ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ವಸತಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ವಿರುದ್ದ ಕಲಬುರಗಿ ಹೈಕೋರ್ಟನಲ್ಲಿಯ 2019ರ ರಿಟ್ ಪೆಟಿಷನ್‍ನಂತೆ 13-4-2023ರ ಆದೇಶ

Advertisement

ಏಪ್ರಿಲ್ 14.ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಧನೂರು ನಗರಸಭೆ ವ್ಯಾಪ್ತಿಯ ಸರ್ವೆ ನಂಬರು 17 ಏಳರಾಗಿಕ್ಯಾಂಪನಲ್ಲಿ 2011ರಲ್ಲಿ ಬಡವ, ನಿರ್ಗತಿಕರಿಗಾಗಿ ಹಂಚಿಕೆಯಾದ ನಿವೇಶನಗಳಲ್ಲಿ ಬರೋಬ್ಬರಿ ಅರ್ಧದಷ್ಟು ಅಂದರೆ 190ನಿವೇಶನಗಳು ಕಾನೂನುಬಾಹಿರ ಹಂಚಿಕೆಯೆಂದು ಗೌರವಾನ್ವಿತ ಲೋಕಾಯುಕ್ತರು 2016ರಲ್ಲಿಯೇ ನೀಡಿದ್ದ ತೀರ್ಪನ್ನು ಕಾರ್ಯಗತ ಮಾಡದೆ ಸಂಬಂಧಿಸಿದ ಎಲ್ಲಾ 13 ಅಧಿಕಾರಿಗಳ ವಿರುದ್ದ 2019ರ ಮಾರ್ಚನಲ್ಲಿ ಲೋಕಾಯುಕ್ತ ದೂರುದಾರನಾದ ಯಶವಂತಕೋವಿ ಕಲಬುರಗಿ ಹೈಕೋರ್ಟನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರ ನಿಮಿತ್ಯ ಹೈಕೋರ್ಟ ಈ ಹಿಂದೆಯೇ ಅಫಿಡೆವಿಟ್ ಸಲ್ಲಿಸಲು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮತ್ತು ರಾಜೀವಗಾಂಧಿ ಗ್ರಾ.ವಸತಿನಿಮಗ ನಿಯಮಿತದ ಎಂ.ಡಿಯವರಿಗೆ ಸೂಚಿಸಿದ್ದರೂ ಅವರೆಲ್ಲರೂ ನಿರ್ಲಕ್ಷ್ಯವಹಿಸಿದ್ದರಿಂದ ಕೊನೆಗೆ 5000/- ರೂ.ಗಳ ಮೊತ್ತದೊಂದಿಗೆ ಅಫಿಡೆವಿಟ್ ಸಲ್ಲಿಸಲು ಕೊನೆ ಅವಕಾಶವೆಂದು ಖಡಕ್ಕಾಗಿ ಗಡುವನ್ನು ದಿನಾಂಕ 13-4-2023 ಎಂದು ನೀಡಿತ್ತು.

Advertisement


ಈ ನಿಮಿತ್ಯ ಎಲ್ಲಾ 11 ಮೇಲಾಧಿಕಾರಿಗಳಿಗೆ ನೀಡಿದ್ದರಿಂದ ಸದರಿ ದಿನಾಂಕದಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವಿಧಾನಸೌಧ ಬೆಂಗಳೂರು, ಸರ್ಕಾರದ ಕಾರ್ಯದರ್ಶಿಗಳು ನಗರಾಭಿವೃದ್ದಿ ಇಲಾಖೆ ವಿಕಾಸಸೌಧ ಬೆಂಗಳೂರು, ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಪ್ರಧಾನ ಕಾರ್ಯದರ್ಶಿಗಳು ವಸತಿ ಇಲಾಖೆ ಬೆಂಗಳೂರು, ಅಧಿನ ಕಾರ್ಯದರ್ಶಿ – 2 ವಸತಿ ಇಲಾಖೆ ಬೆಂಗಳೂರು, ಅಧಿನ ಕಾರ್ಯದರ್ಶಿ – 3 ವಸತಿ ಇಲಾಖೆ ಬೆಂಗಳೂರು, ಪ್ರಾದೇಶಿಕ ಆಯುಕ್ತರು ಕಲಬುರಗಿ ವಿಭಾಗ ಕಲಬುರಗಿ, ರಾಯಚೂರು ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಲಿಂಗಸಗೂರು ಉಪವಿಭಾಗ ಲಿಂಗಸಗೂರು, ತಹಶೀಲ್ದಾರರು ಸಿಂಧನೂರು, ಪೌರಾಯುಕ್ತರು ನಗರಸಭೆ ಸಿಂಧನೂರು ಎಲ್ಲಾ 11 ಜನ ಮೇಲಾಧಿಕಾರಿಗಳೆಲ್ಲ ಖುದ್ದು ಹಾಜರಿದ್ದು ಗೌರವಾನ್ವಿತ ನ್ಯಾಯಾಧೀಶರು ಆದೇಶದಂತೆ 5000/- ರೂ.ಗಳನ್ನು ನ್ಯಾಯಾಲಯಕ್ಕೆ ಪಾವತಿಸುವುದರ ಜೊತೆಗೆ ರಿಜಿಸ್ಟ್ರಿಯಲ್ಲಿ ಅಫಿಡೆವಿಟ್ ಅನ್ನು ಸಲ್ಲಿಸಿರುತ್ತಾರೆ.



ಸಲ್ಲಿಕೆಯನ್ನು ಗಮನಿಸಲಾಗಿದೆ. ಕಾರಣ ಪಟ್ಟಿಯಲ್ಲಿ ಪ್ರತಿವಾದಿ ನಂ. 4 ಪರ ಹಾಜರಿರುವ ವಕೀಲರಾದ ಶ್ರೀ ಅಶೋಕ ಟಿ. ಕಟ್ಟಿಮನಿ ಅವರ ಹೆಸರು ತೋರಿಸಲು ಕಛೇರಿಗೆ ಸೂಚಿಸಿರುತ್ತಾರೆ. ಹಾಗೆಯೇ ಪ್ರಕರಣವನ್ನು 12-7-2023ಕ್ಕೆ ಗೌರವಾನ್ವಿತರು ಮುಂದೂಡಿರುವುದಿದೆ.

Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್