ನಂತರ ಮಾತನಾಡಿದ ಅಭ್ಯರ್ಥಿ ನಿರುಪಾದಿ ಕೆ ಗೊಮರ್ಸಿ ಸಿಂಧನೂರಿನಲ್ಲಿ ಇಷ್ಟು ದಿನಗಳ ಕಾಲ ಕುಟುಂಬ ರಾಜಕಾರಣ, ಹಣದ ರಾಜಕಾರಣ, ತೋಳ್ಬಲದ ರಾಜಕಾರಣ ನಡೆಯುತ್ತಿತ್ತು ಇಂತಹ ವ್ಯವಸ್ಥೆಯನ್ನು ಬದಲಾಯಿಸಲು ಕೆಎಸ್ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ.

ತಲೆ ನಾನು ಕ್ಷೇತ್ರದ ಹಲವಾರು ಸಮಾಜಿಕ ಸಮಸ್ಯೆಗಳನ್ನ ನಿವಾರಣೆ ಮಾಡುವ ಮುಖಾಂತರ ಅನ್ಯಾಯ ಅಕ್ರಮ ಭ್ರಷ್ಟಾಚಾರ ದಬ್ಬಾಳಿಕೆಯನ್ನು ತಡೆದಿದ್ದೇನೆ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ,ಮಹಿಳೆಯರ, ವಿದ್ಯಾರ್ಥಿಗಳ ,ಕೃಷಿ ಕಾರ್ಮಿಕರ ಪರವಾದಂತಹ ಕಾರ್ಯಕ್ರಮಗಳನ್ನ ಮಾಡುವ ಮುಖಾ0ತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕೆಆರ್ಎಸ್ ಪಕ್ಷದ ಜಿಲ್ಲಾ ಗೌರವಾಧ್ಯಕ್ಷ ಆದಪ್ಪ ಅಂಕುಶದೊಡ್ಡಿ ಸಂಘಟನಾ ಕಾರ್ಯದರ್ಶಿ ಶರಣಪ್ಪ ಗೊರಬಾಳ್ ತಾಲೂಕಾಧ್ಯಕ್ಷ ಚನ್ನಬಸವ ಸೋಮಲಾಪುರ್ ತಾಲೂಕು ಉಪಾಧ್ಯಕ್ಷ ಶರಣಪ್ಪ ಅಂಚಿನಾಳ್ ತಾಲೂಕ ಅಧ್ಯಕ್ಷ ದ್ಯಾವಣ್ಣ ಪುಲದಿನ್ನಿ ನಗರ ಘಟಕದ ಅಧ್ಯಕ್ಷ ಕೃಷ್ಣ ಸುಕಲ್ಪೇಟೆ , ಚೆನ್ನಬಸವ, ಶ್ರೀಕಾಂತ,ಬಸವ ಪ್ರಭು ,ಶ್ರೀಮತಿ ಗಂಗಾ, ಹಾಗೂ ವಿವಿಧ ತಾಲೂಕ ಪದಾಧಿಕಾರಿಗಳು ಸೈನಿಕರು ಭಾಗಿಯಾಗಿದ್ದರು.













