ಸಿಂಧನೂರು, ಡಿಸೆಂಬರ್ 11
ತಾಲೂಕಿನ ಜಾಲಿಹಾಳ ಗ್ರಾಮ ಪಂಚಾಯಿತಿ ಕಚೇರಿಯ 4 ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್ ಬಾಕಿ ಪಾವತಿಸದ ಕಾರಣ, ಜೆಸ್ಕಾಂನಿAದ ಸಂಪರ್ಕ ಕಡಿತಗೊಳಿಸಲಾಗಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ.
ಈ ಕುರಿತು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಜಯಶ್ರೀ ಅವರು ವಿಚಾರಿಸಿದಾಗ, “ಜೆಸ್ಕಾಂಗೆ 4 ಲಕ್ಷ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಪಾವತಿಸಬೇಕಿರುವುದು ನಿಜ. ದಿನಾಂಕ: 12-12-2025ರಂದು ಸಂಸ್ಥೆಗೆ ಚೆಕ್ ನೀಡಲಾಗಿದೆ. ಯಾವುದೇ ರೀತಿ ವಿದ್ಯುತ್ ಸಂಪರ್ಕ ಕಡಿತ ಮಾಡಿಲ್ಲ” ಎಂದು ಹೇಳುತ್ತಾರೆ.
ಜೆಸ್ಕಾಂನ ಜೆಇ ಶರಣಬಸವ ಅವರನ್ನು ಸಂಪರ್ಕಿಸಿದಾಗ, “ಜಾಲಿಹಾಳ ಗ್ರಾಮ ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿಲ್ಲ. ವಿದ್ಯುತ್ ಬಿಲ್ ಬಾಕಿ ಇರುವುದು ಮಾತ್ರ ನಿಜ. ಎಷ್ಟು ಎನ್ನುವುದು ಸ್ಪಷ್ಟವಾಗಿ ಗೊತ್ತಿಲ್ಲ. ಹೆಚ್ಚಿನ ಮಾಹಿತಿ ಬೇಕಿದ್ದರೆ ಸಿಂಧನೂರು ತಾಲೂಕು ಕಚೇರಿ ಸಂಪರ್ಕಿಸಿ” ಎಂದು ಉಡಾಫೆಯಿಂದ ಪ್ರತಿಕ್ರಿಯಿಸುತ್ತಾರೆ. ಸಂಬAಧಿಸಿದ ಅಧಿಕಾರಿಗಳು ನೀವೇ ಆಗಿದ್ದು, ಅಲ್ಲಿನ ಲೈನ್ಮನ್ ಅವರಿಗೆ ವಿದ್ಯುತ್ ಕಡಿತಗೊಳಿಸಲು ಹೇಳಿದ್ದು ನೀವೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ. ನಾನು ಯಾವುದೇ ರೀತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಹೇಳಿಲ್ಲ. ಅಂದಾಜು 3 ಲಕ್ಷ ರೂಪಾಯಿಗೂ ಅಧಿಕ ಬಾಕಿ ಬಿಲ್ ಇರುತ್ತದೆ ಎಂದು ಸುಳ್ಳು ಮಾಹಿತಿಯನ್ನು ನೀಡಿರುತ್ತಾರೆ. ಈ ಕುರಿತು ಲೈನ್ಮನ್ ಅವರನ್ನು ವಿಚಾರಿಸಲಾಗಿ, ನಮ್ಮ ಅಧಿಕಾರಿಗಳಾದ ಜೆಇ ಶರಣಬಸವ ಅವರು ಪಂಚಾಯಿತಿಯಿAದ ಚೆಕ್ ನೀಡುವವರೆಗೂ, ಕಚೇರಿಗೆ ವಿದ್ಯುತ್ ಸಂಪರ್ಕ ನೀಡಬೇಡಿ ಎಂದು ಸೂಚಿಸಿದ್ದು, ಹಾಗಾಗಿ ಪಂಚಾಯಿತಿ ಕಚೇರಿಯ ಡ್ಯೂವೆಲ್ ತೆಗೆದಿದುವುದಾಗಿ ತಿಳಿಸಿರುತ್ತಾರೆ.
ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ
ಗ್ರಾ.ಪಂ. ಪಿಡಿಒ ಹಾಗೂ ಜೆಸ್ಕಾಂ ಜೆಇ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಯಾರೇ ಸಾರ್ವಜನಿಕರು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬಂದರೆ ವಿದ್ಯುತ್ ಇಲ್ಲ ಎಂದು ಸಿಬ್ಬಂದಿ ಹೇಳಿ ಕಳುಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಧ್ಯಮದವರಿಗೆ ಮಾಹಿತಿ ಗೊತ್ತಾಗಿದ್ದುದು ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಗ್ರಾ.ಪಂ.ಪಿಡಿಒ ಅವರು ಅಧ್ಯಕ್ಷರಿಂದ ಚೆಕ್ಗೆ ಸಹಿ ಮಾಡಿಸಿಕೊಂಡು ಜೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ನೀಡಿದರೆ, ಈ ನಡುವೆ ಜೆಸ್ಕಾಂ ಜೆಇ ಅವರು ಸಹ ಪಂಚಾಯಿತಿ ಕಚೇರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿರುತ್ತಾರೆ.













