ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಐದು ವ್ಯಕ್ತಿಗಳನ್ನು ಕೊಲೆ ಮಾಡಿದ ಮೂರು ಜನ ಆರೋಪಿತರಿಗೆ ಮರಣ ದಂಡನೆ 09 ಜನ ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ

Advertisement
ಏಪ್ರಿಲ್ 08
ಸಿಂಧನೂರ್. ದಿನಾಂಕ:11-07-2020 ರಂದು ಸಂಜೆ 04-45 ಗಂಟೆ ಸುಮಾರಿಗೆ ಎಲ್ಲಾ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಸಿಂಧನೂರು ನಗರದ ಸುಕಾಲಪೇಟೆಯ ಹಿರೆಲಿಂಗೇಶ್ವರ ಕಾಲೋನಿಯ ಕೊಲೆಯಾದ ಈರಪ್ಪನ ಮನೆಯ ಮುಂದೆ ಬಂದು ಎಲ್ಲಾ ಆರೋಪಿತರು ಒಳಸಂಚು ರೂಪಿಸಿ 01 ರಿಂದ 03 ನೇ ಆರೋಪಿತರು ಬಡಿಗೆಗಳಿಂದ ಕೊಲೆಯಾದ ಈರಪ್ಪ ಆತನ ಹೆಂಡತಿ ಸುಮಿಂತ್ರಮ್ಮ, ಈವರ ಮಕ್ಕಳಾದ ನಾಗರಾಜ, ಹನುಮೇಶ ಹಾಗೂ ಮಗಳಾದ ಶ್ರೀದೇವಿ ಇವರನ್ನು ಹೊಡೆದು ಕೊಲೆ ಮಾಡಿದ್ದಲ್ಲದೇ ಮೃತ ಈರಪ್ಪನ ಸೊಸೆಯಾದ ರೇವತಿ ಹಾಗೂ ಆತನ ಮಗಳಾದ ತಾಯಮ್ಮ ಇವರ ಮೇಲೆ ಮಾರಾಣಾಂತಿಕೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರಿಂದ ಅವರ ವಿರುದ್ಧ ಸಿಂಧನೂರು ನಗರ ಠಾಣೆಯಲ್ಲಿ ಸದರಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆರೋಪಿತರ ವಿರುದ್ಧ ಅಂದಿನ ತನಿಖಾಧಿಕಾರಿಗಳಾದ ಶ್ರೀ ಬಾಲಚಂದ್ರ ಲಖಂ ಸಿ.ಪಿ.ಐ ಇವರು ತನಿಖೆ ಕೈಗೊಂಡು ದೋಷರೋಪಣ ಪತ್ರ ಸಲ್ಲಿಸಿರುತ್ತಾರೆ. ಸದರಿ ಪ್ರಕರಣದಲ್ಲಿ ಮೃತ ಈರಪ್ಪನ ಮಗನಾದ ಮೌನೇಶ ಈತನು 1ನೇ ಆರೋಪಿಯ ಮಗಳಾದ ಮಂಜುಳಾ ಇವಳನ್ನು ಪ್ರೀತಿಸಿ ಮದುವೆಯಾದ ದ್ವೇಷದಿಂದ ಆರೋಪಿತರಾದ 1. ಸಣ್ಣ ಪಕೀರಪ್ಪ ತಂದೆ ಸೋಮಪ್ಪ ಕೊನದವರು, 2.ಅಮ್ಮಣ್ಣ ,ಅಂಬಣ್ಣ ತಂದೆ ಸೋಮಪ್ಪ ಕೊನದವರ, 3. ಸೋಮಶೇಕರ್ ತಂದೆ ಹೀರೆಪಕೀರಪ್ಪ, ದೊಡ್ಡ ಪಕೀರಪ್ಪ ಕೊನದವರು, 4. ರೇಖಾ ಸಿದ್ದಮ್ಮ ಗಂಡ ಸಣ್ಣ ಪಕೀರಪ್ಪ ಕೊನದವರು, 5. ಗಂಗಮ್ಮ ತಂದೆ ಅಂಬಣ್ಣ ಹೆಬ್ಬಾಳ, 6.ದೊಡ್ಡ ಪಕೀರಪ್ಪ ತಂದೆ ಸೋಮಪ್ಪ ಕೊನದವರು, 7. ಹನುಮಂತ ತಂದೆ ಸೋಮಪ್ಪ ಕೊನದವರು, 8.ಹೋನುರಪ್ಪ ತಂದೆ ಸೋಮಪ್ಪ ಕೊನದವರು, 9.ಬಸಲಿಂಗಪ್ಪ ತಂದೆ ದೊಡ್ಡ ಪಕೀರಪ್ಪ ಕೊನದವರು, 10.ಅಮರೇಶ್ ತಂದೆ ಮಲ್ಲಪ್ಪ, 11.ಶಿವರಾಜ ತಂದೆ ಅಂಬಣ್ಣ ಹೆಬ್ಬಾಳ, 12.ಪರಸಪ್ಪ ತಂದೆ ಜಂಬುಲಿಂಗಪ್ಪ ಸಿದ್ದಾಪುರ್ ಇವರು ದಿನಾಂಕ:11-07-2020 ರಂದು ಸಂಜೆ 04-45 ಗಂಟೆ ಸುಮಾರಿಗೆ ಎಲ್ಲಾ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಸಿಂಧನೂರು ನಗರದ ಸುಕಾಲಪೇಟೆಯ ಹಿರೆಲಿಂಗೇಶ್ವರ ಕಾಲೋನಿಯ ಕೊಲೆಯಾದ ಈರಪ್ಪನ ಮನೆಯ ಮುಂದೆ ಬಂದು ಎಲ್ಲಾ ಆರೋಪಿತರು ಒಳಸಂಚು ರೂಪಿಸಿ 01 ರಿಂದ 03 ನೇ ಆರೋಪಿತರು ಬಡಿಗೆಗಳಿಂದ ಕೊಲೆಯಾದ ಈರಪ್ಪ ಆತನ ಹೆಂಡತಿ ಸುಮಿಂತ್ರಮ್ಮ, ಈವರ ಮಕ್ಕಳಾದ ನಾಗರಾಜ, ಹನುಮೇಶ ಹಾಗೂ ಮಗಳಾದ ಶ್ರೀದೇವಿ ಇವರನ್ನು ಹೊಡೆದು ಕೊಲೆ ಮಾಡಿದ್ದಲ್ಲದೇ ಮೃತ ಈರಪ್ಪನ ಸೊಸೆಯಾದ ರೇವತಿ ಹಾಗೂ ಆತನ ಮಗಳಾದ ತಾಯಮ್ಮ ಇವರ ಮೇಲೆ ಮಾರಾಣಾಂತಿಕೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರಿಂದ ಅವರ ವಿರುದ್ಧ ಸಿಂಧನೂರು ನಗರ ಠಾಣೆಯಲ್ಲಿ ಸದರಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆರೋಪಿತರ ವಿರುದ್ಧ ಅಂದಿನ ತನಿಖಾಧಿಕಾರಿಗಳಾದ ಶ್ರೀ ಬಾಲಚಂದ್ರ ಲಖಂ ಸಿ.ಪಿ.ಐ ಇವರು ತನಿಖೆ ಕೈಗೊಂಡು ದೋಷರೋಪಣ ಪತ್ರ ಸಲ್ಲಿಸಿರುತ್ತಾರೆ.

ಪ್ರಕರಣದ ವಾದ ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಧೀಶರಾದ ಶ್ರೀ ಬಿ.ಬಿ.ಜಕಾತಿ, 3 ನೇ ಅಧಿಕ ಜಿಲ್ಲಾ & ಸತ್ರ ನ್ಯಾಯಾಲಯ ರಾಯಚೂರು, ಪೀಠಾಸೀನ ಸಿಂಧನೂರು ಇವರು ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿ ದಿನಾಂಕ:08-04-2025 ರಂದು 01 ರಿಂದ 03 ನೇ ಆರೋಪಿತರಿಗೆ ಮರಣ ದಂಡನೆ (ಗಲ್ಲು ಶಿಕ್ಷೆ) ಹಾಗೂ ತಲಾ 47,000 ರೂ ದಂಡ ಹಾಗೂ 04 ರಿಂದ 12 ನೇ ಆರೋಪಿತರಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ತಲಾ 97,500 ರೂ ದಂಡ ವಿಧಿಸಿ ಮಾನ್ಯ ನ್ಯಾಯಾಲಯವು ತೀರ್ಪು ನೀಡಿದ್ದು ಇರುತ್ತದೆ. ಸರಕಾರದ ಪರವಾಗಿ ಆರ್.ಎ.ಗಡಕರಿ ಸರಕಾರಿ ಅಭಿಯೋಜಕರು ವಾದ ಮಂಡಿಸಿರುತ್ತಾರೆ ಹಾಗೂ ಶ್ರೀಮತಿ ಕೆಂಚಮ್ಮ ಮಹಿಳಾ ಪಿ.ಸಿ ಹಾಗೂ ಶ್ರೀ ಬೂದೆಪ್ಪ ಪಿಸಿ ರವರು ಸಾಕ್ಷಿದಾರರನ್ನು ಸೂಕ್ತ ಸಮಯದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ ಆರ್.ಎ.ಗಡಕರಿ ಸರಕಾರಿ ಅಭಿಯೋಜಕರು ತಿಳಿಸಿದ್ದಾರೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್