ ನಿರ್ಮಾಣವಾಗುತ್ತಿರುವ ಶ್ರೀ ಶನೇಶ್ವರ ದೇವರ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೇ 13 ಹಾಗೂ 14 ರಂದು ಎರಡು ದಿನಗಳ ಕಾಲ ವೈಭವಮಯವಾಗಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ಮಹೋತ್ಸವವು ಶ್ರೀ.ಷ.ಬ್ರ. ಶ್ರೀ ಯೋಗಿರಾಜ ಶಿವಾಚಾರ್ಯ ಮಹಾಸ್ವಾಮಿಗಳು, ಸಂಸ್ಥಾನ ಹಿರೇಮಠ ಲೌಡಕುಂದಾ ಹಾಗೂ ಶ್ರೀ ಹ.ಬ್ರ. ಸೋಮನಾಥ ಬಾಚಾರ್ಯ ಮಹಾಸ್ವಾಮಿಗಳು, ಕರಿಬಸವ ನಗರ, 3ನೇ ಮೈಲ್ ಕ್ಯಾಂಪ್ ಸಿಂಧನೂರು ಅವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಲಿದ್ದು, ಸುತ್ತಮುತ್ತಲಿನ ಗ್ರಾಮಗಳ ಭಕ್ತರಲ್ಲಿ ಭಾರೀ ಭಕ್ತಿ ಉತ್ಸಾಹ ಮನೆ ಮಾಡಿದೆ.


ಮೇ 13 ರಂದು ಭವ್ಯ ಮೆರವಣಿಗೆ
ಶ್ರೀಮನೃಪ ಶಾಲಿವಾಹನ ಶಕೆ 1948 ನೇ ಪರಾಭವ ನಾಮ ಸಂವತ್ಸರ ವೈಶಾಖ ಬಹುಳ 12ನೇ ದಿನವಾದ ಬುಧವಾರ, ದಿನಾಂಕ 13-05-2026 ರಂದು ಬೆಳಿಗ್ಗೆ 7 ಗಂಟೆಗೆ ಕಲ್ಕರದಿಂದ ಭವ್ಯ ಮೆರವಣಿಗೆ ಮೂಲಕ ಶ್ರೀ ಶನೇಶ್ವರ ದೇವರ ಪಂಚಮುಖಿ ಆಂಜನೇಯ್ಯಸ್ವಾಮಿ ಮೂರ್ತಿಯನ್ನು ಕರೆತರಲಾಗುತ್ತದೆ.
ಮೆರವಣಿಗೆಯಲ್ಲಿ.ಡೊಳ್ಳು ಕುಣಿತ, ಬಾಬಾ ಭಜಂತ್ರಿ ಸೇವೆ, ನಂದಿಕೋಲು ಕುಣಿತ, ಪುರವಂತರ ಸೇವೆ.
ಸಮೇತ ವಿಶೇಷ ಧಾರ್ಮಿಕ ವೈಭವ ಇರಲಿದ್ದು, ಶ್ರೀ ಬಸವರಾಜ ವೀರಗಾಸೆ ಅವರ ತಂಡದ ವತಿಯಿಂದ ಪುರವಂತಿಕೆ ನಡೆಯಲಿದೆ.


ನಂತರ ಕುಂಭೋತ್ಸವ ಹಾಗೂ ಕಳಸ ಮೆರವಣಿಗೆಯೊಂದಿಗೆ ಮುಖ್ಯ ಬೀದಿಗಳ ಮೂಲಕ ಗಂಗಾಸ್ಥಳಕ್ಕೆ ತೆರಳಿ, ಅಲ್ಲಿಂದ ಭವ್ಯ ಶೋಭಾಯಾತ್ರೆಯ ಮೂಲಕ ಮಧ್ಯಾಹ್ನ 12:30ಕ್ಕೆ ದೇವಸ್ಥಾನಕ್ಕೆ ಆಗಮಿಸಲಾಗುವುದು. ಬಳಿಕ ಮಧ್ಯಾಹ್ನ 1 ಗಂಟೆಗೆ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.
ಮೇ 14 ರಂದು ಪ್ರಾಣ ಪ್ರತಿಷ್ಠಾಪನೆ ಗುರುವಾರ ದಿನಾಂಕ 14-05-2026 ರಂದು ಬೆಳಿಗ್ಗೆಯಿಂದಲೇ
ಗೋ ಪೂಜೆ,
ಗಂಗಾಭಾಗೀರಥಿ ಪೂಜೆ
ಗಣಹೋಮ,
ನವಗ್ರಹ ಹಾಗೂ ವಾಸ್ತು ಪ್ರತಿಷ್ಠಾಪನಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
ನಂತರ ಕರ್ಕಾಟಕ ಲಗ್ನದಲ್ಲಿ ಬೆಳಿಗ್ಗೆ 10:44 ರಿಂದ 10:58ರ ಶುಭ ಮುಹೂರ್ತದಲ್ಲಿ ಶ್ರೀ ಶನೇಶ್ವರ ದೇವರ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಲಿದೆ. ಮಧ್ಯಾಹ್ನ 1 ಗಂಟೆಗೆ ಭಕ್ತರಿಗೆ ಮಹಾಪ್ರಸಾದ ವಿತರಣೆ ನಡೆಯಲಿದೆ.
ಭಕ್ತರಲ್ಲಿ ಮನವಿ
ದೇವಸ್ಥಾನ ಸೇವಾ ಸಮಿತಿಯವರು ಮಾತನಾಡಿ, ಇಂದಿರಾನಗರದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶನಿ ಪಂಚಮುಖಿ ಆಂಜನೇಯ್ಯಸ್ವಾಮಿ ದೇವಸ್ಥಾನದ ಕಟ್ಟಡ ನಿರ್ಮಾಣ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಗಳಿಗೆ ಭಕ್ತಾಧಿಗಳ ಧನಸಹಾಯ ಅಗತ್ಯವಿದ್ದು, ಭಕ್ತರು ತನು-ಮನ-ಧನಗಳಿಂದ ಸೇವೆ ಸಲ್ಲಿಸಿ ಶ್ರೀ ಪ್ರಸನ್ನ ಆಂಜನೇಯ್ಯ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದ್ದಾರೆ.
ಪುರೋಹಿತರು ಹಾಗೂ ಸಂಪರ್ಕ ಸಂಖ್ಯೆ ಈ ಧಾರ್ಮಿಕ ಕಾರ್ಯಕ್ರಮದ ಪೂಜಾ ಕೈಂಕರ್ಯವನ್ನು ಶ್ರೀ ವೇ.ಮೂ. ಶಂಕರಾಚಾರ್ಯ ಆಲಂಪಳ್ಳಿ ಅವರು ನೆರವೇರಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಸಂಖ್ಯೆಗಳು:
9741803434, 8310972662, 9686166627, 6360539765, 9663902269, 9110221230
ದೇವಸ್ಥಾನದ ವಿಳಾಸ. ಶ್ರೀ ಶನಿ ಪಂಚಮುಖಿ ಆಂಜನೇಯ್ಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಶ್ರೀ ಮಲ್ಲಯ್ಯಸ್ವಾಮಿ ದೇವಸ್ಥಾನದ ಹತ್ತಿರ,ಇಂದಿರಾ ನಗರ, ವಾರ್ಡ್ ನಂ.13, ಸಿಂಧನೂರು.










