BB NEWS KANNADA
ಇಸ್ರೇಲ್ ಸಂಘರ್ಷ ವಿಜಯರತ್ನ ಸಾಧಕರು ಸುರಕ್ಷಿತ
ಮಾಹಿತಿ ಹಂಚಿಕೊಂಡ ಡಾ. ಶಿವರಾಜ್ ಪಾಟೀಲ್
ಮಾರ್ಚ್ 01. ದುಬೈ: ಇರಾನ್–ಇಸ್ರೇಲ್ ಸಂಘರ್ಷದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ Dubai International Airportನಲ್ಲಿ ವಿಮಾನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಸಂದರ್ಭದಲ್ಲೂ, ಕರ್ನಾಟಕದ ವಿಜಯರತ್ನ ಇಂಟರ್ನ್ಯಾಷನಲ್ ಅವಾರ್ಡ್ ಸಮಾರಂಭಕ್ಕೆ ತೆರಳಿದ್ದ ಎಲ್ಲ ಸಾಧಕರು ಸುರಕ್ಷಿತವಾಗಿದ್ದಾರೆ ಎಂಬ ಮಹತ್ವದ ಮಾಹಿತಿಯನ್ನು ವಿಜಯ ರತ್ನ ಪ್ರಶಸ್ತಿ ಪುರಸ್ಕೃತರಾದ ಹಾಗೂ ಸಿಂಧನೂರಿನ ಸಹನಾ ಮಕ್ಕಳ ಆಸ್ಪತ್ರೆಯ ವೈದ್ಯರಾದ Dr. Shivaraj Patil ಅವರು ಸ್ವತಃ ಹಂಚಿಕೊಂಡಿದ್ದಾರೆ.
Dubaiನಲ್ಲಿ ವಿಜಯವಾಣಿ ವತಿಯಿಂದ ಆಯೋಜಿಸಲಾದ ‘ವಿಜಯ ರತ್ನ ಇಂಟರ್ನ್ಯಾಷನಲ್ ಅವಾರ್ಡ್–2026’ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 27 ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಸಮಾರಂಭಕ್ಕೆ ತೆರಳಿದ್ದ 27 ಸಾಧಕರು, ಅವರ ಕುಟುಂಬಸ್ಥರು ಹಾಗೂ ವಿಜಯವಾಣಿ ಸಿಬ್ಬಂದಿ ಸೇರಿ ಒಟ್ಟು 64 ಜನರು ದುಬೈನಲ್ಲಿ ತಂಗಿದ್ದಾರೆ.
“ನಾವು ಎಲ್ಲರೂ ಸುರಕ್ಷಿತವಾಗಿದ್ದೇವೆ”
ಈ ಕುರಿತು ಪ್ರತಿಕ್ರಿಯಿಸಿದ ಡಾ. ಶಿವರಾಜ್ ಪಾಟೀಲ್ ಅವರು,
“ಫ್ಲೈಟ್ಸ್ ಕ್ಯಾನ್ಸಲ್ ಆಗಿದ್ದು ಹಾಗೂ ಏರ್ಪೋರ್ಟ್ ಕ್ಲೋಸ್ ಆಗಿರುವುದನ್ನು ಬಿಟ್ಟರೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಪೂರ್ತಿ ರಾತ್ರಿ ಸೆಕ್ಯೂರಿಟಿ ಅಲರ್ಟ್ ಇತ್ತು. ಆದರೆ ನಾವು ಎಲ್ಲರೂ ಚೆನ್ನಾಗಿದ್ದೇವೆ ಮತ್ತು ಸುರಕ್ಷಿತವಾಗಿದ್ದೇವೆ. ನಮ್ಮ ಜೊತೆ ಡಾ. ಆನಂದ್ ಸಂಕೇಶ್ವರರು ಇದ್ದಾರೆ,” ಎಂದು ತಿಳಿಸಿದ್ದಾರೆ.
ಡಾ. ಆನಂದ್ ಸಂಕೇಶ್ವರರ ಮೇಲ್ವಿಚಾರಣೆ
ವಿ ಆರ್ ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ Dr. Anand Sankeshwar ಅವರು ಖುದ್ದಾಗಿ ಎಲ್ಲಾ ವ್ಯವಸ್ಥೆಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪ್ರತಿಷ್ಠಿತ ಹೋಟೆಲ್ನಲ್ಲಿ ಊಟ, ಉಪಹಾರ ಹಾಗೂ ವಾಸ್ತವ್ಯದ ಸಕಲ ವ್ಯವಸ್ಥೆ ಮಾಡಲಾಗಿದೆ.
ಕುಟುಂಬಸ್ಥರಿಗೆ ನಿಟ್ಟುಸಿರು
ಸಾಧಕರ ಸುರಕ್ಷತೆ ಬಗ್ಗೆ ಡಾ. ಶಿವರಾಜ್ ಪಾಟೀಲ್ ಅವರು ನೀಡಿದ ಮಾಹಿತಿ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ನಿಟ್ಟುಸಿರು ತಂದಿದೆ. ವಿಜಯರತ್ನ ಇಂಟರ್ನ್ಯಾಷನಲ್ ಅವಾರ್ಡ್ ಸಮಾರಂಭಕ್ಕೆ ತೆರಳಿದ್ದ ಎಲ್ಲಾ ಕನ್ನಡಿಗರು ಕ್ಷೇಮವಾಗಿರುವುದು ಸಮಾಧಾನಕರ ಸಂಗತಿಯಾಗಿದೆ.













