ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ರಾಯಚೂರಿನಲ್ಲಿ ಜುಲೈ 10ರಂದು ಜಪ್ತಿ ಆಹಾರ ಧಾನ್ಯಗಳ ಬಹಿರಂಗ ಹರಾಜು

Advertisement

780.33 ಕ್ವಿಂಟಾಲ್ ಅಕ್ಕಿ, 1.60 ಕ್ವಿಂಟಾಲ್ ಜೋಳ ಹರಾಜು – ಆಸಕ್ತ ಬಿಡ್‌ದಾರರಿಗೆ ಆಹ್ವಾನ

ರಾಯಚೂರು, ಜುಲೈ 4: ರಾಯಚೂರು ತಾಲೂಕು ಆಹಾರ ಇಲಾಖೆಯಿಂದ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ 780.33 ಕ್ವಿಂಟಾಲ್ ಅಕ್ಕಿ ಹಾಗೂ 1.60 ಕ್ವಿಂಟಾಲ್ ಜೋಳವನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಜುಲೈ 10ರಂದು ಮಧ್ಯಾಹ್ನ 12 ಗಂಟೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ.

Advertisement

ಈ ಹರಾಜು ರಾಯಚೂರಿನ ಶಕ್ತಿನಗರ ರಸ್ತೆಯಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್‌ಸಿಎಸ್‌ಸಿ) ಕಾಟನ್ ಮಾರ್ಕೆಟ್ ಸಗಟು ಮಾರಾಟ ಮಳಿಗೆಯಲ್ಲಿ ನಡೆಯಲಿದ್ದು, ಅರ್ಹ ಬಿಡ್‌ದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮಾ ತಿಳಿಸಿದ್ದಾರೆ.

ಹರಾಜಿನಲ್ಲಿ ಯಾರು ಭಾಗವಹಿಸಬಹುದು?

ಹರಾಜಿನಲ್ಲಿ ಭಾಗವಹಿಸುವವರು:

  • ಎಪಿಎಂಸಿ ಪರವಾನಿಗೆ ಹೊಂದಿರುವ ವ್ಯಾಪಾರಿಗಳು
  • ಸಗಟು ಅಥವಾ ಚಿಲ್ಲರೆ ವ್ಯಾಪಾರಿಗಳು
  • ಕಮಿಷನ್ ಏಜೆಂಟರು
  • ಅಕ್ಕಿ ಗಿರಣಿ ಮಾಲೀಕರು
  • ದೊಡ್ಡ ಪ್ರಮಾಣದ ಬಳಕೆದಾರ ಸಂಸ್ಥೆಗಳು

ಆಗಿರಬೇಕು.

ನೋಂದಣಿ ಹಾಗೂ ಇಎಂಡಿ ಕಡ್ಡಾಯ

ಹರಾಜಿನಲ್ಲಿ ಪಾಲ್ಗೊಳ್ಳುವವರು ಜುಲೈ 10ರಂದು ಬೆಳಿಗ್ಗೆ 10 ಗಂಟೆಯೊಳಗೆ ಹರಾಜು ಸ್ಥಳದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಜೊತೆಗೆ ₹20,000 ಇಎಂಡಿ (Earnest Money Deposit) ಅನ್ನು ಜಿಲ್ಲಾಧಿಕಾರಿಗಳು, ರಾಯಚೂರು ಅವರ ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ (DD) ಮೂಲಕ ಪಾವತಿಸಬೇಕು.

ಅಗತ್ಯ ದಾಖಲೆಗಳು

ಬಿಡ್‌ದಾರರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು:

  • ಎರಡು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ವ್ಯಾಪಾರ ಅಥವಾ ಸಂಸ್ಥೆಯ ನೋಂದಣಿ ಪ್ರಮಾಣಪತ್ರ
  • ಪರವಾನಿಗೆ ಪತ್ರ
  • ಆಧಾರ್ ಕಾರ್ಡ್ ಪ್ರತಿ

ಠೇವಣಿ ಮೊತ್ತ ಹಿಂತಿರುಗಿಸುವ ವಿಧಾನ

ಹರಾಜು ಪೂರ್ಣಗೊಂಡ ಬಳಿಕ ಗರಿಷ್ಠ ಹಾಗೂ ಎರಡನೇ ಗರಿಷ್ಠ ಬಿಡ್‌ದಾರರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಇಎಂಡಿ ಮೊತ್ತವನ್ನು ಸ್ಥಳದಲ್ಲಿಯೇ ಹಿಂತಿರುಗಿಸಲಾಗುತ್ತದೆ.

ಗರಿಷ್ಠ ಬಿಡ್‌ದಾರರು ನಿಗದಿತ ಅವಧಿಯಲ್ಲಿ ಸಂಪೂರ್ಣ ಮೊತ್ತ ಪಾವತಿಸದಿದ್ದರೆ ಅವರ ಠೇವಣಿ ಸರ್ಕಾರಕ್ಕೆ ಮುಟ್ಟುಗೋಲು ಆಗುತ್ತದೆ. ನಂತರ ಎರಡನೇ ಗರಿಷ್ಠ ಬಿಡ್‌ದಾರರಿಗೆ ಅವಕಾಶ ನೀಡಲಾಗುತ್ತದೆ. ಅವರಿಗೂ ಇದೇ ನಿಯಮ ಅನ್ವಯವಾಗಲಿದೆ.

ಯಾರಿಗೆ ಅವಕಾಶ ಇಲ್ಲ?

ಈ ಕೆಳಗಿನವರಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ:

  • ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣಕ್ಕೆ ಒಳಗಾದ ವ್ಯಕ್ತಿಗಳು ಅಥವಾ ಸಂಸ್ಥೆಗಳು
  • ಸಾರ್ವಜನಿಕ ವಿತರಣಾ ವ್ಯವಸ್ಥೆ (PDS)ಯಲ್ಲಿ ಕಾರ್ಯನಿರ್ವಹಿಸುತ್ತಿರುವವರು

ಧಾನ್ಯಗಳ ಪರಿಶೀಲನೆಗೆ ಅವಕಾಶ

ಹರಾಜಿನಲ್ಲಿ ಭಾಗವಹಿಸುವವರು ಧಾನ್ಯಗಳ ಗುಣಮಟ್ಟವನ್ನು ಮುಂಚಿತವಾಗಿ ಪರಿಶೀಲಿಸಬಹುದಾಗಿದೆ. "ಇದ್ದಲ್ಲಿಯೇ, ಇರುವ ಸ್ಥಿತಿಯಲ್ಲೇ" (As is where is basis) ಧಾನ್ಯಗಳನ್ನು ಹರಾಜು ಮಾಡಲಾಗುವುದರಿಂದ, ಹರಾಜು ದಿನ ಮಧ್ಯಾಹ್ನ 12 ಗಂಟೆಯೊಳಗೆ ಸಗಟು ಮಾರಾಟ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.

ಜಿಲ್ಲಾಧಿಕಾರಿಗಳ ಅನುಮೋದನೆ ಬಳಿಕವೇ ವಹಿವಾಟು

ಹರಾಜಿನಲ್ಲಿ ಬಂದ ಬಿಡ್‌ಗಳಿಗೆ ಜಿಲ್ಲಾಧಿಕಾರಿಗಳ ಅನುಮೋದನೆ ದೊರೆತ ನಂತರ, ಆಯ್ಕೆಯಾದ ಬಿಡ್‌ದಾರರು ನಿಗದಿತ ಅವಧಿಯಲ್ಲಿ ಸರ್ಕಾರದ ಲೆಕ್ಕಶೀರ್ಷಿಕೆಗೆ ಸಂಪೂರ್ಣ ಮೊತ್ತ ಜಮಾ ಮಾಡಬೇಕು. ಬಳಿಕ ಚಲನ್ ಸಲ್ಲಿಸಿದ ನಂತರ ಮಾತ್ರ ಧಾನ್ಯಗಳನ್ನು ಎತ್ತುವಳಿಗೆ ಅನುಮತಿ ನೀಡಲಾಗುತ್ತದೆ.

ಎತ್ತುವಳಿ ಹಾಗೂ ಇತರೆ ಶುಲ್ಕ

  • ಎಪಿಎಂಸಿ ಸೆಸ್ ಸೇರಿದಂತೆ ಸರ್ಕಾರಕ್ಕೆ ಪಾವತಿಸಬೇಕಾದ ಎಲ್ಲಾ ಶುಲ್ಕಗಳನ್ನು ಆಯ್ಕೆಯಾದ ಬಿಡ್‌ದಾರರೇ ಭರಿಸಬೇಕು.
  • ಹರಾಜಾದ ಆಹಾರ ಧಾನ್ಯಗಳನ್ನು ಆದೇಶ ನೀಡಿದ ಮೂರು ದಿನಗಳೊಳಗೆ ತಮ್ಮ ಸ್ವಂತ ವೆಚ್ಚದಲ್ಲಿ ಸಗಟು ಗೋದಾಮಿನಿಂದ ಎತ್ತುವಳಿ ಮಾಡಬೇಕು.

ಹೆಚ್ಚಿನ ಮಾಹಿತಿ

ಹರಾಜು ಸಂಬಂಧ ಹೆಚ್ಚಿನ ಮಾಹಿತಿ ಹಾಗೂ ಸಂಪೂರ್ಣ ಷರತ್ತುಗಳಿಗಾಗಿ:

  • ಉಪ ನಿರ್ದೇಶಕರ ಕಚೇರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ರಾಯಚೂರು
  • ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರ ಕಚೇರಿ
  • ರಾಯಚೂರು ತಹಶೀಲ್ದಾರರ ಕಚೇರಿ

ಇವುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್ಮುಂಗಾರು ಹಂಗಾಮಿನ ಬೆಳೆ ವಿಮೆ ಹಾಗೂ ರಸಗೊಬ್ಬರ ದರಗಳ ಪೋಸ್ಟರ್ ಬಿಡುಗಡೆರಾಯಚೂರಿನಲ್ಲಿ ಜುಲೈ 10ರಂದು ಜಪ್ತಿ ಆಹಾರ ಧಾನ್ಯಗಳ ಬಹಿರಂಗ ಹರಾಜುಅಧಿಕಾರಿಗಳ ಮೇಲೆ ಕುಟುಂಬ ರಾಜಕಾರಣ?ಸರ್ಕಾರಿ ಪಿಯುಸಿ ವಿದ್ಯಾರ್ಥಿ ನಿಲಯಕ್ಕೆ ಬಾಡಿಗೆ ಕಟ್ಟಡ ಅಗತ್ಯ – ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನ"ವೈದ್ಯೋ ನಾರಾಯಣೋ ಹರಿಃ" – ದೇವತ್ವದ ಪಂಜರದಲ್ಲಿ ಸಿಲುಕಿದ ಮಾನವೀಯತೆ!ಸಿಂಧನೂರಿನಲ್ಲಿ ಜಪ್ತಿ ಆಹಾರ ಧಾನ್ಯಗಳ ಬಹಿರಂಗ ಹರಾಜು ಜುಲೈ 02ಕ್ಕೆತುಂಗಭದ್ರಾ ಕ್ರಸ್ಟ್ ಗೇಟ್ ಉದ್ಘಾಟನೆಗೆ ಚಂದ್ರಬಾಬು ನಾಯ್ಡುಗೆ ಆಹ್ವಾನಮಕ್ಕಳ ಆರೋಗ್ಯ ಹಕ್ಕು ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಖಾಲಿ ಪೇಪರ್ ಸಹಿ ವಿವಾದ: ಪಿಎಸ್‌ಐ ವಿರುದ್ಧ ವಕೀಲರ ಆಕ್ರೋಶಕೆಲ ಕಪ್ಪು ಕುರಿಗಳಿಂದ ಪೊಲೀಸ್ ಇಲಾಖೆಗೆ ಕಳಂಕ!ತುಂಗಭದ್ರಾ ನೂತನ ಗೇಟ್‌ಗಳ ಉದ್ಘಾಟನೆ: ಆಂಧ್ರ-ತೆಲಂಗಾಣ ಮುಖ್ಯಮಂತ್ರಿಗಳಿಗೆ ಖುದ್ದು ಆಹ್ವಾನ ನೀಡಲು ಶಾಸಕರ ನಿಯೋಗ ರಚನೆಕುಡಿಯುವ ನೀರಿನ ಸಮಸ್ಯೆ ಎದುರಾಗುವ ಪ್ರದೇಶಗಳ ಮಾಹಿತಿ ನೀಡಿ DC ಪೂವಿತಾ ಎಸ್. ಸೂಚನೆ