ಮಸ್ಕಿ : ತಾಲ್ಲೂಕಿನ ಶ್ರೀ ಮರಿಸ್ವಾಮಿ ತಂದೆ ಮಲ್ಲಪ್ಪ ಸಾ॥ ಮುದಬಾಳ ಇವರನ್ನು
ಕೆ.ಪಿ.ಸಿ.ಸಿ ಅಸಂಘಟಿತ ಕಾರ್ಮಿಕ ಕಾಂಗ್ರೇಸ್ ಸಮಿತಿ,ರಾಜ್ಯ ಅಧ್ಯಕ್ಷರಾದ ಶ್ರೀ.ಜಿ.ಎಸ್.ಮಂಜುನಾಥ ಇವರ ಅನುಮೋದನೆ ಹಾಗೂ ಶ್ರೀಯುತ.ಎನ್.ಎಸ್.ಬೋಸರಾಜು ರವರು,ಮಾನ್ಯ ಸಣ್ಣ ನೀರಾವರಿ ಸಚಿವರು ಹಾಗೂ ಸನ್ಮಾನ್ಯ ಶ್ರೀ.ಡಾ.ಶರಣಪ್ರಕಾಶ್ ಪಾಟೀಲ್ ರವರು,ವೈದ್ಯಕೀಯ ಶಿಕ್ಷಣ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು,ಹಾಗೂ ಶ್ರೀ.ಆರ್.ಬಸವನಗೌಡ ತುರುವಿಹಾಳ,ಅಧ್ಯಕ್ಷರುಖಾದಿ ಮತ್ತು ಗ್ರಾಮದ್ಯೋಗ ಮಂಡಳಿ ಹಾಗೂ ಶ್ರೀ ಕಿಶೋರ ಗಾಯಕವಾಡ,ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಕಲ್ಯಾಣ ಕರ್ನಾಟಕ ಉಸ್ತುವಾರಿ ಇವರ ಮತ್ತು ರಾಯಚೂರು ಜಿಲ್ಲಾಧ್ಯಕ್ಷರು
ವಿ.ಎಸ್.ಯಲ್ಲಪ್ಪ ನವರ ಶಿಫಾರಸ್ಸಿನ ಮೇರೆಗೆ
ಶ್ರೀ ಮರಿಸ್ವಾಮಿ ಇವರನ್ನು ಕೆ.ಪಿ.ಸಿ.ಸಿ ಅಸಂಘಟಿತ ಕಾರ್ಮಿಕ ಘಟಕದ "ರಾಯಚೂರು ಜಿಲ್ಲಾ ಸಂಚಾಲಕರಾಗಿ " ನೇಮಿಸಿ ಆದೇಶಿಸಿಲಾಗಿದೆ.

ಈ ಆದೇಶವು ತಕ್ಷಣದಿಂದ ಜಾರಿಗೊಳಿಸುವಂತೆ ನೇಮಿಸಲಾಗಿದ್ದರಿಂದ ತಾವುಗಳು ಕೆ.ಪಿ.ಯು.ಡಬ್ಲ್ಯೂ.ಸಿ.ಯ ಮಾರ್ಗದರ್ಶನದಲ್ಲಿ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ,ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಹೆಚ್ಚಿನ ಸಹಕಾರಿಯಾಗುವಂತಾಗಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯೋನ್ಮುಖರಾಗಬೇಕೆಂದು ತಿಳಿಸುತ್ತಾ,ಈ ನಿಟ್ಟಿನಲ್ಲಿ ತಮಗೆ ಇನ್ನೂ ಹೆಚ್ಚಿನ ಯಶಸ್ಸು ದೊರೆಯಲೆಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳು,ಹಾಗೂ ಆತ್ಮೀಯರು ಹಾಜರಿದ್ದರು.
ವರದಿ : ಎಚ್.ಕೆ.ಬಡಿಗೇರ್
https://youtu.be/judz_plvGHE?si=IYc2q6wcSM7W14A-













