ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಬಗ್ಗೂರು ಬಸವೇಶ್ವರ ದೇವಸ್ಥಾನದ ದೇವರ ಮನೆಯಲ್ಲಿದ್ದ ಬೆಳ್ಳಿಯ ಬಸವಣ್ಣ ಮೂರ್ತಿ ಕಳ್ಳತನವಾದ

Advertisement
ಏ. ಸಿರುಗುಪ್ಪ ತಾಲೂಕಿನ ಬಗ್ಗುರು ಗ್ರಾಮದ ಪೂಜಾರಿಯಾದ ಮಲ್ಲಿಕಾರ್ಜುನಸ್ವಾಮಿರವರು ಪ್ರತಿ ದಿನ ಬೆಳಿಗ್ಗೆ 6-00 ಗಂಟೆ ಸುಮಾರಿಗೆ ದೇವರ ಮನೆಯ ಹೊರಗಡೆ ಇರುವ ಸಣ್ಣಬಸವಣ್ಣ ಮೂರ್ತಿಯ ಪೂಜೆ ಮಾಡಿ ನಂತರ ದೇವರ ಮನೆಯ ಬೀಗವನ್ನು ಶ್ರೀ.ಹೆಚ್.ಮಲ್ಕಪ್ಪ ತಂದೆ ಮುದುಕಪ್ಪ, ವ: 64 ಗೆ ಕೊಡುತ್ತಿದ್ದ ಪುನಃ ಮಾರನೇ ದಿನ ಬೆಳಿಗ್ಗೆ ಬಂದು ದೇವರ ಮನೆಯ ಬೀಗವನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿ ಸಂಜೆ 6-00 ಗಂಟೆ ಸುಮಾರಿಗೆ ಕೊಡುತ್ತಿದ್ದ. ನಮ್ಮ ಗ್ರಾಮದ ಊರ ಹೊರಗಡೆ ಇರುವ ಶ್ರೀ.ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಮಡಲು ಗ್ರಾಮಸ್ಥರು ಹಾಗೂ ಮನೆ ದೇವರ ಭಕ್ತರು ಸೇರಿಕೊಂಡು 6 ಕೆ.ಜಿ.330 ಗ್ರಾಂ ಅಂದಾಜು 3,23,200=00 ರೂಪಾಯವುಳ್ಳ ಬೆಳ್ಳಿಯ ದೊಡ್ಡಬಸವೇಶ್ವರ ಮೂರ್ತಿಯನ್ನು ಮಾಡಿಸಿರುತ್ತಾರೆ. ಆದರೆ ಮೂರ್ತಿಯನ್ನು ಪ್ರತಿ ಅಮಾವಾಸ್ಯೆಯಂದು ಶ್ರೀ.ಹೆಚ್.ಮಲ್ಕಪ್ಪ ಹತ್ತಿರ ದೇವರ ಮನೆಯ ಬೀಗವನ್ನು ತೆಗೆದುಕೊಂಡು ಬಸವೇಶ್ವರ ದೇವಸ್ಥಾನದ ದೇವರ ಮನೆಯಲ್ಲಿರುವ ಬೆಳ್ಳಿಯ ದೊಡ್ಡ ಬಸವಣ್ಣಮೂರ್ತಿಯನ್ನು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಊರ ಹೊರಗಿನ ಶ್ರೀ.ಬಸವೇಶ್ವರ ದೇವಸ್ಥಾನಕ್ಕೆ ತೆಗೆದುಕೊಂಡು ಪೂಜೆ ಮಾಡಿಸಿ ಸಂಜೆ 6-00 ಗಂಟೆ ಸುಮಾರಿಗೆ ವಾಪಾಸ್ ಮೂರ್ತಿಯನ್ನು ದೇವರ ಮನೆಗೆ ತಂದು ದೇವರ ಮನೆಯ ಒಳಗಡೆ ಇರುವ ಕಬ್ಬಿಣದ ಪಟ್ಟಿಗೆಯಲ್ಲಿ ಇಟ್ಟು ಬೀಗ ಹಾಕಿಕೊಂಡು ವಾಪಾಸ್ ದೇವರ ಮನೆಯ ಬೀಗವನ್ನು ಶ್ರೀ.ಹೆಚ್.ಮಲ್ಕಪ್ಪಗ್ ಪೂಜಾರ್ ಕೊಡುತ್ತಿದ್ದ.

https://youtu.be/_MjPVtkkRyU



ಅದೇ ರೀತಿಯಂತೆ ದಿನಾಂಕ: 22-03-2023 ರಂದು ಅಮಾವಾಸ್ಯೆ ಇದ್ದುದ್ದರಿಂದ ಪೂಜಾರಿಯಾದ ಮಲ್ಲಿಕಾರ್ಜುನಸ್ವಾಮಿ ರವರು ಶ್ರೀ.ಹೆಚ್.ಮಲ್ಕಪ್ಪ ಹತ್ತಿರ ದೇವರ ಮನೆಯ ಬೀಗವನ್ನು ತೆಗೆದುಕೊಂಡು ಬಸವೇಶ್ವರ ದೇವಸ್ಥಾನದ ದೇವರ ಮನೆಯಲ್ಲಿರುವ ಬೆಳ್ಳಿಯ ದೊಡ್ಡ ಬಸವಣ್ಣಮೂರ್ತಿಯನ್ನು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಊರ ಹೊರಗಿನ ಶ್ರೀ.ಬಸವೇಶ್ವರ ದೇವಸ್ಥಾನಕ್ಕೆ ತೆಗೆದುಕೊಂಡು ಸೂಜೆ ಮಾಡಿಸಿ ಸಂಜೆ 6-00 ಗಂಟೆ ಸುಮಾರಿಗೆ ವಾಪಾಸ್ ಬಸವಣ್ಣ ಮೂರ್ತಿಯನ್ನು ದೇವರ ಮನೆಗೆ ತಂದು ದೇವರ ಮನೆಯ ಒಳಗಡೆ ಇರುವ ಕಬ್ಬಿಣದ ಪಟ್ಟಿಗೆಯಲ್ಲಿ ಇಟ್ಟು ಬೀಗ ಹಾಕಿಕೊಂಡು ವಾಪಾಸ್ ದೇವರ ಮನೆಯ ಬೀಗವನ್ನು ಶ್ರೀ.ಹೆಚ್.ಮಲ್ಕಪ್ಪ ಕೊಟ್ಟಿದ್ದ. ದಿನಾಂಕ: 31-03-2023 ರಂದು ಪ್ರತಿ ದಿನದಂತ ಪೂಜಾರಿಯವರು ನನ್ನ ಹತ್ತಿರ ಬೀಗವನ್ನು ತೆಗೆದುಕೊಂಡು ದೇವರ ಮನೆಗೆ ಹೋಗಿದ್ದು ದೇವರ ಮನೆಗೆ ಹಾಕಿದ ಬೀಗವನ್ನು ಯಾರೂ ಮುರಿದಿದ್ದನ್ನು ಕಂಡು ಗಾಬರಿಯಾಗಿ ನನಗೆ ಬಂದು ತಿಳಿಸಿದ್ದರಿಂದ ನಾನು ಮತ್ತು ಪೂಜಾರಿಯವರು ಹಾಗೂ ಹೆಚ್, ನಿಜಲಿಂಗಪ್ಪ ಮತ್ತು ಎಪ್ಪರವರು ದೇವರ ಮನೆಗೆ ಹೋಗಿ ನೋಡಲು ದೇವರ ಮನೆಗೆ ಹಾಕಿದ ಬೀಗವು ಮುರಿದಿದ್ದು ಒಳಗಡೆ ಹೋಗಿ ಕಬ್ಬಿಣದ ಪೆಟ್ಟಿಗೆಯನ್ನು ನೋಡಲು ಕಬ್ಬಿಣದ ಲಾಕ್ ಮುರಿದು ಓಪನ್ ಆಗಿದ್ದು ಒಳಗಡೆ ಇರುವ ದೊಡ್ಡಬಸವಣ್ಣಮೂರ್ತಿ ಮತ್ತು ದೇವರ ಮನೆಯಲ್ಲಿದ್ದ ಎರಡು ಸಣ್ಣ ಬಸವಣ್ಣಮೂರ್ತಿಗಳು ಅಂದಾಜು 1.ಕಿ.ಜಿ.75 ಗ್ರಾಂ ಅಂದಾಜು ಬೆಲೆ 70,000=00 ರೂ ಕಾಣಲಿಲ್ಲ.



ಆದ್ದರಿಂದ ದಿನಾಂಕ: 30-03-2023 ಸಂಜೆ 6-00 ಗಂಟೆಯಿಂದ ದಿನಾಂಕ: 31-03-2023 ಬೆಳಿಗ್ಗೆ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಗ್ರಾಮದ ದೇವರ ಮನೆಗೆ ಹಾಕಿದ ಬೀಗವನ್ನು ಮುರಿದು ಒಳಗಡೆ ನುಗ್ಗಿ ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಬೆಳ್ಳಿಯ ದೊಡ್ಡಬಸವಣ್ಣ ಮೂರ್ತಿ 6 ಕೆ.ಜಿ.330 ಗ್ರಾಂ ಅಂದಾಜು 2,53,000=00 ರೂ ಗಳು ಹಾಗೂ ದೇವರ ಮನೆಯ ಒಳಗಡೆ ಇದ್ದ ಎರಡು ಸಣ್ಣ ಬೆಳ್ಳಿಯ ಬಸವಣ್ಣಮೂರ್ತಿಗಳು ಅಂದಾಜು 1.ಕೆ.ಜಿ.750 ಗ್ರಾಂ. ಅಂದಾಜು ಬೆಲೆ 70,000=00 ರೂ ಒಟ್ಟು 3 ಬೆಳ್ಳಿಯ ಬಸವಣ್ಣಮೂರ್ತಿಗಳು 8 ಕೆ.ಜಿ.80 ಗ್ರಾಂ ಅಂದಾಜು ಬೆಲೆ 3,23,200=00 ರೂ ಗಳನ್ನು ಕಳ್ಳತನ ಮಾಡಿದ್ದು ಬೆಳ್ಳಿಯ 3 ಬಸವಣ್ಣಮೂರ್ತಿಗಳನ್ನು ಪತ್ತೆ ಮಾಡಿ ಹುಡುಕಿಕೊಡಬೇಕೆಂದು ಹಾಗೂ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಠಾಣೆಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಅನ್ವಯ ಪ್ರಕರಣ ದಾಖಲಾಗಿರುತ್ತದೆ ಮತ್ತು ಅತಿ ಶೀಘ್ರದಲ್ಲಿ ತನಿಖೆ ಮಾಡಲಾಗುವುದೆಂದು ಪೊಲೀಸ ಅಧಿಕಾರಿಗಳು ತಿಳಿಸಿರುತ್ತಾರೆ
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್