🟥 BREAKING NEWS | ವೆಬ್ ನ್ಯೂಸ್ ವರದಿ
ಕನಕಗಿರಿ ಮತಕ್ಷೇತ್ರದ ಶಾಸಕರು ತಮ್ಮ ಆರೋಗ್ಯದ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದು, “ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ, ಯಾರೂ ಆತಂಕಪಡುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.
ಶಾಸಕರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದ ನಿಮಿತ್ತ ನಾಲ್ಕು ದಿನಗಳ ಹಿಂದೆ ತಮ್ಮ ಕನಕಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿಕೊಂಡು, ಕೊಪ್ಪಳದಿಂದ ಬೆಂಗಳೂರಿಗೆ ಮರಳುವ ವೇಳೆ ಭಾನುವಾರ ರಾತ್ರಿ ಮಾರ್ಗ ಮಧ್ಯೆ ಎದೆ ಭಾಗದಲ್ಲಿ ಚುಚ್ಚಿದಂತಹ ಅನುಭವವಾಗಿದೆ.
https://www.facebook.com/share/1DcYEhjbBz/
👆Badavara Barkolu official page
ಇದು ಬಡವರ ಬಾರಕೋಲು ಪತ್ರಿಕೆಯ ಅಫೀಷಿಯಲ್ ಪೇಜ್ ಆಗಿರುತ್ತದೆ ದಯವಿಟ್ಟು ಇದೇ ಪೇಜನ್ನು ಎಲ್ಲರೂ ಫಾಲೋ ಮಾಡಿ ಶೇರ್ ಮಾಡಿ ಲೈಕ್ ಮಾಡಿ ಕಮೆಂಟ್ ಮೂಲಕ ತಮ್ಮ ಅನಿಸಿಕೆಯನ್ನು ತಿಳಿಸಿ ಪ್ರೋತ್ಸಾಹಿಸಿ
ಈ ಹಿನ್ನೆಲೆಯಲ್ಲಿ ತಕ್ಷಣ ತಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸಿದ ಅವರು, ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ಪಡೆದರು. ವೈದ್ಯರ ಸೂಚನೆಯಂತೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಇಸಿಜಿ (ECG) ಪರೀಕ್ಷೆ ನಡೆಸಲಾಗಿದೆ.
ಪರಿಶೀಲನೆಯ ನಂತರ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ವೈದ್ಯರು ದೃಢಪಡಿಸಿದ್ದು, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಈ ರೀತಿಯ ನೋವು ಉಂಟಾಗಿದೆ ಎಂದು ತಿಳಿಸಿದ್ದಾರೆ.
👉 “ನಾನು ಚೆನ್ನಾಗಿದ್ದೇನೆ. ಸೋಮವಾರ ಬೆಳಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಎಂದಿನಂತೆ ಭಾಗವಹಿಸುತ್ತೇನೆ,” ಎಂದು ಶಾಸಕರು ತಿಳಿಸಿದ್ದಾರೆ. ಶ್ರೀ ಶಿವರಾಜ್ ತಂಗಡಗಿ
ಇನ್ನೂ, ಈ ವಿಚಾರದಲ್ಲಿ ಯಾವುದೇ ರೀತಿಯ ವದಂತಿಗಳನ್ನು ಹರಡಬಾರದು ಎಂದು ಮನವಿ ಮಾಡಿದ ಅವರು, “ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿದ್ದೇನೆ ಅಷ್ಟೇ, ಆರೋಗ್ಯದ ಬಗ್ಗೆ ಯಾವುದೇ ಆತಂಕ ಬೇಡ” ಎಂದು ಸ್ಪಷ್ಟಪಡಿಸಿದ್ದಾರೆ.
🟡 ಪ್ರಮುಖ ಅಂಶಗಳು:
- ಕ್ಷೇತ್ರ ಭೇಟಿ ಬಳಿಕ ಮರಳುವ ವೇಳೆ ಎದೆನೋವು ಅನುಭವ
- ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ತಪಾಸಣೆ
- ECG ವರದಿ ಸಾಮಾನ್ಯ – ಗ್ಯಾಸ್ಟ್ರಿಕ್ ಸಮಸ್ಯೆ ಕಾರಣ
- ಸೋಮವಾರದಿಂದ ವಿಧಾನಸಭೆ ಕಾರ್ಯದಲ್ಲಿ ಪಾಲ್ಗೊಳ್ಳುವ ಭರವಸೆ
- ವದಂತಿಗಳಿಗೆ ತೆರೆ ಎಳೆಯುವಂತೆ ಮನವಿ
📢 BB News Kannada ವರದಿ









