ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಪ್ರತಿಯೊಬ್ಬರೂ ಮನೆಯ ಮೇಲ್ಚಾವಣಿ ಮೇಲಿ ನೀರಿನ ಅರವಟ್ಟಿಗೆ ನಿರ್ಮಸಿ ಅಮರೇಗೌಡ ಮಲ್ಲಾಪೂರ

ಏಪ್ರಿಲ್ 21.ಕಲ್ಯಾಣ ಕರ್ನಾಟಕ ಅತ್ಯಂತ ಹೆಚ್ಚು ತಾಪಮಾನವನ್ನು ಹೊಂದಿರುವ ಪ್ರದೇಶ.ಈ ಭಾಗದಲ್ಲಿ ಸುಮಾರು 37 ಡಿ.ಸೆ.41ಡಿ.ಸೆಲ್ಸಿಯಸ್ ನಷ್ಟು ಉಷ್ಣಾಂಶ ಹೆಚ್ಚಾಗುತ್ತಾ ಹೊರಟಿದೆ.ಈ ವರ್ಷ ಇದೇ ಸಮಯದಲ್ಲಿ ಚುನಾವಣೆಗಳು ಘೋಷಣೆಯಾಗಿದ್ದರಿಂದ ಈ ಭಾಗದ ಜನರು ಬಿಸಿಲಿನ ತಾಪಕ್ಕೆ ಜನರು ತತ್ತರಿಸುತ್ತಿದ್ದಾರೆ.ಈ ಬಿಸಿಲಿನ ತಾಪವನ್ನು ಸ್ವಲ್ಪ ಮಟ್ಟಿಗೆ ತಣ್ಣಗಾಗಿಸಲು ಅಥವಾ ಜನರ ಬಾಯಾರಿಕೆಯನ್ನು ನೀಗಿಸಲು ಸಂಘ ಸಂಸ್ಥೆಗಳು ಅಲ್ಲಲ್ಲಿ ಕುಡಿಯುವ ನೀರಿನ ಅರವಟ್ಟಿಗೆಗಳನ್ನು ನಿರ್ಮಿಸಲಾಗಿದೆ.ಆದರೂ ಬಿಸಿಲಿನ ತಾಪಮಾನ ತಗ್ಗುತ್ತಿಲ್ಲ.



ಇಂತಹ ದಿನಗಳಲ್ಲಿ ಮೂಕ ಪ್ರಾಣಿ ಪಕ್ಷಿಗಳ ಈ ಬಿಸಿಲಿನ ತಾಪವನ್ನು ಹೇಗೆ ತಡೆದುಕೊಳ್ಳುತ್ತವೆ,ಜೀವನವನ್ನು ಹೇಗೆ ಸಾಗಿಸುತ್ತವೆ ಎಂದು ಪರಿಸರ ಪ್ರೇಮಿಗಳಿಗೆ ಮನನೊಂದಂತಾಗಿದೆ ಇದನ್ನು ಮನಗೊಂಡು ವನಸಿರಿ ಫೌಂಡೇಶನ್ ತನ್ನ ಸ್ವಂತ ಖರ್ಚಿನಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಪಕ್ಷಿಗಳಿಗಾಗಿಯೇ ಸುಮಾರು 10ಸಾವಿರ ನೀರಿನ ಅರವಟ್ಟಿಗಳ ಮಡಿಕೆಗಳನ್ನು ಮಾಡಿ ಈ ಭಾಗದ ಎಲ್ಲಾ ಜಿಲ್ಲೆಗಳಿಗೆ ಉಚಿತವಾಗಿ ಕಳಿಸಿ ಸ್ಥಳೀಯ ಪರಿಸರ ಪ್ರೇಮಿಗಳಿಂದ ಅವುಗಳನ್ನು ಕಟ್ಟಿಸುವ ಪ್ರಯತ್ನ ಮಾಡುತ್ತಿದೆ.ಈ ಮೇಲಿನ ಚಿತ್ರದಂತೆ ಮನುಷ್ಯ ತನ್ನ ಜೀವನಕ್ಕಾಗಿ ಗಿಡಮರಗಳನ್ನು ಕಡಿಯಲು ಹೊರಟಾಗ ಮರವೊಂದು ನನ್ನನ್ನು ಕೊಲ್ಲದಿರು ನಾ ನಿನ್ನ ಉಸಿರು, ನಾನು ನಿನಗೆ ಆಶ್ರಯವನ್ನು ಕೊಡುವೆ ನಾನು ಹಸಿರು ನಾನು ನಿನ್ನ ಗೆಳೆಯ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವಾಗ ಮನುಷ್ಯ ತನ್ನ ಸ್ವಾರ್ತಕ್ಕಾಗಿ ಬೃಹದ್ದಾಕಾರವಾಗಿ ಬೆಳದೆ ಮರವನ್ನು ಕಡಿದು ಸದುಪಯೋಗ ಪಡೆದುಕೊಳ್ಳುತ್ತಾನೆ.ಕೆಲವು ವರ್ಷಗಳು ಕಳೆದ ನಂತರ ಮಳೆ ಬೆಳೆ ಇಲ್ಲದೇ ಬಿಸಿಲಿನ ತಾಪವನ್ನು ತಾಳಲಾರದೆ ಮನುಷ್ಯ ವಿಶ್ರಾಂತಿ ಪಡೆಯಲು ಗಿಡಮರಗಳನ್ನು ಹುಡುಕುತ್ತಾನೆ ಮನುಷ್ಯನ ಅತಿ ಆಸೆಯಿಂದ ಇಂದು ಸೂರ್ಯ ಕೂಡ ಮನುಷ್ಯನನ್ನು ಸುಡಲು ಬೆನ್ನು ಬಿದ್ದಿದ್ದಾನೆ ಸೂರ್ಯ ಮನುಷ್ಯನಿಗೆ ಹೇಳುತ್ತಾನೆ ನಿನಗೆ ಉಸಿರು ಕೊಟ್ಟ ನನ್ನ ಹಸಿರಿನ ಗೆಳೆಯ (ಗಿಡಮರ) ನನ್ನು ಕೊಂದ ಪಾಪಿ ನೀನು ನಿನ್ನನ್ನು ಸುಡದೆ ಬಿಡನೆಂದು ಸೂರ್ಯ ಇಂದು ತನ್ನ ಉಗ್ರರೂಪ ತಾಳಿದ್ದಾನೆ ಆದ್ದರಿಂದ ಈ ಭಾಗದಲ್ಲಿ ತಾಪಮಾನ ಹೆಚ್ಚಾಗಿದೆ.

ಈ ಒಂದು ರೇಖಾಚಿತ್ರ ನಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ರೇಖಾಚಿತ್ರದ ಮೂಲಕವಾದರು ಜನರು ಅರ್ಥಮಾಡಿಕೊಳ್ಳಬೇಕು. ದಯವಿಟ್ಟು ಈ ಭಾಗದ ಪರಿಸರ ಪ್ರೇಮಿಗಳು ತಮ್ಮ ಮನೆಯ ಮೇಲ್ಚಾವಣಿ ಮೇಲೆ ತೋಟದ ಗಿಡಮರಗಳಲ್ಲಿ,ಆವರಣದ ಗಿಡಮರಗಳಿಗೆ ಒಂದು ಮಣ್ಣಿನ ಮಡಿಕೆ ಅಥವಾ ನಿಮಗೆ ನಿರುಪಯುಕ್ತವಾದಂತಹ ಪ್ಲಾಸ್ಟಿಕ್ ಡಬ್ಬಿಗಳಲ್ಲಿ, ಹಾಗೂ ಇನ್ನಿತರ ವಸ್ತುಗಳಲ್ಲಿ ನೀರನ್ನು ಸಂಗ್ರಹಿಸಿ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹವನ್ನು ತೀರಿಸುವ ಮೂಲಕ ಪಕ್ಷಿಗಳ ಸಂಕುಲ ಉಳಿವಿಗಾಗಿ ಕೈಜೋಡಿಸಬೇಕೆಂದು ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಅಮರೇಗೌಡ ಮಲ್ಲಾಪೂರ ರಾಜ್ಯದ ಪರಿಸರ ಪ್ರೇಮಿಗಳಲ್ಲಿ ಮನವಿ ಮಾಡಿದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿಗೆ ಅಭಿನಯ ಚಕ್ರವರ್ತಿ ಸುದೀಪ್ ಆಗಮನಬಿಜೆಪಿ ಯುವ ಅಧ್ಯಕ್ಷ ಹತ್ಯೆ: ಆರು ಮಂದಿಗೆ ಗಲ್ಲು!MCH ಆಸ್ಪತ್ರೆಯಲ್ಲಿ ಡಾ. ಶೃತಿ ನಿರ್ಲಕ್ಷ್ಯ? ನವಜಾತ ಶಿಶು ಸಾವುಗಳ ನಡುವೆಯೇ ಗಂಭೀರ ಆರೋಪ ಸಿಂಧನೂರಿನ ಯುವಕ ಕಾಣೆಯಾದ ಪ್ರಕರಣ: ಪೋಷಕರ ಕಣ್ಣೀರಿನ ಮನವಿಸುಳ್ಳು ದೂರುಗಳಿಗೆ ಕಡಿವಾಣ: 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್ಭ್ರೂಣಲಿಂಗ ಪತ್ತೆ–ಹತ್ಯೆ ಪ್ರಕರಣ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಜೈಲು ಪಾಲು“50 ವರ್ಷಗಳ ಬದುಕಿಗೆ 15 ದಿನಗಳ ಗಡುವು: ಗಾಂಧಿನಗರದ 80 ಬಡ ಕುಟುಂಬಗಳ ಮೇಲೆ ಜೆಸಿಬಿ ನೆರಳು!”ಪೊಲೀಸ್ ಪೇದೆ ಮದುವೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ – ಮಾನವೀಯತೆಗೆ ಮಾದರಿ ಘಟನೆನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತ!ಬರುವ ದಿನಗಳು ಅಶಾಂತಿ ಸೂಚನೆ – ಅನ್ನ ನೀರಿಗೆ ಆಹಾಕಾರ: ಕೋಡಿಮಠ ಸ್ವಾಮೀಜಿ ಭವಿಷ್ಯಚಲಿಸುತ್ತಿದ್ದ ಬಸ್ ಏಕಾಏಕಿ ಜಮೀನಿಗೆ ನುಗ್ಗಿದ ಘಟನೆ – ನೂರಕ್ಕೂ ಹೆಚ್ಚು ಪ್ರಯಾಣಿಕರು ಪಾರು!ಕಲಮಂಗಿ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ – ವಿದ್ಯಾರ್ಥಿಗಳ ಭರ್ಜರಿ ಸಾಧನೆ“ಬಿಸಿಲಿನ ಅಬ್ಬರ: ಕರ್ನಾಟಕಲ್ಲಿ ಲಾಕ್‌ಡೌನ್ ಬರುತ್ತಾ..?”625ಕ್ಕೆ 625: ರಾಯಚೂರು ಸುಖದೇವ್ ಸಾಧನೆ