ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ತವರಿನ ಸಂಸ್ಕಾರ, ಗಂಡನ ಸಹಕಾರದಿಂದ ಹೆಣ್ಣು ಸಬಲೀಕರಣ ಹೊಂದಲು ಸಾಧ್ಯ : ಶ್ರೀಮತಿ ಚನ್ನಬಸಮ್ಮ ಮಾಗಡಿ

Advertisement
ಅಗಸ್ಟ್ 26.ಗೊರೇಬಾಳ ಗ್ರಾಮದಲ್ಲಿ ನೊಬೆಲ್ ಪದವಿ ಮಹಾವಿದ್ಯಾಲಯ ಸಿಂಧನೂರು ವತಿಯಿಂದ ಹಮ್ಮಿಕೊಂಡಿರುವ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿರುವ  ಶ್ರೀಮತಿ ಚನ್ನಬಸಮ್ಮ ಪರಶುರಾಮ ಮಲ್ಲಾಪುರ ಮಾಗಡಿ ಅವರು, ಆರೋಗ್ಯವೇ ಭಾಗ್ಯ, ಆರೋಗ್ಯ ಒಂದಿದ್ದರೆ ಬೇರೇನೂ ಬೇಡ ಅದೊಂದೇ ದೊಡ್ಡ ಸಂಪತ್ತು, ಆರೋಗ್ಯದ ಸಂಪತ್ತಿಗಿಂತ ಬೇರೇನೂ ಇಲ್ಲ  ಎಂದು  ಏನ್ ಎಸ್ ಎಸ್ ಶಿಭಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಣ ಪಡೆಯುವ ಉದ್ದೇಶದಿಂದ ಅಧ್ಯಯನದಲ್ಲಿ ತೊಡಗಿದ್ದೆ ಆದ್ರೆ ನೀವು ಕಂಡಿತಾ ಸಾಧಿಸುತ್ತೀರಿ ಎಂದು ಹೇಳಿದರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಯಾವುದನ್ನು ಪ್ರಾರಂಭ ಮಾಡಿರುತ್ತೀರೋ ಅದನ್ನು ನೀವೂ ಪೂರ್ಣಗೊಳಿಸಬೇಕು. ನಾವು ಪ್ರಾರಂಭ ಮಾಡ್ತೀವಿ, ಪೂರ್ಣಗೊಳಿಸದೆ ಪೇಲ್ ಅಗ್ತಿವಿ , ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಮೂಲ ಉದ್ದೇಶವಾಗಿರಬೇಕು ಎಂದು ಸಲಹೆ ನೀಡಿದ್ದಲ್ಲದೆ, ಒಬ್ಬ ಸ್ತ್ರೀ ಈ ಸಮಾಜದಲ್ಲಿ ಎಲ್ಲಾ ಪಾತ್ರಗಳನ್ನು ನಿಭಾಯಿಸುತ್ತಾಳೆ. ಸ್ತ್ರೀಯನ್ನು ಕಾಮನಬಿಲ್ಲು ಗೆ ಹೋಲಿಕೆ ಮಾಡುತ್ತಾ ಕಾಮನಬಿಲ್ಲಿಗೆ ಏಳು ಬಣ್ಣಗಳು ಹೇಗೋ, ಹಾಗೆ ಒಬ್ಬ ಸ್ತ್ರೀ ಯು ಈ ಸಮಾಜದಲ್ಲಿ ಏಳು ಪಾತ್ರಗಳನ್ನು ನಿಭಾಯಿಸುತ್ತಾರೆ ಎಂದರು,ಮಹಿಳಾ ಸಬಲೀಕರಣ ಕುರಿತು ಮಾತನಾಡುತ್ತಾ ಗಂಡನ ಸಹಕಾರ ದಿಂದ ಹೆಣ್ಣು ಅಭಿವೃದ್ದಿ ಹೊಂದಲು ಸಾಧ್ಯ, ತವರ ಮನೆಯ ಸಂಸ್ಕಾರ, ಗಂಡನ ಮನೆಯ ಸಹಕಾರದಿಂದ ಇಂದು ನಾನು ಈ ತವರೂರಲ್ಲಿ ಮಾತನಾಡಲು ಸಾಧ್ಯವಾಗಿದೆ.



ಇಂದಿನ ಕಾರ್ಯಕ್ರಮದಲ್ಲಿ ಶ್ರಿ ಶಿವನಗೌಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಉದ್ಘಾಟಿಸಿ ಈ ಎನ್ ಎಸ್ ಎಸ್ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಒಳ್ಳೆ ಭವಿಷ್ಯವನ್ನು ಸೃಷ್ಟಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ ಎಂದು ಮಾತನಾಡಿದರು.

ಪಂಪಾಪತಿ ಉಪನ್ಯಾಸಕರು ನಾವು ಈ ಎಲ್ಲಾ ಸಂದರ್ಭಗಳಲ್ಲು ಕೂಡ ಮೂರು ವ್ಯಕ್ತಿಗಳನ್ನು ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತ, ಹಾಗೂ ಜ್ಞಾನ ನೀಡುವ ಶಿಕ್ಷಕನನ್ನು ನೆನಪಿಸಬೇಕು ಎಂದರು.

ಶ್ರಿ ಯಂಕೋಬ ಬೂದಿವಾಳ ಅಧ್ಯಕ್ಷತೆಯನ್ನು ವಹಿಸಿ ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಕುಸಿತಿದ್ದಾವೆ ಅದನ್ನು ಸರಿಪಡಿಸುವಂತಹ ಕೆಲಸ ಈ ಎನ್ಎಸ್ಎಸ್ ಮಾಡುತ್ತದೆ ಅಲ್ಲದೆ ಸಂಸಾರದಲ್ಲಿ ಹೆಣ್ಣು ಮತ್ತು ಗಂಡು ಒಂದು ಬಂಡಿಯ ಎರಡು ಚಕ್ರಗಳಂತೆ, ಆ ಸಂಸಾರದ ಒಂದು ಬಂಡಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗಬೇಕು. ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ಶಿಸ್ತು,ಸಮಯ ಪ್ರಜ್ಞೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಂತಹ ಒಂದು ಪ್ರಮುಖ ಕಾರ್ಯಕ್ರಮವಾಗಿದೆ ಎಂದು ಮಾತನಾಡಿದರು. ಅದೇ ರೀತಿಯಾಗಿ ಶಾಂತ ಮಾಲಿಪಾಟೀಲ್ ರವರು ಮಾತನಾಡಿ ಹೆಣ್ಣು ಒಂದು ಸಂಸಾರದ ಕಣ್ಣು, ಹೆಣ್ಣು ಮಕ್ಕಳಿಂದಲೇ ಮನೆಯ ಅಭಿವೃದ್ಧಿ, ಮನೆಗೆ ಬೆಳಕು ಅದಲ್ಲದೆ ಇವತ್ತು ಆಡುಮುಟ್ಟದ ಸೊಪ್ಪಿಲ್ಲ ಹೆಣ್ಣು ಕೆಲಸ ನಿರ್ವಹಿಸದ ಯಾವುದೇ ಕ್ಷೇತ್ರ ಇಲ್ಲ ಎಂದರು. ಪ್ರಾಚಾರ್ಯರಾದ ಆನಂದ್ ಎಸ್, ಶಿವನಗೌಡ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ರಾಗಲಪರ್ವಿ , ಶಿವನಗೌಡ, ಸಣ್ಣ ಶರಣೆ ಗೌಡ, ದೇವಿಂದ್ರ ಗೌಡ ನಾಗರಬಂಚಿ ಗ್ರಾಮ ಪಂಚಾಯತ ಸದಸ್ಯರು, ನಾಗಮ್ಮ ಗಂಡ ಬಸವರಾಜ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು, ಚೆನ್ನಮ್ಮ ಗಂಡ ನರಸರೆಡ್ಡಿ ನಿರ್ದೇಶಕರು ವಿಎಸ್ಎಸ್ಎನ್, ಹುಸೇನಪ್ಪ ಹೆಡಗಿಬಾಳು ನಿರ್ದೇಶಕರು ವಿ ಎಸ್ ಎಸ್ ಏನ್, ಹುಸೇನಪ್ಪ ತಂದೆ ಗಂಗಪ್ಪ ಜಿಲ್ಲಾಧ್ಯಕ್ಷರು ಅ. ಪ್ರಾ. ಶಾಲೆ, ಶರಣಪ್ಪ ತಂದೆ ಈರಪ್ಪ ಎಸ್ ಡಿ ಎಂ ಸಿ ಅಧ್ಯಕ್ಷರು ಸ. ಪ್ರಾ.ಶಾಲೆ ಗೊರೇಬಾಳ, ವೀರೇಶ ಗುಡಿಯಾಳ ವರದಿಗಾರರು ಎಸ್ ಟಿ ವಿ, ಪಂಪಾಪತಿ ಹೂವಿನಬಾವಿ ವರದಿಗಾರರು ಪ್ರಜಾ ಸಾಕ್ಷಿ ದಿನಪತ್ರಿಕೆ, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಹೊನ್ನಪ್ಪ ಬೆಳಗುರ್ಕಿ, ಉಪನ್ಯಾಸಕರಾದ , ಪಂಚಾಕ್ಷರಯ್ಯ, ಜ್ಯೋತಿ, ಸಿ ವಿಶ್ವನಾಥ, ಸಣ್ಣ ಯಲ್ಲಪ್ಪ, ಹನುಮೇಶ ಗುಡುದೂರು, ಕುಮಾರಿ ಝೀನತ್, ಪಂಪಾಪತಿ, ಮುಂತಾದವರು ಇದ್ದರು..

 
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್