ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

“ಅಕ್ರಮ ಅಕ್ಕಿ ಪ್ರಕರಣ: ತಡೆಯಾಜ್ಞೆ ಸಿಕ್ಕರೂ ಹೋರಾಟ ನಿಲ್ಲದು! ಇಲಾಖೆ ನಿರ್ಲಕ್ಷ್ಯ ವಿರುದ್ಧ ದೂರುದಾರರ ಕಾನೂನು ಹೋರಾಟ ತೀವ್ರ”

Advertisement

“ಬಡವರ ಅಕ್ಕಿ ಅಕ್ರಮ: ತಡೆಯಾಜ್ಞೆ ಹಿಂದೆ ಇಲಾಖೆ ಕೈವಾಡವೇ..? ಈಗ PILಗೆ ಸಜ್ಜಾದ ಮಾಧ್ಯಮ – ‘ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು’”

Advertisement

ಸಿಂಧನೂರು:ಗುಂಜಳ್ಳಿ ಕ್ಯಾಂಪ್‌ನ ನ್ಯಾಯಬೆಲೆ ಅಂಗಡಿ ಸಂಖ್ಯೆ–99ರಲ್ಲಿ ಪತ್ತೆಯಾದ ಭಾರೀ ಪ್ರಮಾಣದ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪ್ರಕರಣ ಇದೀಗ ದೊಡ್ಡ ಮಟ್ಟದ ವಿವಾದಕ್ಕೆ ತಿರುಗಿದ್ದು, ಆಹಾರ ಇಲಾಖೆಯ ನಿರ್ಲಕ್ಷ್ಯ ಮತ್ತು ಅನುಮಾನಾಸ್ಪದ ನಡೆ ಮೇಲೆ ತೀವ್ರ ಆರೋಪಗಳು ಕೇಳಿಬರುತ್ತಿವೆ.

 

ಪರಿಶೀಲನೆಯ ವೇಳೆ 127.50 ಕ್ವಿಂಟಾಲ್ ಅಕ್ಕಿ ದಾಸ್ತಾನು ಪತ್ತೆಯಾಗಿದ್ದು, ದಾಖಲೆ ಪ್ರಕಾರ ಕೇವಲ 81.990 ಕ್ವಿಂಟಾಲ್ ಮಾತ್ರ ಇರಬೇಕಾಗಿತ್ತು. ಇದರಿಂದಾಗಿ 45.51 ಕ್ವಿಂಟಾಲ್ ಅಕ್ರಮ ಅಕ್ಕಿ ಸಂಗ್ರಹಣೆ ಬಹಿರಂಗವಾಗಿದೆ. ಮತ್ತಷ್ಟು ಗಂಭೀರವಾಗಿ, ಅಂಗಡಿ ಸಂಚಾಲಕರೇ ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದು ಪ್ರಕರಣದ ತೀವ್ರತೆಯನ್ನು ಸ್ಪಷ್ಟಪಡಿಸಿದೆ.

ಅಮಾನತ್ತು… ನಂತರ ತಡೆಯಾಜ್ಞೆ!

ಈ ಗಂಭೀರ ಉಲ್ಲಂಘನೆಯ ಹಿನ್ನೆಲೆಯಲ್ಲಿ ಅಂಗಡಿಯನ್ನು ಅಮಾನತ್ತು ಮಾಡಲಾಗಿತ್ತು. ಆದರೆ ಅಂಗಡಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ (Stay Order) ಪಡೆದುಕೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

news_1774586385_0_988.webp

 

Caveat ಹಾಕದ ಉಪನಿರ್ದೇಶಕ – ಅನುಮಾನ ಗಾಢ

ಇಂತಹ ಪ್ರಕರಣಗಳಲ್ಲಿ ಇಲಾಖೆ ಮುಂಚಿತವಾಗಿ Caveat ಸಲ್ಲಿಸಬೇಕಾಗಿದ್ದರೂ, ಉಪನಿರ್ದೇಶಕ ನಜೀರ್ ಅಹ್ಮದ್ ಅವರು ಅದನ್ನು ಸಲ್ಲಿಸದೇ ಇರುವುದರಿಂದ, ಕೋರ್ಟ್‌ನಲ್ಲಿ ಏಕಪಕ್ಷೀಯ ವಿಚಾರಣೆ ನಡೆದು ತಡೆಯಾಜ್ಞೆ ಸಿಕ್ಕಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

👉 “ಇದು ಕೇವಲ ನಿರ್ಲಕ್ಷ್ಯವೇ? ಅಥವಾ ಉದ್ದೇಶಪೂರ್ವಕ ಸಹಾಯವೇ?” ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ. ದೂರುದಾರರ ಹೋರಾಟ ಮುಂದುವರಿಕೆ

ವಿಚಿತ್ರ ಸಂಗತಿಯೇನೆಂದರೆ, ಇಲಾಖೆ ಮೌನ ವಹಿಸಿದ ಸಂದರ್ಭದಲ್ಲೇ ದೂರುದಾರರೇ ಸ್ವತಃ Caveat ಸಲ್ಲಿಸಿ ಕಾನೂನು ಹೋರಾಟ ಮುಂದುವರಿಸಿದ್ದಾರೆ.

ಕಾನೂನು ಹೋರಾಟ ತೀವ್ರ: ತಡೆಯಾಜ್ಞೆ ರದ್ದುಪಡಿಸಲು ದೂರುದಾರರ ಸುತ್ತಿಗೆ

ತಡೆಯಾಜ್ಞೆ ಪಡೆದಿರುವ ಅಂಗಡಿ ಮಾಲೀಕರ ವಿರುದ್ಧ ಇದೀಗ ದೂರುದಾರರು ಕಾನೂನು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ನ್ಯಾಯಾಲಯದಲ್ಲಿ ತಡೆಯಾಜ್ಞೆ ರದ್ದುಪಡಿಸಲು (Vacate Stay Petition) ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಈ ಅರ್ಜಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ 45.51 ಕ್ವಿಂಟಾಲ್ ಪಡಿತರ ಅಕ್ಕಿ, ಅಂಗಡಿ ಸಂಚಾಲಕರೇ ತಪ್ಪು ಒಪ್ಪಿಕೊಂಡಿರುವುದು ಹಾಗೂ ಬಡವರ ಹಕ್ಕಿನ ಗಂಭೀರ ಉಲ್ಲಂಘನೆ ನಡೆದಿರುವುದನ್ನು ಬಲವಾಗಿ ಮಂಡಿಸಲು ನಿರ್ಧರಿಸಲಾಗಿದೆ.

ಇದಷ್ಟೇ ಅಲ್ಲದೆ, ಪ್ರಕರಣದಲ್ಲಿ ನೇರವಾಗಿ ತಮ್ಮ ಮಾತು ಮಂಡಿಸಲು ಮತ್ತು ಕಾನೂನು ಹೋರಾಟದಲ್ಲಿ ಭಾಗಿಯಾಗಲು Impleading Petition ಮೂಲಕ ಕೇಸ್‌ನಲ್ಲಿ ಅಧಿಕೃತವಾಗಿ ಹಸ್ತಕ್ಷೇಪ ಮಾಡಲು ಮುಂದಾಗಿದ್ದಾರೆ.

👉 “ತಪ್ಪಿತಸ್ಥರು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಯಾವ ತಂತ್ರವನ್ನೇ ಬಳಸಿದರೂ, ನಾವು ಹಿಂಜರಿಯುವುದಿಲ್ಲ. ತಡೆಯಾಜ್ಞೆ ರದ್ದುಪಡಿಸಿ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಯುತ್ತದೆ” ಎಂದು ದೂರುದಾರರು ಸ್ಪಷ್ಟಪಡಿಸಿದ್ದಾರೆ.

news_1774586415_0_985.webp

 

PILಗೆ ಸಜ್ಜಾದ ಮಾಧ್ಯಮ – ಕಾನೂನು ಹೋರಾಟ ತೀವ್ರ

ಈ ಪ್ರಕರಣವು ಕೇವಲ ಒಂದು ನ್ಯಾಯಬೆಲೆ ಅಂಗಡಿಗೆ ಸೀಮಿತವಾಗಿರುವುದಿಲ್ಲ. ಇದು ನೇರವಾಗಿ ಬಡವರ ಹಕ್ಕಿನ ಮೇಲೆ ನಡೆದಿರುವ ದಾಳಿ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆ, ಈಗ ಮಾಧ್ಯಮವೇ ಮುಂದಾಗಿ ಕಾನೂನು ಹೋರಾಟಕ್ಕೆ ಸಜ್ಜಾಗಿದೆ. ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸುವುದು, ಇಲಾಖೆಯ ನಿರ್ಲಕ್ಷ್ಯ, ಹಾಗೂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಕಂಡುಬಂದ ವೈಫಲ್ಯ—ಇವುಗಳನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಸಲ್ಲಿಸಲು ಸಿದ್ಧತೆ ನಡೆದಿದೆ.

ಕಾನೂನು ಪ್ರಕಾರ ಯಾವುದೇ ಭಾರತೀಯ ನಾಗರಿಕ ಅಥವಾ ಸಂಸ್ಥೆ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟಾದರೆ, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ Writ Petition ಮೂಲಕ PIL ಸಲ್ಲಿಸಲು ಅವಕಾಶವಿದೆ. ಈ ಪ್ರಕರಣದಲ್ಲಿ ಬಡವರಿಗೆ ನೀಡುವ ಪಡಿತರ ಅಕ್ಕಿಯ ಅಕ್ರಮ ಬಳಕೆ ಹಾಗೂ ಅವರ ಮೂಲಭೂತ ಹಕ್ಕಿನ ಉಲ್ಲಂಘನೆ ಸ್ಪಷ್ಟವಾಗಿರುವುದರಿಂದ, PIL ಸಲ್ಲಿಸಲು ಎಲ್ಲಾ ಅಂಶಗಳು ಪೂರ್ತಿಯಾಗಿವೆ ಎಂದು ಕಾನೂನು ವಲಯಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿವೆ.

👉 “ಇದು ಕೇವಲ ಒಂದು ಅಂಗಡಿಯ ವಿಷಯವಲ್ಲ. ಬಡವರ ಹೊಟ್ಟೆಗೆ ಹೋಗಬೇಕಾದ ಅಕ್ಕಿ ಅಕ್ರಮವಾಗಿ ಸಂಗ್ರಹವಾಗುತ್ತಿದೆ. ಅವರಿಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ. ಅಗತ್ಯವಿದ್ದರೆ ನಮ್ಮ ಮಾಧ್ಯಮವೇ PIL ಸಲ್ಲಿಸಿ ಕಾನೂನು ಹೋರಾಟ ಮುಂದುವರಿಸುತ್ತದೆ”ಇದರೊಂದಿಗೆ, ಈ ಪ್ರಕರಣವು ಈಗ ಸಾಮಾನ್ಯ ಅಕ್ರಮದಿಂದ ರಾಜ್ಯ ಮಟ್ಟದ ಗಮನ ಸೆಳೆಯುವ ಸಾರ್ವಜನಿಕ ಹಿತಾಸಕ್ತಿ ಹೋರಾಟಕ್ಕೆ ತಿರುಗುವ ಲಕ್ಷಣಗಳು ಸ್ಪಷ್ಟವಾಗಿವೆ..

ಕಾನೂನು ಪ್ರಕಾರ ಯಾವುದೇ ಭಾರತೀಯ ನಾಗರಿಕ ಅಥವಾ ಸಂಸ್ಥೆ

ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ Writ Petition ಮೂಲಕ PIL ಸಲ್ಲಿಸಬಹುದು.ಸಾರ್ವಜನಿಕ ಹಿತಾಸಕ್ತಿ ಅಥವಾ ಮೂಲಭೂತ ಹಕ್ಕುಗಳ ಉಲ್ಲಂಘನೆ ಇದ್ದರೆ PIL ಅರ್ಹವಾಗುತ್ತದೆ

👉 “ಬಡವರಿಗ ಅನ್ಯಾಯವಾಗಿರುವ ಕಾರಣ ಅವರಿಗೆ ನ್ಯಾಯ ಸಿಗುವವರೆಗೂ ಕೈ ಬಿಡುವುದಿಲ್ಲ. ಅಗತ್ಯವಿದ್ದರೆ ನಮ್ಮ ಮಾಧ್ಯಮವೇ PIL ಸಲ್ಲಿಸುತ್ತದೆ”

 

ಉಪನಿರ್ದೇಶಕರ ವಿರುದ್ಧ ಕ್ರಮಕ್ಕೆ ಒತ್ತಾಯ

ಈ ಪ್ರಕರಣದಲ್ಲಿ ಉಪನಿರ್ದೇಶಕರ ಪಾತ್ರವೇ ಅನುಮಾನಾಸ್ಪದವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಕಾರಣ..? ಪ್ರಕರಣದ ಹಿನ್ನಲೆಯಲ್ಲಿ: “ಯಾಕೆ Caveat ಸಲ್ಲಿಸಲಿಲ್ಲ?”“ಯಾರು ಜವಾಬ್ದಾರರು?”

 

ಸಾರ್ವಜನಿಕರ ಕಿಡಿಕಾರಿಕೆ

“ಬಡವರ ಹಕ್ಕಿನ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದರೂ ಕ್ರಮ ಕೈಗೊಳ್ಳದಿದ್ದರೆ, ಇಲಾಖೆ ಸ್ವತಃ ಈ ಅಕ್ರಮದಲ್ಲಿ ಭಾಗಿಯಾಗಿದೆಯೇ ಎಂಬ ಅನುಮಾನ ತಪ್ಪದು” ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

 

ಕೊನೆ ಮಾತು

ಅಕ್ರಮ ಸಾಬೀತು… ತಪ್ಪು ಒಪ್ಪಿಕೆ ಇದು ಆದರೂ ಕ್ರಮ ಇಲ್ಲ… ತಡೆಯಾಜ್ಞೆ ಇದೆ…

👉 ಈಗ ವಿಷಯ PIL ಹಂತಕ್ಕೆ ತಲುಪಿದ್ದು, ಇದು ಕೇವಲ ಒಂದು ಅಂಗಡಿ ಪ್ರಕರಣವಲ್ಲ, ಸಂಪೂರ್ಣ ಪಡಿತರ ವ್ಯವಸ್ಥೆಯ ಮೇಲಿನ ಪ್ರಶ್ನೆಯಾಗಿ ಮಾರ್ಪಟ್ಟಿದೆ.

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಅಕ್ರಮ ಗೋ ಸಾಗಾಟ ಹಾಗೂ ಗೋಹತ್ಯೆ ತಡೆಗೆ ಕ್ರಮ ಕೈಗೊಳ್ಳುವಂತೆ ಮನವಿಸರಕಾರಿ ನೌಕರಿ,ಸಂಬಳ ಬೇಕು ಆದರೆ ನಿಯಮ ಬೇಡವಾ...?ಪಿಸ್ತೂಲ್‌ನೊಂದಿಗೆ ಓಡಾಡುತ್ತಿರುವ ಉಪಲೋಕಾಯುಕ್ತ ಬಿ.ವೀರಪ್ಪ“ಕಾಕ್‌ರೋಚ್ ಜನತಾ ಪಾರ್ಟಿ” ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ಸಹನಾ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಸಾಧನೆಹೃದಯಾಘಾತದ ಹಾವಳಿ! ಯುವಜನತೆ ಆತಂಕದಲ್ಲಿ!ವೈದ್ಯರ ಚೀಟಿ ಇಲ್ಲದೆ ಮಾತ್ರೆ ಮಾರಾಟ ಮಾಡಿದರೆ ಕಠಿಣ ಕ್ರಮಇಬ್ಬರ ಜಗಳ ಮೂರನೆಯವರಿಗೆ ಲಾಭ” ಗಾದೆ ಮಾತು ನಿಜವಾಗುತ್ತಾ..?ಸಿಂಧನೂರು ಪರಿಶಿಷ್ಟ ಜಾತಿ ಬಾಲಕರ ವಸತಿ ನಿಲಯದಲ್ಲಿ ಸಮಸ್ಯೆಗಳ ಆಗರಕಿಸ್ಕಿಂದ ಹೆರಿಟೇಜ್ ರೆಸಾರ್ಟ್‌ನಲ್ಲಿ ಪ್ರವಾಸಿಗರ ಚಿನ್ನದ ಸರ ಕಳವು....?‘ಖಾಕಿ’ ಗೂಂಡಾಗಿರಿ ಆರೋಪ: ಸಾರ್ವಜನಿಕನಿಗೆ ಪಿಎಸ್‌ಐ ಕಿರಣ ಮೋಹಿತೆ ಅಶ್ಲೀಲ ನಿಂದನೆ?“ವೇಗದ ತನಿಖೆ, ಖಡಕ್ ಕಾರ್ಯಾಚರಣೆ: ಪಿಎಸ್‌ಐ ಎರಿಯಪ್ಪ ಅಂಗಡಿಗೆ ಎಸ್‌ಪಿ ಮೆಚ್ಚುಗೆ”ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳಿಗೆ ಅವಕಾಶ: ಸಮಾಜದಲ್ಲಿ ಹೆಚ್ಚಿದ ಚರ್ಚೆಜನಸ್ನೇಹಿ ಆಡಳಿತದ ಮೂಲಕ ಇತಿಹಾಸ ಬರೆದ ಜಿಲ್ಲಾಧಿಕಾರಿಸಿಂಧನೂರಿನಲ್ಲಿ ಸಾಧು ವೇಷದಲ್ಲಿ ಕಳ್ಳರ ಕೈಚಳಕ