ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಅಪ್ರಾಪ್ತೆಯ ಗರ್ಭಪಾತ ಪ್ರಕರಣ – ಪ್ರಾಂಶುಪಾಲ, ವಾರ್ಡನ್ ಅಮಾನತು

🛑 ಬ್ರೇಕಿಂಗ್ ನ್ಯೂಸ್

ಕೊಪ್ಪಳ. BB NEWS KANNADA

ಫೆಬ್ರುವರಿ 27. ಕೊಪ್ಪಳ ಜಿಲ್ಲೆಯ ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜುನಲ್ಲಿ ಅಪ್ರಾಪ್ತ ಬಾಲಕಿಗೆ ಗರ್ಭಪಾತ ನಡೆದಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಪ್ರಾಂಶುಪಾಲ ಹನುಮೇಶ್ ಹಾಗೂ ನಿಲಯ ಪಾಲಕಿ ಭಾರತಿ ಅವರನ್ನು ಅಮಾನತು ಮಾಡಲಾಗಿದೆ. ಈ ಕುರಿತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

https://www.instagram.com/reel/DVQA7AHkkGO/?igsh=MTJ3N3NtbnZqOGs3bQ==

ಕರ್ತವ್ಯಲೋಪ–ಬೇಜವಾಬ್ದಾರಿ: ನಾಗರೀಕ ಸೇವಾ ನಿಯಮಗಳಡಿ ಕ್ರಮ

ಪ್ರಾಥಮಿಕ ತನಿಖೆಯಲ್ಲಿ ಕರ್ತವ್ಯ ಲೋಪ, ಬೇಜವಾಬ್ದಾರಿ ಮತ್ತು ಗಂಭೀರ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ರಾಜ್ಯ ನಾಗರೀಕ ಸೇವಾ ನಿಯಮಗಳು–1957ರ ಕಾಯ್ದೆಯಡಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಇಲಾಖಾ ವಿಚಾರಣೆ ಮುಂದುವರಿಯಲಿದೆ.

“ಋತುಸ್ರಾವ” ಎಂದು ಸುಳ್ಳು ವರದಿ?

ಫೆಬ್ರವರಿ 19ರ ರಾತ್ರಿ ಅಪ್ರಾಪ್ತ ಬಾಲಕಿಗೆ ಗರ್ಭಪಾತವಾದ ಬಗ್ಗೆ ಜಿಲ್ಲಾಧಿಕಾರಿ ಮಟ್ಟದ ವಿಚಾರಣೆ ನಡೆಯುವ ವೇಳೆ, ಪ್ರಾಂಶುಪಾಲರು ಸತ್ಯವನ್ನು ಮುಚ್ಚಿಟ್ಟು ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದಾರೆಯೆಂಬ ಗಂಭೀರ ಆರೋಪ ಎದುರಾಗಿದೆ.

ವಸತಿ ಶಾಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಹೇಳಿಕೆ

ಬಾಲಕಿಗೆ ಋತುಸ್ರಾವವಾಗಿದೆ ಎಂದು ವರದಿ.

ಆಸ್ಪತ್ರೆಗೆ ಕರೆದೊಯ್ಯುವಾಗ ಪಾಲಕರು ಬಂದು ಮನೆಗೆ ಕರೆದುಕೊಂಡು ಹೋದರು ಎಂದು ಮೇಲಧಿಕಾರಿಗಳಿಗೆ ಮಾಹಿತಿ.

ಈ ಹೇಳಿಕೆಗಳು ಬಳಿಕ ಸಲ್ಲಿಸಿದ ವರದಿಗಳೊಂದಿಗೆ ಹೊಂದಿಕೆಯಾಗದ ಹಿನ್ನೆಲೆ, “ಸತ್ಯ ಮರೆಮಾಚಲು ಪ್ರಯತ್ನ” ಎಂಬ ಅಭಿಪ್ರಾಯವನ್ನು ಜಿಲ್ಲಾ ಅಧಿಕಾರಿಗಳು ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ.

ಹಿಂದಿನ ಆರೋಪಗಳೂ ಬೆಳಕಿಗೆ

ಈ ಸಂಸ್ಥೆಯ ಆಡಳಿತ ಕ್ರಮಗಳ ಬಗ್ಗೆ ಈ ಹಿಂದೆಯೇ ಗಂಭೀರ ಪ್ರಶ್ನೆಗಳು ಎದ್ದಿದ್ದವು.

  1. ಸಂಜೆ 5 ಗಂಟೆಗೂ ಮುನ್ನ ಪ್ರಾಂಶುಪಾಲರು ಕ್ಯಾಂಪಸ್ ತೊರೆಯುತ್ತಾರೆ ಎಂಬ ದೂರು.

  2. ಪ್ರಮುಖ ಜಯಂತಿ–ಕಾರ್ಯಕ್ರಮಗಳ ನಿರ್ಲಕ್ಷ್ಯ.

  3. ಕಳಪೆ ಧಾನ್ಯ ಬಳಸಿ ಅನ್ನ ತಯಾರಿ.

  4. ಬಳಕೆ ನೀರಿನ ಕೊರತೆ.

  5. ವಿದ್ಯಾರ್ಥಿನಿಯರ ಭದ್ರತೆಯಲ್ಲಿ ಲೋಪ.

  6. ಕಿಟ್‌ ವಿತರಣೆ ವಿಳಂಬ, ಹಾಸಿಗೆಗಳ ಅಕ್ರಮ ಸಾಗಣೆ ಆರೋಪ.


ಈ ಎಲ್ಲಾ ವಿಷಯಗಳ ಕುರಿತು ಸ್ಥಳೀಯ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದರೂ, ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣದ ತಿದ್ದುಪಡಿ ಕ್ರಮ ಕೈಗೊಳ್ಳಲಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

“ಮನೆ ಸುಟ್ಟ ಮೇಲೆ ಬಾವಿ ತೋಡಿದಂತೆ..!”

ಗಂಭೀರ ಘಟನೆ ಹೊರಬಂದ ನಂತರವೇ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ವಿದ್ಯಾರ್ಥಿನಿಯರ ಸುರಕ್ಷತೆ–ಆರೋಗ್ಯಕ್ಕೆ ಸಂಬಂಧಿಸಿದ ಸಂಸ್ಥೆಯಲ್ಲಿ ಇಂತಹ ನಿರ್ಲಕ್ಷ್ಯ ನಡೆದುಬಂದಿದ್ದರೆ, ಮೇಲ್ವಿಚಾರಣಾ ವ್ಯವಸ್ಥೆ ಎಲ್ಲಿತ್ತು? ಎಂಬ ಪ್ರಶ್ನೆ ತಲೆದೋರಿದೆ.

ಮುಂದೇನು?

  1. ಸಂಪೂರ್ಣ ಇಲಾಖಾ ವಿಚಾರಣೆ

  2. ವೈದ್ಯಕೀಯ–ಕಾನೂನು ಆಯಾಮಗಳ ಪರಿಶೀಲನೆ

  3. ಕ್ಯಾಂಪಸ್‌ ಸುರಕ್ಷತಾ ಮಾನದಂಡಗಳ ಮರುಪರಿಶೀಲನೆ

  4. ವಿದ್ಯಾರ್ಥಿನಿಯರ ಆರೋಗ್ಯ–ಭದ್ರತೆಗೆ ವಿಶೇಷ ತಂಡ ನಿಯೋಜನೆ


ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಸಂಬಂಧಿಸಿದ ಸಂಸ್ಥೆಯಲ್ಲಿ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳು ಕೈಗೊಳ್ಳಲಾಗುತ್ತವೆಯೇ? ಅಥವಾ ಇದು ಕೇವಲ ತಾತ್ಕಾಲಿಕ ಅಮಾನತು ಕ್ರಮವಾಗಿಯೇ ಉಳಿಯುತ್ತದೆಯೇ? ಎಂಬುದನ್ನು ಮುಂದಿನ ತನಿಖೆ ಸ್ಪಷ್ಟಪಡಿಸಲಿದೆ.

(ಗಮನಿಸಿ: ಪ್ರಕರಣದಲ್ಲಿ ಅಪ್ರಾಪ್ತೆಯ ಗುರುತು ಬಹಿರಂಗಪಡಿಸದೇ, ಕಾನೂನು ನಿಯಮಗಳನ್ನು ಪಾಲಿಸುವುದು ಮಾಧ್ಯಮದ ಜವಾಬ್ದಾರಿಯಾಗಿದೆ.)
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು: ಸಾರ್ವಜನಿಕರಲ್ಲಿ ಭಯದ ವಾತಾವರಣಸಿಂಧನೂರು ನಗರಸಭೆಗೆ ಹಡಪದ ಸಮಾಜದ ಬೇಡಿಕೆಗಳ ಮನವಿಚಿನ್ನದ ಪದಕ ವಿಜೇತ ಶ್ವೇತಾ ಮೇಟಿ BSC ಕಂಪ್ಯೂಟರ್ ಸೈನ್ಸ್‌ನಲ್ಲಿ 7ನೇ ರಾಂಕ್ಬಸ್–ಕಾರ್ ಡಿಕ್ಕಿಗೆ 6 ಮಂದಿ ಸಜೀವ ದಹನ – ನಿರ್ಲಕ್ಷ್ಯ ರಸ್ತೆಗೆ ಮತ್ತೆ ಬಲಿ!ಮರಕ್ಕೆ ಕಾರು ಡಿಕ್ಕಿ: ಸಿಪಿಐ ರಘುನಾಥ್ ಸ್ಥಳದಲ್ಲೇ ದುರ್ಮರಣಗುತ್ತಿಗೆ ಪದ್ಧತಿ ವಿರೋಧಿಸಿ ಆಕ್ರೋಶ“ಕತ್ತು ಕೊಯ್ಯುವುದನ್ನು ನಿಲ್ಲಿಸಿ” – ಸರ್ಕಾರದ ವಿರುದ್ಧ ಆಕ್ರೋಶವಿಠಲಪುರದಲ್ಲಿ ಅಂಬೇಡ್ಕರ್ ಜಯಂತಿ ಉತ್ಸಾಹಭರಿತ ಆಚರಣೆಸಿಂಧನೂರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮೂವರ ಬಂಧನಮನುಸ್ಮೃತಿಯ ಕತ್ತಲೆಯಿಂದ ಸಂವಿಧಾನದ ಬೆಳಕಿನೆಡೆಗೆ ಅಂಬೇಡ್ಕರ್ ಎಂಬ ಯುಗಪುರುಷ ಮಸ್ಕಿಯಲ್ಲಿ ಬಿಜೆಪಿ V/S ಬಿಜೆಪಿ: ಅಭ್ಯರ್ಥಿ ಗೊಂದಲ, ಒಳಜಗಳ ಬಹಿರಂಗಕೊಪ್ಪಳದಲ್ಲಿ ಸದ್ದು ಮಾಡಿದ ಪ್ರಕರಣ: ವಿದ್ಯಾರ್ಥಿನಿಯರ ವಿಡಿಯೋಗಳ ಆರೋಪಕ್ಕೆ ಬೆಚ್ಚಿಬಿದ್ದ ಜನತೆಪ್ರೀತಿಯ ಹೆಸರಲ್ಲಿ ಮೋಸ: ಮದುವೆ ನಂಬಿಸಿ ಯುವತಿಗೆ ದ್ರೋಹ, ಪ್ರಕರಣ ದಾಖಲುಲೋಕಾಯುಕ್ತ ದಾಳಿ: ₹1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಮುಖ್ಯಾಧಿಕಾರಿ ಬಂಧನಲಂಚ ಪಡೆದ ಪಿ.ಡಿ.ಓಗೆ ಜೈಲು ಶಿಕ್ಷೆ: 7 ವರ್ಷಗಳ ಕಾರಾವಾಸ, ₹75 ಸಾವಿರ ದಂಡಮೊಬೈಲ್ ದಾಸರಾಗಬೇಡಿ, ವಿದ್ಯಾವಂತರಾಗಿ – ಡಿ.ವೈ.ಎಸ್.ಪಿ ಚಂದ್ರಶೇಖರ್ ಕರೆ