
ರೈತರು ಗದ್ದೆ ಹೊಲ-ತೋಟಗಳಿಗೆ ಕೃಷಿ ಕೆಲಸ ಕಾರ್ಯಗಳಿಗೆ ಹೋಗಲು ಭಯಪಡುವಂತಾಗಿದೆ. ಬೆಳಗ್ಗೆ ಹಸು ಒಂದನ್ನು ತಿಂದು ಹಾಕಿದ್ದು ಕುರಿ, ಮೇಕೆ, ಸಾಕು ನಾಯಿ, ಕರುಗಳನ್ನು ಧನು ಕರುಗಳನ್ನು ಸಾಕು ಅಂತ ರೈತರು ನಿದ್ದೆಗೆಡುವಂತಾಗಿದೆ, ಗ್ರಾಮಸ್ಥರು ಹೊಲ ತೋಟಗಳಿಗೆ ನೀರು ಹಾಯಿಸಲು ಹಾಗೂ ತಮ್ಮ ದನ, ಕುರಿ, ಮೇಕೆಗಳನ್ನು ಮೇಯಿಸಲು ಭಯಪಡುತ್ತಿದ್ದಾರೆ. ಚಿರತೆ ದಾಳಿ ಪ್ರಕರಣ ನಡೆಯುತ್ತಿದ್ದು ದಿನನಿತ್ಯ ಭಯದ ವಾತಾವರಣ ನಿರ್ಮಾಣವಾಗಿದೆ.

ಒಟ್ಟಾರೆ ಚಿರತೆಗಳ ಕಾಟದಿಂದ ರೌಡಕುಂದ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ರೈತರು, ಸಾರ್ವಜನಿಕರು, ಶಾಲಾ ಮಕ್ಕಳು ಕಂಗಾಲಾಗಿದ್ದು ಕೂಡಲೆ ಅರಣ್ಯ ಇಲಾಖೆಯವರು ಬೋನ್ ಇಟ್ಟು ಚಿರತೆಗಳ ಹಾವಳಿ ತಡೆಗಟ್ಟಿ ನಿರ್ಭಯದಿಂದ ಓಡಾಡುವಂತೆ ಮಾಡಬೇಕಿದೆ. ಇಲ್ಲವಾದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.













