ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಭೂತಲದಿನ್ನಿಯಲ್ಲಿ ಭರ್ಜರಿ ಸಾಮಾಜಿಕ ನಾಟಕ – “ಗಂಡು ಮೆಟ್ಟಿದ ನಾಡಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ”

 

ಯುಗಾದಿ ಪ್ರಯುಕ್ತ ಭೂತಲದಿನ್ನಿಯಲ್ಲಿ ಭರ್ಜರಿ ಸಾಮಾಜಿಕ ನಾಟಕ – “ಗಂಡು ಮೆಟ್ಟಿದ ನಾಡಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ” ಖ್ಯಾತ ರಂಗಭೂಮಿ ಕಲಾವಿದ ಶಿವು ಸಣ್ಣಗೌಡ್ರವರ ಆರನೇ ಕಲಾಕೃತಿ – ಒಂದೇ ದಿನದ ವಿಶೇಷ ಪ್ರದರ್ಶನಕ್ಕೆ ಸಿದ್ಧತೆ

ಸಿಂಧನೂರು

ಭೂತಲದಿನ್ನಿ ಯುಗಾದಿ ಹಬ್ಬದ ಸಂಭ್ರಮದ ಅಂಗವಾಗಿ ಭೂತಲದಿನ್ನಿಯಲ್ಲಿ ಅದ್ದೂರಿಯಾಗಿ ಸಾಮಾಜಿಕ ನಾಟಕ “ಗಂಡು ಮೆಟ್ಟಿದ ನಾಡಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ” ಪ್ರದರ್ಶನಗೊಳ್ಳಲಿದೆ. ಖ್ಯಾತ ರಂಗಭೂಮಿ ಕಲಾವಿದರಾದ ಶ್ರೀ ಶಿವರೆಡ್ಡಿ ಗೌಡ (ಶಿವು ಸಣ್ಣಗೌಡ್ರು) ಅವರ ಆರನೆಯ ಕಲಾಕೃತಿಯಾಗಿ ಈ ನಾಟಕ ರಂಗಭೂಮಿಗೆ ಬರುತ್ತಿದ್ದು, ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಸಮಾಜಮುಖಿ ಸಂದೇಶ ನೀಡುವ ಉದ್ದೇಶ ಹೊಂದಿದೆ.

ಈ ನಾಟಕದಲ್ಲಿ ಕುಟುಂಬ, ಸಮಾಜ, ರೈತನ ಬದುಕು, ಪ್ರೀತಿ, ಸ್ನೇಹ, ನ್ಯಾಯ ಹಾಗೂ ಕ್ರಾಂತಿಯ ಭಾವನೆಗಳನ್ನು ಒಳಗೊಂಡ ಕಥಾಹಂದರವನ್ನು ಮೂಡಿಸಲಾಗಿದೆ. “ಗಂಡು ಮೆಟ್ಟಿದ ನಾಡಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಅರ್ಥಾರ್ಥ ರೈತನಾದರೆ ಉಪಕಾರಿ, ಸಿಡಿದೆದ್ದರೆ ಕ್ರಾಂತಿಕಾರಿ” ಎಂಬ ಸಂದೇಶವನ್ನು ಒಳಗೊಂಡ ಈ ನಾಟಕವು ರೌದ್ರಮಯ, ಕೌಟುಂಬಿಕ ಹಾಗೂ ಹಾಸ್ಯಭರಿತ ಸನ್ನಿವೇಶಗಳೊಂದಿಗೆ ಪ್ರೇಕ್ಷಕರ ಮನ ಗೆಲ್ಲುವಂತಿದೆ.



ಯುಗಾದಿ ಹಬ್ಬದ ಪ್ರಯುಕ್ತ ಇದೇ ತಿಂಗಳ ಮಾರ್ಚ್ 18 - 2026 ರಂದು ವಿಶೇಷವಾಗಿ ಒಂದೇ ಪ್ಪ್ರಯೋಗ ಈ ನಾಟಕ ಪ್ರದರ್ಶನಗೊಳ್ಳಲಿದ್ದು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುವಂತೆ ಬಸವರಾಜಗೌಡ ಮಿತ್ರ ಮಂಡಳಿ ಭೂತಲದಿನ್ನಿ ಮನವಿ ಮಾಡಿದೆ.

ಈ ಕುರಿತು ಮಾತನಾಡಿದ ಕವಿ ಹಾಗೂ ನಾಟಕಕಾರ ಶಿವು ಸಣ್ಣಗೌಡ್ರು, “ಇದು ನನ್ನ ಆರನೆಯ ಕಲಾಕೃತಿ. ಈ ನಾಟಕದ ಕಥೆ ಸಂಪೂರ್ಣವಾಗಿ ನನ್ನ ಕಲ್ಪನೆಯ ಮೇಲೆ ರಚಿತವಾಗಿದ್ದು, ಸಮಾಜದ ಹಲವು ಆಯಾಮಗಳನ್ನು ಸ್ಪರ್ಶಿಸುತ್ತದೆ. ರಂಗಭೂಮಿಯನ್ನು ಉಳಿಸಲು ಜನರ ಪ್ರೋತ್ಸಾಹ ಅತ್ಯಗತ್ಯ. ಆದ್ದರಿಂದ ಮಹಿಳೆಯರು, ಯುವಕರು, ಹಿರಿಯರು ಎಲ್ಲರೂ ಬಂದು ಈ ನಾಟಕವನ್ನು ನೋಡಿ ರಂಗಭೂಮಿ ಕಲಾವಿದರಿಗೆ ಬೆಂಬಲ ನೀಡಬೇಕು” ಎಂದು ವಿನಂತಿಸಿದರು.



 

ನಾಟಕದಲ್ಲಿ ಮಹೇಶಪ್ಪ ಪಾತ್ರವನ್ನು ಅಯ್ಯಪ್ಪ, ಬ್ರಹ್ಮಾನಂದ ಪಾತ್ರವನ್ನು ಚಂದ್ರಾಮಪ್ಪ ಬಾಗಲವಾಡ, ವಿಷ್ಣು ಪಾತ್ರವನ್ನು ಎಸ್.ಎಸ್. ಜೀನೂರ, ಉಗ್ರಪ್ಪ ಪಾತ್ರವನ್ನು ಚನ್ನು ಜಂಗ್ರಹಳ್ಳಿ, ರಾಣಾ. ಪಾತ್ರವನ್ನು ಬಸವರಾಜ್ ಹಡಪದ್, ಯಕ್ಕರಾಜ ಪಾತ್ರವನ್ನು ಶಿವರೆಡ್ಡಿ ಕಿಡದೂರ್ (ಶಿವು ಸಣ್ಣಗೌಡ್ರು), ಕಮಲಾಕ್ಷ ಪಾತ್ರವನ್ನು ಶರಣಯ್ಯ ಸ್ವಾಮಿ ಮಠಪತಿ ಹಾಗೂ ವಿರೂಪಾಕ್ಷ ಪಾತ್ರವನ್ನು ತಬೀರ್ ಟಿ. ಅವರು ನಿರ್ವಹಿಸಲಿದ್ದಾರೆ.

ಸ್ತ್ರೀ ಪಾತ್ರಗಳಲ್ಲಿ ಗಿರಿಜಾ, ಗೀತಾ (ರತ್ನ ಬಾದಾಮಿ), ಸಂಗೀತ (ಶೋಭಾ ಬಾದಾಮಿ) ಮತ್ತು ಕಾಮಾಕ್ಷಿ (ಸುವರ್ಣ ಬಾದಾಮಿ) ಅವರು ಅಭಿನಯಿಸಲಿದ್ದಾರೆ.

ಸಂಗೀತ ಬಳಗವನ್ನು ಕ್ಯಾಂಪ್ ಹನುಮೇಶ್ ಮತ್ತು ಚಿನ್ನು ತಾವರಗೇರಾ ತಂಡ ನಿರ್ವಹಿಸಲಿದ್ದು, ಮೇಕಪ್ ಕಾರ್ಯವನ್ನು ಶಶಿ ಗಂಗೂರು ಮಾಡಲಿದ್ದಾರೆ. ರಂಗಸಜ್ಜಿಕೆಯನ್ನು ಕೂಕನಪಳ್ಳಿ ಸುಂಗಯ್ಯ ಸ್ವಾಮಿ ನಿರ್ವಹಿಸಲಿದ್ದು, ಸೀನ್ಸ್ ನಿರ್ದೇಶನವನ್ನು ಶಿವು ಸಣ್ಣಗೌಡ್ರು ವಹಿಸಿಕೊಂಡಿದ್ದಾರೆ. ಕಥಾ ಸಂಚಾಲಕರಾಗಿ ಗುಂಡಪ್ಪ ಎಂ. ಪಗಡದಿನ್ನಿ, ಕಾರ್ಯಕ್ರಮ ನಿರ್ವಹಣೆಯನ್ನು ಅವಿನಾಶ್ ಅಂಗಡಿ ನೋಡಿಕೊಳ್ಳಲಿದ್ದಾರೆ.

ಒಟ್ಟಿನಲ್ಲಿ ಸಮಾಜದ ವಿವಿಧ ಮುಖಗಳನ್ನು ತೆರೆದಿಡುವ ಈ ನಾಟಕವು ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಚಿಂತನೆಗೆ ದಾರಿ ಮಾಡಿಕೊಡುವ ನಿರೀಕ್ಷೆಯಿದೆ. ಹೀಗಾಗಿ ಯುಗಾದಿ ಸಂಭ್ರಮದಲ್ಲಿ ಈ ವಿಶೇಷ ನಾಟಕವನ್ನು ನೋಡಲು ಎಲ್ಲರೂ ಆಗಮಿಸಿ ರಂಗಭೂಮಿಗೆ ಬೆಂಬಲ ನೀಡಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಕೊಪ್ಪಳದಲ್ಲಿ ಸದ್ದು ಮಾಡಿದ ಪ್ರಕರಣ: ವಿದ್ಯಾರ್ಥಿನಿಯರ ವಿಡಿಯೋಗಳ ಆರೋಪಕ್ಕೆ ಬೆಚ್ಚಿಬಿದ್ದ ಜನತೆಪ್ರೀತಿಯ ಹೆಸರಲ್ಲಿ ಮೋಸ: ಮದುವೆ ನಂಬಿಸಿ ಯುವತಿಗೆ ದ್ರೋಹ, ಪ್ರಕರಣ ದಾಖಲುಲೋಕಾಯುಕ್ತ ದಾಳಿ: ₹1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಮುಖ್ಯಾಧಿಕಾರಿ ಬಂಧನಲಂಚ ಪಡೆದ ಪಿ.ಡಿ.ಓಗೆ ಜೈಲು ಶಿಕ್ಷೆ: 7 ವರ್ಷಗಳ ಕಾರಾವಾಸ, ₹75 ಸಾವಿರ ದಂಡಮೊಬೈಲ್ ದಾಸರಾಗಬೇಡಿ, ವಿದ್ಯಾವಂತರಾಗಿ – ಡಿ.ವೈ.ಎಸ್.ಪಿ ಚಂದ್ರಶೇಖರ್ ಕರೆಪಿಯುಸಿ ಫಲಿತಾಂಶದಲ್ಲಿ ಯಡವಟ್ಟು 600 ಕ್ಕೆ 603 ಅಂಕ! ಕರೆಗೂ ಸ್ಪಂದಿಸದ ಅಧಿಕಾರಿ, ಲಕ್ಷಾಂತರ ಅಕ್ರಮ ಆರೋಪ – ರೌಡಕುಂದದಲ್ಲಿ ಗದ್ದಲಗು.ವಿ.ಸ.ಕಂ.ನಿ ಕ್ಕೆ ನಾಗರಾಜ್ ಗಸ್ತಿ ನಾಗರತ್ನ ವಾಗೀಶ್ ರಾರಾವಿ ಸೇರಿದಂತೆ 41 ಸದಸ್ಯರ ನಾಮ ನಿರ್ದೇಶನಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹವೇದಿಕೆಯಲ್ಲೇ ಕುಸಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆವಿಷದ ಗಾಳಿಯಲ್ಲಿ ನರಳುತ್ತಿರುವ ಹಿರೇಬಗನಾಳ!ಏಪ್ರಿಲ್ 2 ರಂದು ಪೊಲೀಸ್ ಧ್ವಜ ದಿನಾಚರಣೆಎಸ್ಸೆಸ್ಸೆಲ್ಸಿ ತೃತೀಯ ಭಾಷೆ ಪರೀಕ್ಷೆಗೆ 682 ವಿದ್ಯಾರ್ಥಿಗಳು ಗೈರುಭಗವಾನ್ ಮಹಾವೀರರ ಶಾಂತಿ, ಸೌಹಾರ್ಧತೆ ಸಂದೇಶಗಳು ಇಂದಿಗೂ ಪ್ರಸ್ತುತ: ಡಾ. ಹಂಪಣ್ಣ ಸಜ್ಜನ್ಏಪ್ರಿಲ್–ಮೇ ತಿಂಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ