
ಗಂಡು ಮತ್ತು ಹೆಣ್ಣೆಂಬ ಭೇದವಿಲ್ಲದೇ ಖಾತ್ರಿ ಯೋಜನೆಯಡಿಯಲ್ಲಿರುವ ಸಮಾನ ಕೂಲಿಯಂತೆ ಮತದಾನವೂ ಬಡವ ಬಲ್ಲಿದರಿಗೆ ಒಂದೇ ಮತದಾನದ ಹಕ್ಕು ನೀಡಲಾಗಿದೆ. ಆದ್ದರಿಂದ ನಿಮ್ಮ ಮತ ನಿಮ್ಮ ಹಕ್ಕಾಗಿದ್ದು ನಿರ್ಭೀಯವಾಗಿ ಚಲಾಯಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೀದಿ ನಾಟಕ ಗೀಗೀ ಪದಗಳ ಮೂಲಕ ಬಳ್ಳಾರಿ ಸನ್ಮಾರ್ಗ ಬಳಗ ತಂಡ ಕಲಾ ತಡವರಿಂದ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.
ಇದೇ ವೇಳೆ ಜಿಪಂ ನರೇಗಾ ಯೋಜನಾ ನಿರ್ದೇಶಕ ಶ್ರೀ ಪ್ರಮೋದ್, ತಾ.ಪ. ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಐಇಸಿ ಸಂಯೋಜಕ ಸುರೇಶ್, ಟಿಸಿ ಪ್ರದೀಪ್, ಜಿಲ್ಲಾ ಸ್ವೀಪ್ ಸಮಿತಿಯ ಎರಿಸ್ಬಾಮಿ, ಮೆಹತಾಬ್, ಸತ್ಯನಾರಾಯಣ, ತಾಲೂಕಿನ ಪಿಡಿಒಗಳು, ತಾಂತ್ರಿಕ ಸಹಾಯಕರು ಹಾಗೂ ಬಿಎಪ್ಟೊ ಕಾಯಕ.ಮಿತ್ರ ಹಾಜರಿದ್ದರು













