ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಹಸ್ರಾರು ಜನ ಸಾಗರದಲ್ಲಿ ಶಾಂತಿಯುತವಾಗಿ ಜರುಗಿದ ಮೆದಿಕಿನಾಳ ಲಿಂ.ಚನ್ನಮಲ್ಲ ಶಿವಯೋಗಿಗಳ ಜಾತ್ರೆ

ಬಡವರ ಬಾರುಕೋಲು ಸುದ್ದಿ
ಮಸ್ಕಿ
: ಲಿಂ.ಚನ್ನಮಲ್ಲ ಶಿವಯೋಗಿಗಳ 69 ನೇ ಜಾತ್ರಾ ಮಹೋತ್ಸವವು ತಾಲ್ಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಭಾನುವಾರ ಸಹಸ್ರಾರು ಸಹಸ್ರಾರು ಜನ ಸಾಗರದಲ್ಲಿಯೂ ಶಾಂತಿಯುತವಾಗಿ ಜರುಗಿತು.
ಬೆಳಿಗ್ಗೆ ಚನ್ನಮಲ್ಲ ಶಿವಯೋಗಿಗಳ ಗದ್ದುಗೆಗೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಹಾಗೂ ಗಂಗಾ ಸ್ಥಳದಿಂದ ಕುಂಭ ಹಾಗೂ ಚನ್ನಮಲ್ಲ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು.
ನಂತರ ನೇರವಾಗಿ ಕಾರ್ಯಕ್ರಮದ ವೇದಿಕೆಗೆ ಗಣ್ಯರನ್ನು ಬರ ಮಾಡಿಕೊಂಡು ಆಸನ ಸ್ವೀಕಾರ ಮಾಡಿದ ಗಣ್ಯರಿಗೆ ಶಾಲು ಹೊದಿಸಿ ಮಠದ ಹಿನ್ನೆಲೆ ಇರುವ ಪುಸ್ತಕ ಹಾಗೂ ನೆನೆಪಿನ ಕಾಣಿಕೆ ನೀಡಿ ವೇದಿಕೆಗೆ ಬರಮಾಡಿಕೊಂಡರು.

ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನಾ ಭರತ ನಾಟ್ಯ ಮಾಡಲಾಯಿತು.
ವಿಶೇಷ ಎಂಬಂತೆ ತಮ್ಮ ಇಳಿ ವಯಸ್ಸಿನಲ್ಲೂ 3 ನವ ದಂಪತಿಗಳಿಗೆ ಹೊಸ ಸಮವಸ್ತ್ರ,ಬಂಗಾರ,ಹಸಿರು ಬಳೆ,ಹಾಗೂ ಮದುವೆ ಕಾರ್ಯಕ್ಕೆ ಬೇಕಾಗುವವನ್ನೂ ನೀಡಿ ತಮ್ಮ ಅಂತರಾಳದ ಚನ್ನಮಲ್ಲ ಸ್ವಾಮೀಜಿರವರ ಮೇಲಿನ ಭಕ್ತಿ ಮತ್ತು ಪ್ರೀತಿಗೆ ಹಾಗೂ ಅವರ ಸ್ಮರಣಾರ್ಥದ ಮಠಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಿದ ಬಸಮ್ಮ ಗಂಡ ದಿವಂಗತ ಮಲ್ಲಪ್ಪ ಕೋಸಗಿ ಅವರನ್ನು ವೇದಿಕೆಗೆ ಅಥಿತಿಯಾಗಿ ಆಹ್ವಾನಿಸಿ ಸನ್ಮಾನಿಸಿ ಗೌರವಿಸಿದರು.
ನಂತರ ಶ್ರೀ ಮಠದ 501 ಬಾಲಮಕ್ಕಳಿಗೆ ಹಾಗೂ ಮುತ್ತೈದೆ ಮಹಿಳಾ ಭಕ್ತರಿಗೆ ಅತೀ ಶಿಸ್ತು ಬದ್ಧವಾಗಿ ಅತ್ಯಂತ ಗೌರವಯುತವಾಗಿ ಅಂದರೆ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ಹೇಗೆ ಸಂಪ್ರದಾಯದಂತೆ ಹುಡಿ ತುಂಬಲಾಗುವದೋ ಅದೇ ಮಾದರಿಯಲ್ಲಿಯೇ ಅವರ ಹುಡಿಗಳಿಗೆ ಶ್ರೀಗಳೇ ಹುಡಿ ಸಾಮಾನುಗಳನ್ನು ಹಾಕುವ ಮೂಲಕ ಹೊಸತನ ಕಾರ್ಯಕ್ರಮವು 2 ನೇ ವರ್ಷವೂ ಯಶಸ್ವಿಯಾಗಿ ಜರುಗಿತು.
ಮಠದಲ್ಲಿಯೇ ಜರುಗಿದ 3 ಸಾಮೂಹಿಕ ವಿವಾಹವಾದ ನವ ದಂಪತಿಗಳಿಗೆ ಅಕ್ಷತೆ ಕಾಳು ಹಾಕುವ ಮೂಲಕ ವೇದಿಕೆಯ ಗಣ್ಯರು ಆಶೀರ್ವದಿಸಿದರು.
ಈ ಕಾರ್ಯಕ್ರಮದ ಕುರಿತು ಮಾನವಿ ಕಲ್ಮಠದ ಶ್ರೀಗಳು,ಕ್ಷೇತ್ರದ ಹಾಲಿ ಶಾಸಕ ಆರ್ ಬಸನಗೌಡ ತುರುವಿಹಾಳ ಹಾಗೂ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಾತನಾಡಿದರು.
ಕಾರ್ಯಕ್ರಮದ ನಂತರ ಲಡ್ಡು,ಅನ್ನ - ಸಾಂಬಾರ್ ವನ್ನು ಪ್ರಸಾದ ರೂಪದಲ್ಲಿ ಸಹಸ್ರಾರು ಭಕ್ತರು ಸೇವಿಸಿದರು.
ಸಂಜೆ 6 ಗಂಟೆಗೆ ಶ್ರೀ ಮಠದ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.
ಇದೇ ಸಂದರ್ಭದಲ್ಲಿ ಗ್ಯಾರಂಟಿ ಸಂಘದ ಅಧ್ಯಕ್ಷ ಮೈಬೂಬ ಸಾಬ್,ಎಲಿಗಾರ್ ಶರಣಪ್ಪ,ಬಸವ ಶರಣರು ಸಂತೆಕೆಲ್ಲೂರು ಮಠ,ಚನ್ನಮಲ್ಲ ಶಿವಯೋಗಿಗಳು ಮೆದಿಕಿನಾಳ ಹಾಗೂ ಗ್ರಾಮದ ಮತ್ತು ಮಠದ ಸಕಲ ಸದ್ಭಕ್ತರು ಇದ್ದರು.
ವರದಿ : ಎಚ್.ಕೆ.ಬಡಿಗೇರ್


ಗರ್ಭಿಣಿಯರ ಸರಣಿ ಸಾವಿನ ಹಿನ್ನೆಲೆ ಬಿಜೆಪಿಯ ಮುಖಂಡ ಕೆ ಕರಿಯಪ್ಪ ತಾ. ಸಾರ್ವಜನಿಕ ಆಸ್ಪತ್ರೆಗೆ ಭೇಟಿ
https://youtu.be/TqwAr9LAmf0?si=sVmUNvk9TzwdgfMM
Advertisement
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಗಾಂಧಿ ಸರ್ಕಲ್ ಗಂಧದ ಸರ್ಕಲ್ ಆಯ್ತು!ವರ್ಷಗಳ ಪ್ರೇಮ ಸಂಬಂಧ ಮದುವೆ ಹಂತದಲ್ಲಿ ಮುರಿತ: ಯಾದಗಿರಿಯಲ್ಲಿ ವಿವಾದಕ್ಕೆ ತಿರುವುರಾಯಚೂರು ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿ ನೇಮಕದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಗೆಲುವು, ಸಮರ್ಥ್ ಶಾಮನೂರ್ ವಿಜಯಿಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವು, ಬಿಜೆಪಿಗೆ ಹಿನ್ನಡೆಗದಗ ಜಾತ್ರೆಯಲ್ಲಿ ಅವಘಡ: ಡಾನ್ಸಿಂಗ್ ಪ್ಲೇಟ್ ಮುರಿದು 18 ಮಂದಿಗೆ ಗಾಯಖಾಸಗಿ ಶಾಲೆಗಳ ಡೊನೇಷನ್ ದಂಧೆಗೆ ಕಡಿವಾಣ ಹಾಕಿ: ಎಸ್‌ಎಫ್‌ಐ ಆಗ್ರಹಕಣ್ಣಿಗೆ ಕಾಣದ ಅಪಾಯ: ಅತಿ ಹೆಚ್ಚಿನ ಯುವಿ ಕಿರಣಗಳಿಂದ ಆರೋಗ್ಯಕ್ಕೆ ಭೀತಿಜನಮಾನಸ ಗೆದ್ದ ಶರಣರ ಆರೋಗ್ಯಕ್ಕಾಗಿ ಚರ್ಚಿನಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆಸಿಂಧನೂರಿನ ಯುವಕನ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಪತ್ರಸಿಂಧನೂರಿಗೆ ಅಭಿನಯ ಚಕ್ರವರ್ತಿ ಸುದೀಪ್ ಆಗಮನಬಿಜೆಪಿ ಯುವ ಅಧ್ಯಕ್ಷ ಹತ್ಯೆ: ಆರು ಮಂದಿಗೆ ಗಲ್ಲು!MCH ಆಸ್ಪತ್ರೆಯಲ್ಲಿ ಡಾ. ಶೃತಿ ನಿರ್ಲಕ್ಷ್ಯ? ನವಜಾತ ಶಿಶು ಸಾವುಗಳ ನಡುವೆಯೇ ಗಂಭೀರ ಆರೋಪ ಸಿಂಧನೂರಿನ ಯುವಕ ಕಾಣೆಯಾದ ಪ್ರಕರಣ: ಪೋಷಕರ ಕಣ್ಣೀರಿನ ಮನವಿಸುಳ್ಳು ದೂರುಗಳಿಗೆ ಕಡಿವಾಣ: 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್