
ಸಿಂಧನೂರು ತಾಲೂಕು ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಕರ್ನಾಟಕ ರಾಜ್ಯ ಸರಕಾರದ ಮಾಧ್ಯಮ ಅಕಾಡೆಮಿಯಿಂದ ಅತ್ಯುತ್ತಮ ವರದಿಗೆ ನೀಡುವ ರಾಜ್ಯಮಟ್ಟದ ಅಭಿಮನ್ಯು ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಜಯ ಕರ್ನಾಟಕ ದಿನಪತ್ರಿಕೆಯ ವಸ್ತುನಿಷ್ಠ, ಜನಪರ ಕಾಳಜಿಯ ಬರಹಗಾರರು, ಯುವ ಪತ್ರಕರ್ತ ಹಾಗೂ ನ್ಯಾಯವಾದಿಗಳಾದ ಶ್ರೀ ಚಂದ್ರಶೇಖರ ಬೆನ್ನೂರು ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಶುಭಾಶಯಗಳನ್ನು ಕೋರುತ್ತಿದ್ದಾರೆ.
ನಿಮ್ಮ ದಶಕದ ನೈಜ, ವಸ್ತುನಿಷ್ಠ ಬರಹಗಳಿಗೆ ಸ್ಫೂರ್ತಿ ಸಿಕ್ಕಿದ್ದು, ನಿಮ್ಮ ಸೇವೆ ನಿರಂತರವಾಗಿ ಸಾಗಲಿ ಮತ್ತು ಇಂತಹ ಇನ್ನೂ ಹತ್ತು ಹಲವಾರು ಪ್ರಶಸ್ತಿಗಳು ಲಭಿಸಲಿ ಎಂದು ಬಡವರ ಬಾರಕೋಲು ಪತ್ರಿಕೆ ಶುಭ ಹಾರೈಸುತ್ತದೆ. ಪತ್ರಿಕಾ ಕ್ಷೇತ್ರದಲ್ಲಿ ಸಿಂಧನೂರಿನ ಕೀರ್ತಿಯನ್ನು ರಾಜ್ಯಮಟ್ಟಕ್ಕೆ ತಲುಪುವಂತೆ ಮಾಡಿದ ನಿಮ್ಮಗೆ ಕೃತಜ್ಞತೆಗಳು.













