ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಲಿಂಗಸುಗೂರು ಭೂಮಾಪನ ಸಹಾಯಕ ನಿರ್ದೇಶಕರ ಕಾರ್ಯಾಲಯದ ಭೂಮಾಪಕ ಲೋಕಾಯುಕ್ತ ಬಲೆಗೆ

Advertisement
ರಾಯಚೂರು.ಅ.೦೩ ಲಿಂಗಣ್ಣ ತಂದೆ ಲಿಂಗಪ್ಪ ಸಾ.ಹಿರೇಬಾದರದಿನ್ನಿ ರವರು ಅ.೦೨ ರಂದು ಬೆಳಿಗ್ಗೆ ೫:೩೦ ಗಂಟೆಗೆ ನೀಡಿದ ದೂರಿನಲ್ಲಿ ಸಾಯಿರಾಮ್ ರವರ ಮಾಲೀಕತ್ವದಲ್ಲಿರುವ ಲಿಂಗಸುಗೂರು ತಾಲೂಕಿನ ಗರುಗುಂಟಾ ಗ್ರಾಮದ ೬ ಎಕರೆ ೩೭ ಗುಂಟೆ ಜಮೀನಿನಲ್ಲಿ ೩೨ ಗುಂಟೆ ಜಮೀನನ್ನು ವ್ಯಕ್ತಿಯ ಪತ್ನಿಯ ಮತ್ತು ತಮ್ಮನ ಹೆಸರಿನಲ್ಲಿ ಖರೀದಿ ಮಾಡಿದ್ದು, ಈ ಜಮೀನಿನ ೧೧(ಇ) ನಕ್ಷೆಗಾಗಿ ಅರ್ಜಿಯನ್ನು ಹಾಕಿದ್ದು, ಪ್ರವೀಣ್ ಕುಮಾರ ಭೂ ಮಾಪಕರು ಸರ್ವೆ ಇಲಾಖೆ ಲಿಂಗಸೂಗೂರು ರವರು ಈ ಜಮೀನು ಅಳತೆ ಮಾಡಿಕೊಂಡು ಹೋಗಿದ್ದು, ನಕ್ಷೆಯ ಕೆಲಸ ಮಾಡಿಕೊಡಲು ೨೦,೦೦೦ರೂ. ಗಳ ಲಂಚದ ಹಣಕ್ಕೆ ಬೇಡಿಕೆಯಿಟ್ಟಿರುವ ದೂರಿನ ಮೇಲಿಂದ ಠಾಣಾ ಅಪರಾಧ ಸಂಖ್ಯೆ.೦೪/೨೦೨೩ ಕಲಂ ೭(ಎ) ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ ೧೯೮೮ ತಿದ್ದುಪಡಿ ೨೦೧೮ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ ಎಂದು ಕರ್ನಾಟಕ ಲೋಕಾಯುಕ್ತ, ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಅ.೦೨ ರಂದು ಸಂಜೆ ಪ್ರವೀಣ್ ಕುಮಾರ, ಭೂ ಮಾಪಕರು ರವರು ಟ್ರಾö್ಯಪ್ ಹಣ ೧೦,೦೦೦ರೂ.ಗಳ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕರಾದ ಡಾ.ರಾಮ ಎಲ್ ಅರಸಿದ್ದಿ, ಕರ್ನಾಟಕ ಲೋಕಾಯುಕ ರವರ ಮಾರ್ಗದರ್ಶನದಲ್ಲಿ ಕರ್ನಾಟಕ ಲೋಕಾಯುಕ್ತ ರಾಯಚೂರು ಪೊಲೀಸ್ ಠಾಣೆಯ ಅಧಿಕಾರಿಗಳಾದ ಹಣಮಂತರಾಯ, ಡಿವೈಎಸ್‌ಪಿ ಪಿಐ ಗಿರೀಶ್ ರೋಡಕರ್, ಚಂದ್ರಪ್ಪ ಈಟಿ, ಪಿಐ, ರಾಜೇಶ ಬಟಗುರ್ಕಿ ಪಿಐ ಹಾಗೂ ಸಿಬ್ಬಂದಿಯವರಾದ ಶಿವರಾಮಸ್ವಾಮಿ ಸಿಹೆಚ್‌ಸಿ , ವಿಜಯಕುಮಾರ್ ಸಿಹೆಚ್‌ಸಿ, ಗೋಪಾಲ್ ಪವರ ಸಿಹೆಚ್‌ಸಿ, ಏಕಾಂಬರನಾಥ ಸಿಹೆಚ್‌ಸಿ, ನರಸಪ್ಪ ಸಿಪಿಸಿ, ತಿಪ್ಪಣ ಸಿಪಿಸಿ, ಗೋಪಾಲ್ ಸಿಪಿಸಿ, ಚನ್ನವೀರ ಸಿಹೆಚ್‌ಸಿ, ಗಣೇಶ ಗೌಡ ಸಿಪಿಸಿ, ಶರಣಬಸವ ಎಪಿಸಿ, ಬಸಯ್ಯಸ್ವಾಮಿ ಎಪಿಸಿ ರವರುಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ. ಆಪಾದಿತನನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ, ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್