ಮಸ್ಕಿ ಏಪ್ರಿಲ್ 16.ಅಭಿನಂದನ್ ಸಂಸ್ಥೆಯ ವತಿಯಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಅಂಗವಾಗಿ ಈ ವಾರದ ಅಂದರೆ 93ನೇ ವಾರದ ಸೇವಾ ಕಾರ್ಯವನ್ನು ಮಸ್ಕಿ ತಾಲೂಕಿನ ವ್ಯಾಪ್ತಿಗೆ ಬರುವ ಬೈಲಗುಡ್ಡ ಗ್ರಾಮದ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣವನ್ನು ಹಚ್ಚುವ ಮೂಲಕ ಸುಂದರಗೊಳಿಸಲಾಯಿತು ನಂತರ ಗ್ರಾಮದ ನಾಗರಿಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲಕರವಾಗುವ ವಾತಾವರಣವನ್ನು ಬಸ್ ನಿಲ್ದಾಣದಲ್ಲಿ ಕಲ್ಪಿಸಲಾಯಿತು.
https://youtu.be/h03xkTAfAYg
ಈ ಸೇವಕರದಲ್ಲಿ ಬಸವರಾಜಪ್ಪ ಗೌಡ , ಶರಣಬಸವ ತೀರ್ಥಭಾವಿ, ಅಮರೇಶ್ ನಾಯಕ್, ಮಂಜುನಾಥ್ ಬೆಲ್ಗುಡ್ಡ, ಅಭಿನಂದಂನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಪದಾಧಿಕಾರಿಗಳಾದ ಜಾಫರಮಿಯ, ಮಲ್ಲಿಕಾರ್ಜುನ ಬಡಿಗೇರ, ಕಾರ್ತಿಕ್ ಜೋಗಿನ್, ಬಸಲಿಂಗಪ್ಪ ಬಾದರ್ಲಿ, ಅಮರೇಶ ಕಿಲ್ಲಾರಟ್ಟಿ ಹಾಗೂ ಬೈಲಗುಡ್ಡದ ನಾಗರಿಕರು ಉಪಸ್ಥಿತರಿದ್ದರು.