ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

“ವೇಗದ ತನಿಖೆ, ಖಡಕ್ ಕಾರ್ಯಾಚರಣೆ: ಪಿಎಸ್‌ಐ ಎರಿಯಪ್ಪ ಅಂಗಡಿಗೆ ಎಸ್‌ಪಿ ಮೆಚ್ಚುಗೆ”

ಪ್ರಾಮಾಣಿಕತೆ, ದಕ್ಷತೆ ಮತ್ತು ಜನಪರ ಸೇವೆಗೆ ಪೊಲೀಸ್ ಇಲಾಖೆಯಿಂದ ಗೌರವ

news_1778905892_0_440.webp

news_1778048979_0_441.webp

📍Raichur | ವಿಶೇಷ ವರದಿ bb news kannada 

ಯಾಪಲದಿನ್ನಿ ಕೊಲೆ ಪ್ರಕರಣವನ್ನು ಅತ್ಯಂತ ತ್ವರಿತಗತಿಯಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಹಿನ್ನೆಲೆ ಬಳಗಾನೂರು ಪೊಲೀಸ್ ಠಾಣೆಯ ಪಿಎಸ್‌ಐ Eriyappa Angadi ಅವರಿಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಐಪಿಎಸ್ ಅಧಿಕಾರಿ Arunanshu Giri ಅವರು ಪ್ರಶಂಸಾಪತ್ರ ನೀಡಿ ಗೌರವಿಸಿದ್ದಾರೆ.

“ಯಾಪಲದಿನ್ನಿ ಕೊಲೆ ಪ್ರಕರಣ ಭೇದಿಸಿದ ಜನಸ್ನೇಹಿ ಪಿಎಸ್‌ಐ ಎರಿಯಪ್ಪ ಅಂಗಡಿ – ಎಸ್‌ಪಿ ಅರುಣಾಂಶು ಗಿರಿ ಪ್ರಶಂಸಾಪತ್ರ”
“ಯಾಪಲದಿನ್ನಿ ಕೊಲೆ ಪ್ರಕರಣ ಭೇದಿಸಿದ ಜನಸ್ನೇಹಿ ಪಿಎಸ್‌ಐ ಎರಿಯಪ್ಪ ಅಂಗಡಿ – ಎಸ್‌ಪಿ ಅರುಣಾಂಶು ಗಿರಿ ಪ್ರಶಂಸಾಪತ್ರ”

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ಅಲ್ಪಾವಧಿಯಲ್ಲೇ ಆರೋಪಿಯನ್ನು ಬಂಧಿಸಿದ ಪಿಎಸ್‌ಐ ಎರಿಯಪ್ಪ ಅಂಗಡಿ ಅವರ ಕಾರ್ಯವೈಖರಿಯನ್ನು ಎಸ್‌ಪಿ ಅರುಣಾಂಶು ಗಿರಿ ಶ್ಲಾಘಿಸಿದ್ದು, ಕರ್ತವ್ಯನಿಷ್ಠೆ ಹಾಗೂ ಜನಪರ ಸೇವಾಭಾವದಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಇಂತಹ ಗೌರವಗಳು ಪ್ರೇರಣೆಯಾಗುತ್ತವೆ ಎಂದು ತಿಳಿಸಿದ್ದಾರೆ.

news_1778142080_0_556.webp

ರಾಯಚೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಎರಿಯಪ್ಪ ಅಂಗಡಿ ಅವರು ಸಾರ್ವಜನಿಕರೊಂದಿಗೆ ಸ್ನೇಹಪರವಾಗಿ ನಡೆದುಕೊಳ್ಳುವ ಮೂಲಕ “ಜನಸ್ನೇಹಿ ಪೊಲೀಸ್ ಅಧಿಕಾರಿ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಾಮಾಣಿಕತೆ, ದಕ್ಷತೆ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಗುಣದಿಂದ ಅವರು ಸ್ಥಳೀಯ ಜನರ ಮೆಚ್ಚುಗೆ ಗಳಿಸಿದ್ದಾರೆ.

news_1777986246_0_709.webp

ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಕಾರ್ಯವೈಖರಿಯನ್ನು ಮೆಚ್ಚಿ ಹಲವರು ಅಭಿನಂದನೆ ಸಲ್ಲಿಸುತ್ತಿದ್ದು, “ಇನ್ನಷ್ಟು ಪ್ರಶಂಸಾಪತ್ರಗಳು ಹಾಗೂ ಉನ್ನತ ಹುದ್ದೆಗಳು ದೊರಕಲಿ” ಎಂದು ಹಾರೈಸುತ್ತಿದ್ದಾರೆ.

news_1777986272.webp

ಸಾರ್ವಜನಿಕರು ಪ್ರತಿಕ್ರಿಯೆ ನೀಡುತ್ತಾ, “ಪೊಲೀಸ್ ಇಲಾಖೆಯ ಬಗ್ಗೆ ಕೆಲವೊಮ್ಮೆ ನಕಾರಾತ್ಮಕ ಸುದ್ದಿಗಳು ಕೇಳಿಬರುವ ಈ ಸಂದರ್ಭದಲ್ಲಿ ಜನಪರ ಕಾಳಜಿ ಹೊಂದಿರುವ ಅಧಿಕಾರಿಗಳು ಇಲಾಖೆಯ ಗೌರವವನ್ನು ಹೆಚ್ಚಿಸುತ್ತಿದ್ದಾರೆ. ಎಲ್ಲ ಪೊಲೀಸರು ಒಂದೇ ರೀತಿಯವರಲ್ಲ ಎಂಬುದಕ್ಕೆ ಎರಿಯಪ್ಪ ಅಂಗಡಿ ಅವರೇ ಉತ್ತಮ ಉದಾಹರಣೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

news_1777542755_0_368.webp

ಜನಸೇವೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇನ್ನಷ್ಟು ಸಾಧನೆ ಮಾಡಿ ಸಾರ್ವಜನಿಕರ ವಿಶ್ವಾಸ ಗಳಿಸಲಿ ಎಂದು ಸಾರ್ವಜನಿಕರು ಹಾಗೂ ಅಭಿಮಾನಿಗಳು ಹಾರೈಸಿದ್ದಾರೆ.

Advertisement
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
“ವೇಗದ ತನಿಖೆ, ಖಡಕ್ ಕಾರ್ಯಾಚರಣೆ: ಪಿಎಸ್‌ಐ ಎರಿಯಪ್ಪ ಅಂಗಡಿಗೆ ಎಸ್‌ಪಿ ಮೆಚ್ಚುಗೆ”ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳಿಗೆ ಅವಕಾಶ: ಸಮಾಜದಲ್ಲಿ ಹೆಚ್ಚಿದ ಚರ್ಚೆಜನಸ್ನೇಹಿ ಆಡಳಿತದ ಮೂಲಕ ಇತಿಹಾಸ ಬರೆದ ಜಿಲ್ಲಾಧಿಕಾರಿಸಿಂಧನೂರಿನಲ್ಲಿ ಸಾಧು ವೇಷದಲ್ಲಿ ಕಳ್ಳರ ಕೈಚಳಕಅತಿಥಿ ಉಪನ್ಯಾಸಕರ ಬಿಡುಗಡೆಗೆ ಆಕ್ರೋಶ: ಮೇ 25 ರಿಂದ ಪರೀಕ್ಷಾ ಕಾರ್ಯ ಬಹಿಷ್ಕಾರದ ಎಚ್ಚರಿಕೆ“ಹಂಪನಗೌಡರಿಗಾ ಸಚಿವ ಸ್ಥಾನ? ಬಸವನಗೌಡರಿಗಾ ಅವಕಾಶ?” — ಕಾರ್ಯಕರ್ತರ ನಡುವೆ ವಾಕ್ಸಮರ ತೀವ್ರಜ್ಯೋತಿಷಿ ನೇಮಕಾತಿ ವಿವಾದ: 24 ಗಂಟೆಯಲ್ಲೇ ಆದೇಶ ಹಿಂಪಡೆದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ಮೇ–ಜೂನ್ ಮಾಹೆಯ ಪಡಿತರ ಧಾನ್ಯ ವಿತರಣೆ ಆರಂಭರೈತರಿಂದ ಬಿಳಿಜೋಳ ಖರೀದಿ ಪ್ರಕ್ರಿಯೆಗೆ ಚಾಲನೆ“ಬಡವರ ಬಾರಕೋಲು” ಸುದ್ದಿಗೆ ಫಲಶ್ರುತಿ – ನಾಲ್ಕು ದಿನ ಕತ್ತಲಲ್ಲಿದ್ದ ಇರಕಲ್ ಗ್ರಾಮಕ್ಕೆ ಹೊಸ ಟಿಸಿ ಅಳವಡಿಸಿ ವಿದ್ಯುತ್ ಪೂರೈಕೆ ಪುನರಾರಂಭ!“AI ವೈದ್ಯರನ್ನು ಬದಲಿಸಬಹುದು, ಆದರೆ ನರ್ಸ್‌ನ ಸಹಾನುಭೂತಿಯನ್ನು ಎಂದಿಗೂ ಬದಲಿಸಲು ಸಾಧ್ಯವಿಲ್ಲ”ತಮಿಳುನಾಡಿನಲ್ಲಿ 717 ಮದ್ಯದಂಗಡಿಗಳಿಗೆ ಬೀಗಸಿಂಧನೂರಿನಲ್ಲಿ ಬೆಚ್ಚಿಬೀಳಿಸಿದ ಉದ್ಯಮಿಯ ಆತ್ಮಹತ್ಯೆಅಂಜನಾದ್ರಿ ದೇಗುಲದ ಚಿನ್ನ“₹2.5 ಕೋಟಿ ಚಿನ್ನವೇ…? ಅಥವಾ ಚಿನ್ನ ಲೇಪಿತ ತಾಮ್ರವೇ?”ಕುರಿಗಾರರ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಯ ಘೋಷಣೆ