ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಪರಭಾಷೆಗಳನ್ನು ಗೌರವಿಸಿ ಕನ್ನಡವನ್ನು ಪ್ರೀತಿಸಿ:ಶಾಂತ ಪಾಟೀಲ್

Advertisement
ಸಿಂಧನೂರು ನವಂಬರ್ 01.ನಗರದ ಎಲ್ ಬಿ ಕೆ ಮತ್ತು ನೋಬೆಲ್ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಿ 50ನೇ ವಸಂತದ ಸಂಭ್ರಮದ ಕನ್ನಡ ರಾಜ್ಯೋತ್ಸವದ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಪರಶುರಾಮಲ್ಲಾಪುರವರು ಧ್ವಜಾರೋಹಣವನ್ನು ನೆರವೇರಿಸಿದರು ಹಾಗೆ ಕನ್ನಡಾಂಬೆಯ ಭಾವರೂಪಕ್ಕೆ ಮಾಲಾರ್ಪಣೆ ಮಾಡಿ ಕನ್ನಡ ನಾಡಿನ ಪರಂಪರೆಯನ್ನು ಬಿಂಬಿಸುವಂತಹ ಕುವೆಂಪು, ಬೇಂದ್ರೆ, ಅಡಿಗರು, ಡಿ.ಎಸ್ ಕರ್ಕಿ , ಮುಂತಾದ ಕನ್ನಡ ಕವಿಗಳು ರಚಿಸಿದ ಕನ್ನಡ ಗೀತೆಗಳಲ್ಲಿ ಮೂಡಿ ಬಂದಿರುವ ಕನ್ನಡಿಗರ ಭಾವನೆಗಳನ್ನು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವಂತಹ ಕನ್ನಡದ ಹಾಡುಗಳನ್ನು ಮಕ್ಕಳಿಗೆ ಕೇಳಿಸಿ, ಹಾಡಿಸಿ ನೃತ್ಯದ ಮೂಲಕ ಸಂಭ್ರಮಿಸಲಾಯಿತು.

 

ಈ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕಿ ಶ್ರೀಮತಿ ಶಾಂತ ಪಾಟೀಲ್ ಅವರು ಮಾತನಾಡಿ ಕನ್ನಡ ನಾಡು ಕನ್ನಡ ಕನ್ನಡಿಗ ಮತ್ತು ಕರ್ನಾಟಕ ಈ ಪದಗಳು ಕನ್ನಡ ಸಾಂಸ್ಕೃತಿಕ ಅಸ್ಮಿತೆಗೆ ಸುದೀರ್ಘವಾದ ಇತಿಹಾಸವಿದ್ದು. ಇಂತಹ ನಾಡಲ್ಲಿ ಪಂಪ, ಪೊನ್ನ, ರನ್ನ, ಕುಮಾರವ್ಯಾಸ ಮುಂತಾದವರು ಕಟ್ಟಿಕೊಟ್ಟ ಕನ್ನಡಿಗರ ಸ್ವಾಭಿಮಾನದ ಕೆಚ್ಚು, ಕನ್ನಡ ನಾಡು, ಕನ್ನಡ ಭಾಷೆ ,ಜಲ, ಬಹುತ್ವ ಸಂಸ್ಕೃತಿಗೆ ಧಕ್ಕೆ ಬರದಂತೆ ಪರಭಾಷೆಗಳನ್ನು ಗೌರವಿಸುತ್ತಾ, ನಮ್ಮ ಕನ್ನಡ ಭಾಷೆಯನ್ನು ತನುಕನ್ನಡ, ಮನ ಕನ್ನಡ, ಎನ್ನುವ ಹಾಗೆ ಸದಾ ಕನ್ನಡದಲ್ಲಿ ಧ್ಯಾನಸ್ಥರಾಗಿ ಇರಬೇಕು. ಈ ಕನ್ನಡ ನಾಡಿನ ಅಸ್ಮಿತೆ ಉಳಿಸಲು ನಾವೆಲ್ಲರೂ ಹೆಚ್ಚೆಚ್ಚು ಕನ್ನಡವನ್ನು ಮಾತನಾಡಬೇಕು ಆ ಮೂಲಕ ಕನ್ನಡವನ್ನು ಬೆಳೆಸಬೇಕು ಕನ್ನಡವೇ ನಮ್ಮ ಉಸಿರಾಗಬೇಕು ಕನ್ನಡ ನಮ್ಮ ಅನ್ನದ ಭಾಷೆವಾಗಬೇಕು, ಉದ್ಯೋಗದ ಭಾಷೆಯಾಗಬೇಕು. ಕೇವಲ ಕನ್ನಡ ಎನ್ನಡ ಎನ್ನದೆ ಅದರಲ್ಲಿ ನಮ್ಮ ಕನ್ನಡ ಕಳೆದುಹೋಗದೆ, ಕನ್ನಡ ಮೈಗಟ್ಟಿದ ಚರ್ಮದಂತೆ ಪ್ರತಿಯೊಬ್ಬ ಕನ್ನಡಿಗನ ಕಣಕಣದಲ್ಲಿ ಕನ್ನಡದ ಕಂಪು ಹೆಸರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
[video width="720" height="1280" mp4="https://badavarabarkolu.com/wp-content/uploads/2023/11/VID-20231101-WA0162.mp4"][/video]

ಈ ಸಂದರ್ಭದಲ್ಲಿ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಿ 50 ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ನೋಬೆಲ್ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಆಶುಭಾಷಣ, ನೃತ್ಯ ,ರಸಪ್ರಶ್ನೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಪ್ರಥಮ, ದ್ವಿತೀಯ ,ತೃತೀಯ, ಸ್ಥಾನವನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.

 

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ಡಾ. ಅರುಣ್ ಕುಮಾರ್ ಬೇರ್ಗಿ ಉಪಾಧ್ಯಕ್ಷರಾದ ಶಂಕರ ಪತ್ತಾರ್ , ಖಜಾಂಚಿಗಳಾದ ಜಯಪ್ಪ ಗೊರೆಬಾಳ, ಪ್ರಾಂಶುಪಾಲರಾದ ಆನಂದ ಎಸ್ , ಎಲ್ ಬಿ ಕೆ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ನಾಗರಾಜ ಮರಕುಂಬಿ ಹಾಗೂ ಉಪನ್ಯಾಸಕರಾದ ಹೊನ್ನಪ್ಪ ಬೆಳಗುರ್ಕಿ ಶಿವರಾಜ, ವಸಂತ ಕುಮಾರ, ಶಿವ ಕುಮಾರ, ವೆಂಕೋಬ, ರವಿ ಸಿಂಧನೂರು, ವಿಶ್ವನಾಥ, ದೇವರಾಜ, ಉಪನ್ಯಾಸಕಿ ಜ್ಯೋತಿ , ಶ್ರೀಮತಿ ಗಿರಿಜಾ ಹಾಗೂ ಸಿಬ್ಬಂದಿಯಯೇತರ ಕೃಷ್ಣ, ಬಸವರಾಜ ಪದವಿ ಪೂರ್ವ ಮತ್ತು ಪದವಿ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್