ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಪ್ರತಿಯೊಬ್ಬರೂ ಮನೆಯ ಮೇಲ್ಚಾವಣಿ ಮೇಲಿ ನೀರಿನ ಅರವಟ್ಟಿಗೆ ನಿರ್ಮಸಿ ಅಮರೇಗೌಡ ಮಲ್ಲಾಪೂರ

Advertisement
ಏಪ್ರಿಲ್ 21.ಕಲ್ಯಾಣ ಕರ್ನಾಟಕ ಅತ್ಯಂತ ಹೆಚ್ಚು ತಾಪಮಾನವನ್ನು ಹೊಂದಿರುವ ಪ್ರದೇಶ.ಈ ಭಾಗದಲ್ಲಿ ಸುಮಾರು 37 ಡಿ.ಸೆ.41ಡಿ.ಸೆಲ್ಸಿಯಸ್ ನಷ್ಟು ಉಷ್ಣಾಂಶ ಹೆಚ್ಚಾಗುತ್ತಾ ಹೊರಟಿದೆ.ಈ ವರ್ಷ ಇದೇ ಸಮಯದಲ್ಲಿ ಚುನಾವಣೆಗಳು ಘೋಷಣೆಯಾಗಿದ್ದರಿಂದ ಈ ಭಾಗದ ಜನರು ಬಿಸಿಲಿನ ತಾಪಕ್ಕೆ ಜನರು ತತ್ತರಿಸುತ್ತಿದ್ದಾರೆ.ಈ ಬಿಸಿಲಿನ ತಾಪವನ್ನು ಸ್ವಲ್ಪ ಮಟ್ಟಿಗೆ ತಣ್ಣಗಾಗಿಸಲು ಅಥವಾ ಜನರ ಬಾಯಾರಿಕೆಯನ್ನು ನೀಗಿಸಲು ಸಂಘ ಸಂಸ್ಥೆಗಳು ಅಲ್ಲಲ್ಲಿ ಕುಡಿಯುವ ನೀರಿನ ಅರವಟ್ಟಿಗೆಗಳನ್ನು ನಿರ್ಮಿಸಲಾಗಿದೆ.ಆದರೂ ಬಿಸಿಲಿನ ತಾಪಮಾನ ತಗ್ಗುತ್ತಿಲ್ಲ.



ಇಂತಹ ದಿನಗಳಲ್ಲಿ ಮೂಕ ಪ್ರಾಣಿ ಪಕ್ಷಿಗಳ ಈ ಬಿಸಿಲಿನ ತಾಪವನ್ನು ಹೇಗೆ ತಡೆದುಕೊಳ್ಳುತ್ತವೆ,ಜೀವನವನ್ನು ಹೇಗೆ ಸಾಗಿಸುತ್ತವೆ ಎಂದು ಪರಿಸರ ಪ್ರೇಮಿಗಳಿಗೆ ಮನನೊಂದಂತಾಗಿದೆ ಇದನ್ನು ಮನಗೊಂಡು ವನಸಿರಿ ಫೌಂಡೇಶನ್ ತನ್ನ ಸ್ವಂತ ಖರ್ಚಿನಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಪಕ್ಷಿಗಳಿಗಾಗಿಯೇ ಸುಮಾರು 10ಸಾವಿರ ನೀರಿನ ಅರವಟ್ಟಿಗಳ ಮಡಿಕೆಗಳನ್ನು ಮಾಡಿ ಈ ಭಾಗದ ಎಲ್ಲಾ ಜಿಲ್ಲೆಗಳಿಗೆ ಉಚಿತವಾಗಿ ಕಳಿಸಿ ಸ್ಥಳೀಯ ಪರಿಸರ ಪ್ರೇಮಿಗಳಿಂದ ಅವುಗಳನ್ನು ಕಟ್ಟಿಸುವ ಪ್ರಯತ್ನ ಮಾಡುತ್ತಿದೆ.ಈ ಮೇಲಿನ ಚಿತ್ರದಂತೆ ಮನುಷ್ಯ ತನ್ನ ಜೀವನಕ್ಕಾಗಿ ಗಿಡಮರಗಳನ್ನು ಕಡಿಯಲು ಹೊರಟಾಗ ಮರವೊಂದು ನನ್ನನ್ನು ಕೊಲ್ಲದಿರು ನಾ ನಿನ್ನ ಉಸಿರು, ನಾನು ನಿನಗೆ ಆಶ್ರಯವನ್ನು ಕೊಡುವೆ ನಾನು ಹಸಿರು ನಾನು ನಿನ್ನ ಗೆಳೆಯ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವಾಗ ಮನುಷ್ಯ ತನ್ನ ಸ್ವಾರ್ತಕ್ಕಾಗಿ ಬೃಹದ್ದಾಕಾರವಾಗಿ ಬೆಳದೆ ಮರವನ್ನು ಕಡಿದು ಸದುಪಯೋಗ ಪಡೆದುಕೊಳ್ಳುತ್ತಾನೆ.ಕೆಲವು ವರ್ಷಗಳು ಕಳೆದ ನಂತರ ಮಳೆ ಬೆಳೆ ಇಲ್ಲದೇ ಬಿಸಿಲಿನ ತಾಪವನ್ನು ತಾಳಲಾರದೆ ಮನುಷ್ಯ ವಿಶ್ರಾಂತಿ ಪಡೆಯಲು ಗಿಡಮರಗಳನ್ನು ಹುಡುಕುತ್ತಾನೆ ಮನುಷ್ಯನ ಅತಿ ಆಸೆಯಿಂದ ಇಂದು ಸೂರ್ಯ ಕೂಡ ಮನುಷ್ಯನನ್ನು ಸುಡಲು ಬೆನ್ನು ಬಿದ್ದಿದ್ದಾನೆ ಸೂರ್ಯ ಮನುಷ್ಯನಿಗೆ ಹೇಳುತ್ತಾನೆ ನಿನಗೆ ಉಸಿರು ಕೊಟ್ಟ ನನ್ನ ಹಸಿರಿನ ಗೆಳೆಯ (ಗಿಡಮರ) ನನ್ನು ಕೊಂದ ಪಾಪಿ ನೀನು ನಿನ್ನನ್ನು ಸುಡದೆ ಬಿಡನೆಂದು ಸೂರ್ಯ ಇಂದು ತನ್ನ ಉಗ್ರರೂಪ ತಾಳಿದ್ದಾನೆ ಆದ್ದರಿಂದ ಈ ಭಾಗದಲ್ಲಿ ತಾಪಮಾನ ಹೆಚ್ಚಾಗಿದೆ.

ಈ ಒಂದು ರೇಖಾಚಿತ್ರ ನಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ರೇಖಾಚಿತ್ರದ ಮೂಲಕವಾದರು ಜನರು ಅರ್ಥಮಾಡಿಕೊಳ್ಳಬೇಕು. ದಯವಿಟ್ಟು ಈ ಭಾಗದ ಪರಿಸರ ಪ್ರೇಮಿಗಳು ತಮ್ಮ ಮನೆಯ ಮೇಲ್ಚಾವಣಿ ಮೇಲೆ ತೋಟದ ಗಿಡಮರಗಳಲ್ಲಿ,ಆವರಣದ ಗಿಡಮರಗಳಿಗೆ ಒಂದು ಮಣ್ಣಿನ ಮಡಿಕೆ ಅಥವಾ ನಿಮಗೆ ನಿರುಪಯುಕ್ತವಾದಂತಹ ಪ್ಲಾಸ್ಟಿಕ್ ಡಬ್ಬಿಗಳಲ್ಲಿ, ಹಾಗೂ ಇನ್ನಿತರ ವಸ್ತುಗಳಲ್ಲಿ ನೀರನ್ನು ಸಂಗ್ರಹಿಸಿ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹವನ್ನು ತೀರಿಸುವ ಮೂಲಕ ಪಕ್ಷಿಗಳ ಸಂಕುಲ ಉಳಿವಿಗಾಗಿ ಕೈಜೋಡಿಸಬೇಕೆಂದು ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಅಮರೇಗೌಡ ಮಲ್ಲಾಪೂರ ರಾಜ್ಯದ ಪರಿಸರ ಪ್ರೇಮಿಗಳಲ್ಲಿ ಮನವಿ ಮಾಡಿದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್