ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಪೊಲೀಸರ ಭರ್ಜರಿ ಬೇಟೆ 1320000 ಬೆಲೆಯ ಚಿನ್ನಾಭರಣ ಹಣ ವಶ

Advertisement
ರಾತ್ರಿ ಕನ್ನಾ ಕಳವು ಕಳ್ಳರ ಬಂಧನ ಬಂಗಾರ ಆಭರಣಗಳು ಮತ್ತು ನಗದು ಹಣ ವಶ

ಸಿಂಧನೂರು ಅಕ್ಟೋಬರ್ 9. ಪಗಡದಿನ್ನಿ ಪೈ ಕ್ಯಾಂಪಿನಲಿನ ವಿ.ವಾಸು ತಂದೆ ತಂದೆ ಪ್ರಸಾದರಾವ್ ಇವರ ಮನೆಯಲ್ಲಿ ದಿನಾಂಕ: 03-102023 ರಂದು 6-30 ಸಂಜೆ ದಿಂದ 7-30 PM ಗಂಟೆಯ ಮದ್ಯದ ಅವಧಿಯಲಿ, ಮನೆಯ ಹಿಂಬಂದಿಯ ಬಾಗಿಲನ್ನು ಜೋರಾಗಿ ತಳ್ಳಿ, ಒಳಗೆ ಪ್ರವೇಶಿಸಿ ಬೆಡ್ ರೂಮಿನಲ್ಲಿದ್ದ ತಿಜುರಿ ಬೀಗ ತೆಗೆದು ಅದರಲ್ಲಿದ್ದ

1) ಒಟ್ಟು 60 ಗ್ರಾಂ ತೂಕದ 04 ಬಂಗಾರದ ಬಳೆಗಳು ಅಂಕಿರೂ.2,00,000,

2) 50 ಗ್ರಾಂ ತೂಕದ ಬಂಗಾರದ ನೆಕ್ರೆಸ್ ಚೈನ್ ಅಂಕಿರೂ.1,80,000,

3) 20 ಗ್ರಾಂ ತೂಕದ ಬಂಗಾರದ ಬ್ರಾಸಲೆಟ್ ಅಂಕಿರೂ.75,000,

4) 30 ಗ್ರಾಂ ತೂಕದ ಕರಿಮಣಿಯ ಬಂಗಾರದ ಸರ ಅಂಕಿರೂ.90,000,

5)12 ಗ್ರಾಂ ತೂಕದ ಬಂಗಾರದ ಸರ ಅಂಕಿರೂ.40,000,

6) ಕಿವಿಯಲಿ ಧರಿಸುವ 30 ಗ್ರಾಂ ತೂಕದ ಬಂಗಾರದ ಓಲೆಗಳು ಅಂಕಿರೂ.95,000,

7) ಕೈ ಬೆರಳಲ್ಲಿ ಧರಿಸುವ ಒಟ್ಟು 12 ಗ್ರಾಂ ತೂಕದ 03 ಬಂಗಾರದ ಉಂಗುರುಗಳು ಅಂಕಿರೂ.40,000, 

 

8) ನಗದು ಹಣ ರೂ.35,000, ಹೀಗೆ ಒಟ್ಟು 21.4 ತೊಲೆ ಬಂಗಾರ & ನಗದು ಹಣ ಸೇರಿ ಅಂಕಿರೂ.7,55,000/ ಬೆಲೆಬಾಳುವವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ವಿ.ವಾಸು ರವರುಕೊಟ್ಟ ದೂರಿನ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮಾರ್ಗದರ್ಶನದಲ್ಲಿ ಶ್ರೀ ಬಿ.ಎಸ್ ತಳವಾರ ಪೊಲೀಸ್ ಉಪಾಧೀಕ್ಷಕರು ಸಿಂಧನೂರು ರವರ ನೇತೃತ್ವದಲ್ಲಿ ಶ್ರೀ ವೀರಾರೆಡ್ಡಿ ಹೆಚ್, ಸಿಂಧನೂರು ಗ್ರಾಮೀಣ ವೃತ್ತ ನಿರೀಕ್ಷಕರು, ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ರವರುಗಳಾದ ಶ್ರೀ ಭರತ್ ಪ್ರಕಾಶ ಡಿ.ಪಿ, ಚಂದ್ರಶೇಖರ ಹಿರೇಮಠ, ಪ್ರಹ್ಲಾದ ನಾಯ್ಕ ಹಾಗೂ ಅವರ ಸಿಬ್ಬಂದಿಯವರಾದ ಮಲಪ್ಪ ನಾಗರಾಳ ಹೆಚ್ ಸಿ 196, ಗೋಪಾಲ ಪಿಸಿ 679, ಅನಿಲಕುಮಾರ ಪಿಸಿ 447, ಶಿವಲಿಂಗಪ್ಪ ಹೆಚ್ ಸಿ 167, ತಿಪ್ಪಣ ಪಿಸಿ 324, ಸಂಗನಗೌಡ ಪಿಸಿ 498 ಸಿಂಧನೂರು ನಗರ ಠಾಣೆ ಹಾಗೂ ಸಂಗಮೇಶ ಚಾಲಕ ಹಾಗೂ ಅಜೀಂ ಸಿಡಿಆರ್ ಸೆಲ್ DPO ರಾಯಚೂರು ರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಸದರಿ ತಂಡದವರು ದಿನಾಂಕ: 08-10-2023 ರಂದು ಆರೋಪಿತರಾದ 1), ಸೋಮಣ ತಂದೆ ಶಿವರಾಯಪ್ಪ, ವಯ 20 ವರ್ಷ, ಮಾದಿಗ, ಕೂಲಿಕೆಲಸ ಸಾ:ಬೇಡರ ಕಾರಲಕುಂಟಿ, ತಾ:ಮಸಿ 2) ಬಸವರಾಜ ತಂದೆ ಆಂಥೋನಿ, ವಯ31, ಜಾ: ಪ.ಜಾ(ಮಾದಿಗ), ಉನೆಲುಕೊಯ್ಯುವ ಮಷಿನ್ ಆಪರೇಟರ್, ಸಾ: ಪಗಡದಿನ್ನಿ ಪೈ ಕಾಂಪ್, ತಾ: ಸಿಂಧನೂರು ಇವರುಗಳನ್ನು ದಸ್ತಗಿರಿ ಮಾಡಿ ಯೋಗ್ಯ ವಿಚಾರಣೆಗೊಳಪಡಿಸಿದ್ದು, ಸದರಿಯವರು ಈ ಪ್ರಕರಣದಲ್ಲಿ ರಾತ್ರಿ ಕನ್ನಾ ಕಳುವು ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಸದರಿಯವರಿಂದ ಕಳುವಾದ ಎಲಾ ಒಟ್ಟು 22 ತೊಲೆಯ ಬಂಗಾರದ ಆಭರಣಗಳು ಅಂಕಿರೂ,13,20,000/- ಬೆಲೆಬಾಳುವದನ್ನು ವಶಪಡಿಸಿಕೊಳ್ಳಲಾಗಿದೆ, ಸದರಿ ತಂಡದ ಕಾರ್ಯವನ್ನು ಶ್ರೀ ನಿಖಿಲ್.ಬಿ IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ಹಾಗೂ ಶ್ರೀ ಶಿವಕುಮಾರ್.ಆರ್ KSPS ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರಾಯಚೂರು ರವರು ಶಾಘಿಸಿ ಬಹುಮಾನ ಘೋಷಿಸಿರುತ್ತಾರೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್