ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಏಳು–ಎಂಟು ದಿನಕ್ಕೊಮ್ಮೆ ನೀರು! ಸಿಂಧನೂರು ನಗರಸಭೆ ನಿದ್ದೆಯಲ್ಲಾ..? – ಕುಡಿಯುವ ನೀರಿಗಾಗಿ ಜನರ ಹಾಹಾಕಾರ

Advertisement
ಸಿಂಧನೂರು:ಜನವರಿ 29
ಚಳಿಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೆ, ಇದಕ್ಕಿಂತ ದೊಡ್ಡ ಆಡಳಿತ ವೈಫಲ್ಯ ಇನ್ನೇನು ಬೇಕು? ಸಿಂಧನೂರು ನಗರದಲ್ಲಿ ಏಳು ರಿಂದ ಎಂಟು ದಿನಕ್ಕೊಮ್ಮೆ ಕೇವಲ ಎರಡು ಗಂಟೆಗಳಷ್ಟೇ ನೀರು ಬಿಡುತ್ತಿರುವ ನಗರಸಭೆಯ ಧೋರಣೆ ಸಾರ್ವಜನಿಕರ ಸಹನಶೀಲತೆಯನ್ನೇ ಪರೀಕ್ಷಿಸುವಂತಾಗಿದೆ.

ಎರಡು ಗಂಟೆಗಳ ಕಾಲ ಬಿಡುವ ನೀರೂ ಸಹ ಕಸ–ಕಡ್ಡಿ, ಮಣ್ಣು ಮಿಶ್ರಿತ ಗಲೀಜು ನೀರು ಆಗಿದ್ದು, ಅದನ್ನು ಕುಡಿಯುವುದಂತೂ ದೂರ, ಮನೆಯ ಬಳಕೆಗೂ ಯೋಗ್ಯವಲ್ಲ ಎಂಬ ಆರೋಪಗಳು ಎಲ್ಲೆಡೆ ಕೇಳಿಬರುತ್ತಿವೆ. ಕುಡಿಯುವ ನೀರು ಕೊಡಲಾಗದ ನಗರಸಭೆ ಇನ್ನೇನು ಆಡಳಿತ ನಡೆಸುತ್ತಿದೆ? ಎಂಬ ಪ್ರಶ್ನೆ ಸಾರ್ವಜನಿಕರ ಮನಸ್ಸಿನಲ್ಲಿ ಮೂಡಿದೆ.


ಏಷ್ಯಾದಲ್ಲಿ ನಂಬರ್ ಒನ್ ತಾಲೂಕು ಎಂಬ ಹೆಸರಿಗಿಂತ ವಾಸ್ತವ್ಯವೇ ಬೇರೆ ಎಂಬುದನ್ನು ಸಿಂಧನೂರು ನಗರಸಭೆ ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ. ಏಳು–ಎಂಟು ದಿನಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ ಜನರು ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗಿ ಹಣ ಸುರಿಯುವಂತಾಗಿದೆ. ಬಡವರ ಪಾಲಿಗೆ ಇದು ಶೋಷಣೆಯೇ ಆಗಿದ್ದು, ಮಧ್ಯಮ ವರ್ಗದವರಿಗೆ ಭಾರೀ ಆರ್ಥಿಕ ಹೊಡೆತವಾಗಿದೆ.

ವಾಟರ್‌ಮ್ಯಾನ್‌ಗಳಿಗೆ ದೂರು ನೀಡಿದರೆ ಕಿವಿಗೇ ಬೀಳುವುದಿಲ್ಲ, ನಗರಸಭೆ ಆಯುಕ್ತರಿಗೆ ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಹಾಗಾದರೆ ಈ ನಗರವನ್ನು ಯಾರು ನೋಡಿಕೊಳ್ಳುತ್ತಿದ್ದಾರೆ? ಅಧಿಕಾರಿಗಳು ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆಯೇ ಅಥವಾ ಜನರ ಸಂಕಷ್ಟವನ್ನು ನೋಡಲು ಅಸಮರ್ಥರಾಗಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಸ್ಥಳೀಯರ ಪ್ರಕಾರ, ಮೂರರಿಂದ ನಾಲ್ಕು ದಿನಕ್ಕೊಮ್ಮೆ ನೀರು ಬಿಡುವುದೇ ಸಾಕು, ಆಗ ಕೆರೆಗಳಲ್ಲೂ ನೀರು ಉಳಿಯುತ್ತದೆ, ಜನರಿಗೂ ನೆಮ್ಮದಿ ಸಿಗುತ್ತದೆ. ಆದರೆ ಯಾವುದೇ ಯೋಜನೆ ಇಲ್ಲದೆ, ಬೇಕಾಬಿಟ್ಟಿಯಾಗಿ ಏಳು–ಎಂಟು ದಿನಕ್ಕೊಮ್ಮೆ ನೀರು ಬಿಡುವ ಮೂಲಕ ಸಾರ್ವಜನಿಕರನ್ನು ಕಿರಿಕಿರಿ ಮಾಡಲಾಗುತ್ತಿದೆ ಎಂಬ ಆರೋಪ ಗಂಭೀರವಾಗಿದೆ.

ಚಳಿಗಾಲದಲ್ಲೇ ಈ ಸ್ಥಿತಿ ಇದ್ದರೆ, ಬೇಸಿಗೆಯಲ್ಲಿ ಸಿಂಧನೂರಿನ ಜನರು ನೀರಿಗಾಗಿ ರಸ್ತೆಗೆ ಇಳಿಯಬೇಕಾಗುತ್ತದೆಯೇ? ಎಂಬ ಆತಂಕ ಎಲ್ಲೆಡೆ ವ್ಯಕ್ತವಾಗಿದೆ. ಇದಕ್ಕೂ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ, ಜನರ ಸಹನೆ ಮುಗಿಯುವ ದಿನ ದೂರವಿಲ್ಲ.

ಈಗಲಾದರೂ ನಗರಸಭೆ ಆಯುಕ್ತರು ನಿದ್ರಾವಸ್ಥೆಯಿಂದ ಎಚ್ಚೆತ್ತು, ಸಂಬಂಧಪಟ್ಟ ವಾಟರ್‌ಮ್ಯಾನ್‌ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ನೀರು ಸರಬರಾಜು ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಇಲ್ಲವಾದರೆ, “ಏಷ್ಯಾದ ನಂಬರ್ ಒನ್ ತಾಲೂಕು” ಎಂಬ ಹೆಸರಿಗೆ ಸಿಂಧನೂರು ನಗರವೇ ಅಪಮಾನವಾಗಲಿದೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್