ಇದಿಷ್ಟು ಒಂದೇಡೆಯಾದರೆ, ಇನ್ನು ಮುಂದಿನ ಹಂತಕ್ಕೆ ಈ ಪತ್ರಿಕೆ ಹೋಗಿ, ಎಲ್ಲವನ್ನು ಸಮಗ್ರವಾಗಿ ಸಾರ್ವಜನಿಕರಿಂದ ವಿವರ ಪಡೆದುಕೊಂಡಾಗ ಆಶ್ಚರ್ಯ ಮತ್ತು ಆಘಾತಕಾರಿ ವಿಷಯ ತಿಳಿದು ಬಂದಿದೆ. ಪಡಿತರ ವ್ಯವಸ್ಥೆ ಜಾರಿಗೆ ಬಂದಾಗಿನಿAದ ಸಿಂಧನೂರು ತಾಲೂಕಿನಲ್ಲಿ ಪಡಿತರ ಧಾನ್ಯಗಳು ನ್ಯಾಯ ಬೆಲೆ ಅಂಗಡಿಗೆ ಹೋಗಿ ಪಡಿತರ ವಿತರಣೆಯಾದ ಮೇಲೆ ಇರುವ ಖಾಲಿ ಚೀಲಗಳು ಎಲ್ಲಿಗೆ ಹೋಗುತ್ತವೆ ? ಎಂಬ ವಿಷಯದ ಜಾಡು ಹಿಡಿದುಕೊಂಡು ಹೋದಾಗ ಅಮರೇಶ ನಡಲಮನಿ ಎನ್ನುವ ಸಮಾಜ ಸೇವಕರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಈ ವಿಷಯವನ್ನು ಕೇಳಿದ್ದು, ಮಾಹಿತಿ ಕೊಟ್ಟಿರುವ ಅಧಿಕಾರಿ “ ಆಹಾರ ಇಲಾಖೆ ಗೋದಾಮ ವ್ಯವಸ್ಥಾಪಕರು ಒಂದು ಪತ್ರವನ್ನು ಬರೆದಿದ್ದು, ಈ ಪತ್ರಕ್ಕೆ ನಂಬರ್ ಇರುವದಿಲ್ಲ, ಮೋಹರ ಹಾಕಿರುವದಿಲ್ಲ, ಮಾಹಿತಿದಾರರು ಕೇಳಿದ ಮೇಲೆ ಅದಕ್ಕೊಂದು ಮೊಹರ ಹಾಕಿ ಕೊಟ್ಟಿರುವದು ಕೂಡಾ ಹಾಸ್ಯಸ್ಪದ ಮತ್ತು ಬೇ ಜವಬ್ದಾರ ಉತ್ತರದಿಂದ ಕೂಡಿದ್ದು ಅದರ ಪ್ರತಿಯನ್ನು ಸಹಿತ ತಹಶೀಲ್ದಾರರು ಸಿಂಧನೂರು ಇವರಿಗೆ ಸಲ್ಲಿಸಿದ್ದಾರೆ.

ಈ ಪತ್ರದ ಒಕ್ಕಣೆ ಏನೆಂದರೆಃ
ಪಡಿತರಕ್ಕಾಗಿ ಬಂದಿರುವ ಗೋಣಿ ಚೀಲಗಳನ್ನು ದೃಢೀಕರಿಸಿ ಕೊಡಲು ನೀವುಗಳು ಕೇಳಿದ್ದು, ನಮ್ಮ ಗೋದಾಮಿಗೆ ಆಯಾ ತಿಂಗಳಿನ ಆಹಾರ ಧಾನ್ಯಗಳ ಹಂಚಿಕೆ ಅಂತೆ ಸಿಂಧನೂರು ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಎತ್ತುವಳಿಯಾಗುತ್ತದೆ. ತದನಂತರ ಎಲ್ಲ ನ್ಯಾಯಬೆಲೆ ಅಂಗಡಿಯವರೇ ಗೋಣಿಚೀಲಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ, ಸದರಿ ಗೋಣಿ ಚೀಲಗಳನ್ನು ವಾಪಸು ಪಡೆಯಬೇಕೆಂದು ಸರ್ಕಾರದಿಂದ ಇದುವರೆಗೂ ಯಾವುದೇ ಆದೇಶ ಬಂದಿರುವದಿಲ್ಲ, ಇದರಿಂದ ನಮ್ಮ ಗೋದಾಮಿನಲ್ಲಿ ಗೋಣಿಚೀಲಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ದಿಲ್ಲ ಎಂಬ ಮಾಹಿತಿ ಈ ಮೂಲಕ ತಮಗೆ ತಿಳಿಸಲಾಗಿದೆ.
ಪ್ರತಿಯನ್ನುಃ ಮಾನ್ಯ ತಹಶೀಲ್ದಾರರು ಸಿಂಧನೂರು.
ಸಹಿ
ಘಟಕ ವ್ಯವಸ್ಥಾಪಕರು
ಸಿಂಧನೂರು.
ಇಲ್ಲಿ ಗಮನಿಸಬೇಕಾದ ಅಂಶವೇನೆ0ದರೆ, ಗೋಣಿ ಚೀಲಗಳನ್ನು ವಾಪಸ್ಸು ಪಡೆಯುವಂತೆ ಸರಕಾರದ ಆದೇಶ ಇರುವದಿಲ್ಲ, ಅಂದರೆ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಯೋಜನೆ ಜಾರಿಗೆ ಬಂದಾಗಿನಿದ ಈ ಗೋಣಿ ಚೀಲಗಳನ್ನು ಸಂಗ್ರಹಿಸಿಟ್ಟಿದ್ದರೆ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗೆ ಗೋಣೀ ಚೀಲಗಳ ಗೋದಾಮು ಬೇಕಾಗಿತ್ತು ಅಲವೆ. ಸಿಂಧನೂರು ತಾಲೂಕು ೧೭೫ ನ್ಯಾಯ ಬೆಲೆ ಅಂಗಡಿಯನ್ನು ಹೊಂದಲಾಗಿದೆ ಎಂದು ಹೆಸರು ಹೇಳಲು ಆಗದೇ ಇರುವ ನ್ಯಾಯಬೆಲೆ ಅಂಗಡಿ ಸಂಚಾಲಕರೊಬ್ಬರು ತಿಳಿಸಿದ್ದು, ಗಮನಿಸಿರಿ ಈ ಗೋಣಿಚೀಲಗಳ ಕುರಿತಂತೆ ಹಗರಣ ಎನ್ನಬೇಕೆ, ಸ್ಕಾö್ಯಂ ಎನ್ನಬೇಕೆ, ಇದರಲ್ಲಿ ಅಧಿಕಾರಿಗಳು (ಎಲ್ಲಾ ಹಂತದ) ಶಾಮೀಲಾಗಿದ್ದಾರೆ ಎಂಬ ಮಾಹಿತಿ ಕೂಡಾ ಕೇಳಿ ಬರುತ್ತದೆ. ಅಂದರೆ ಸಿಂಧನೂರಿನಲ್ಲಿ “ಪಡಿತರ ಗೋಣೀ ಚೀಲಗಳ ನುಂಗುಬಾಕ ಅಧಿಕಾರಿಗಳು ಇದ್ದಾರೆ ಎಂಬುದು ಮಾತ್ರ ಸತ್ಯದಿಂದ ಕೂಡಿದ ಸಂಗತಿಯಾಗಿದೆ.













