https://youtu.be/3-srTfNo1dw
18 ವರ್ಷ ತುಂಬಿ ಎಲ್ಲಾ ವಯಸ್ಕ ಪ್ರೌಡ ಪ್ರಜೆಗಳಿಗೆ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಸಾಮಾನ್ಯವಾಗಿ ಚುನಾವಣೆ ಗುಪ್ತ ಮತದಾನ ಪದ್ಧತಿ ಮೂಲಕ ನಡೆಯುವಂತಹದ್ದು, ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ರೂಪಿಸಿರುವ ವ್ಯವಸ್ಥೆ ಇದಾಗಿದೆ. ಇಂತಹ ಅತ್ಯುತಮ ವ್ಯವಸ್ಥೆಯಲ್ಲಿ ಭಾರತಿಯ ಪ್ರಜೆಗಳಾದ ನಾವು ಪ್ರಭುದ್ಧತೆಯಿಂದ ಅಮೂಲ್ಯವಾದ ಮತವನ್ನು ಮೇ 10 ರಂದು ಗ್ರಾಮದ ಎಲ್ಲಾರೂ ತಪ್ಪದೇ ಮತ ಚಲಾಯಿಸಿ, ಶತ ಪ್ರತಿಶತ ಮತದಾನ ರಾಯಚೂರು ಜಿಲ್ಲೆಯ ವಾಗ್ದಾನವನ್ನು ಯಶಸ್ವಿಯಾಗಿ ಪೂರೈಸೋಣ ಎಂದು ಮನವಿ ಮಾಡಿದರು ನಂತರ ಮತದಾನದ ಪ್ರತಿಜ್ಞೆವಿಧಿ ಭೋದಿಲಸಾಯಿತು.

ಏಪ್ರಿಲ್ 1 ರಿಂದ ನರೇಗಾ ಕೂಲಿ ಮೊತ್ತವು 309 ರಿಂದ 316 ಕ್ಕೆ ಹೆಚ್ಚಿಸಲಾಗಿದೆ. ಮೇಟ್ ಗಳು ಎನ್.ಎಮ್.ಎಮ್.ಎಸ್ ಅ್ಯಪ್ ಮೂಲಕ ಪ್ರತಿದಿನದ ಹಾಜರಾತಿಯನ್ನು ಪಡೆಯಬೇಕು. ಯೋಜನೆಯಡಿ ಸಿಗುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆಯಲು ಮಾಹಿತಿ ತಿಳಿಸಲಾಯಿತು ಹಾಗೂ ಪ್ರತಿಜ್ಞೆ ವಿಧಿಯನ್ನು ಥಾಮಸ್ ತಾಲೂಕ ಐಇಸಿ ಸಂಯೋಜಕರು ಬೋದಿಸಿದರು...

ಸದರಿ ಕೂಲಿ ಕಾರ್ಮಿ ಕರಿಗೆ ಉಚಿತವಾಗಿ ಬಿಪಿ.ಶುಗಾರ್ ಹಾಗೂ ಹೀಮಾಗ್ಲೋಬಿನ್,ರಕ್ತ ಪರೀಕ್ಷೆ ಚೆಕ್ ಮಾಡಿ,ಅವಶ್ಯಕವಿರುವ ಕೂಲಿ ಕಾರ್ಮಿಕರಿಗೆ ಸ್ದಳದಲ್ಲಿ ಮಾತ್ರೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪೂರ್ಣಿಮಾ ಪಿಡಿಒ,ಆರೋಗ್ಯ ಇಲಾಖೆಯ ಆಧಿಕಾರಿಗಳಾದ ಶೇಖರ್ ನಾಯಕ್ ಸಂಜು ಮೂರ್ತಿ ,ಕೆಎಚಪ್ಟಿಯ ಆಶಾ ಕಾರ್ಯಕರ್ತರು ಅಂಜಮ್ಮ ಬಿ.ಎಪ್.ಟಿ, ಡಿಇಒ,ಕರವಸೂಲಿಕಾರ ,ಗ್ರಾಮ ಪಂಚಾಯತಿಯ ಇನ್ನೀತರ ಸಿಬ್ಬಂದಿಗಳು, ಮೇಟಿಗಳು ಮತ್ತು ಕೂಲಿಕಾರರು ಹಾಜರಿದ್ದರು













