ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಜ್ಞಾನ ಮನುಷ್ಯನಿಗೆ ಬೀಳಲು ಬಿಡುವುದಿಲ್ಲ ಸಂಸ್ಕಾರ ತಲೆತಗ್ಗಿಸಲು ಬಿಡುವುದಿಲ್ಲ ಶ್ರೀ ಸದಾನಂದ ಶರಣರು

Advertisement
ಮಾ 26.ಸಿಂಧನೂರು ನಗರದ ಕುಷ್ಟಗಿ ಮುಖ್ಯರಸ್ತೆಯಲ್ಲಿ ಬರುವ ಜನಸ್ಪಂದನ ಕಾರ್ಯಾಲಯ ಉದ್ಘಾಟನೆ ಸಮಾರಂಭ ಅದ್ದೂರಿಯಾಗಿ ನಡೆಯಿತು ಜನಪ್ರಿಯ ಯುವ ನಾಯಕ ಹಾಗೂ ಮಾಜಿ ಯುವ ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರಾದ ಮತ್ತು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಸನಗೌಡ ಬಾದರ್ಲಿ ಅವರ ಜನಸ್ಪಂದನ ಕಾರ್ಯಾಲಯ ಉದ್ಘಾಟನೆ ನಂತರ ಮಾತಾಡಿದ ಶ್ರೀ ಸದಾನಂದ ಶರಣರು, ಬಸನಗೌಡ ಬಾದರ್ಲಿಗೆ ಮುಂದೆ ಗುರಿ ಇದೆ. ಹಿಂದೆ ಗುರುಗಳ ಆಶಿರ್ವಾದವಿದೆ. ಜನರ ಆಶಿರ್ವಾದವೊಂದಿದ್ದರೆ ಅವರು ಬೇಗ ತಮ್ಮ ಗುರಿ ತಲುಪುತ್ತಾರೆ. ಬಸನಗೌಡ ಮತ್ತು ಅವರ ಅವರು ಕುಟುಂಬ ಮೊದಲಿನಿಂದಲೂ ದಾನ ಧರ್ಮ ಭಕ್ತಿಯಲ್ಲಿ ಹೆಸರುವಾಸಿಯಾದವರು

https://youtu.be/dyJgm8O7mi0

 



ಜನನಾಯಕ ಯಾರಂದರೆ ಸದಾ ಬಡವ ದೀನದಲಿತ ನೊಂದವರ ಧ್ವನಿಯಾಗಿ ಕಷ್ಟಗಳಲ್ಲಿ ಸ್ಪಂದಿಸುವ ನಾಯಕನೇ ಜನನಾಯಕ ಅವರೇ ಬಸನಗೌಡ ಬಾದರ್ಲಿ ಯುವ ನಾಯಕ . ಸದಾ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಸನಗೌಡ ಬಾದರ್ಲಿ ಅವರು ಸಮಾಜದ ಎಲ್ಲಾ ಜಾತಿ ಧರ್ಮದ ವರ್ಗದ ಪ್ರೀತಿ ಗಳಿಸಿದ್ದಾರೆ. ಪ್ರತಿ ವರ್ಷ ಶ್ರೀಶೈಲಕ್ಕೆ ಹೋಗುವ ಲಕ್ಷಾಂತರ ಭಕ್ತರಿಗೆ ಅನ್ನದಾನ, ಕೊರೋನಾ ಸಮಯದಲ್ಲಿ ಬಡವ ಬಲ್ಲಿದರೆನ್ನದೆ ತಾಲೂಕಿನಾದ್ಯಂತ ಸಂಚರಿಸಿ ಅವರ ಕಷ್ಟದಲ್ಲಿ ಪಾಲ್ಗೊಳ್ಳುವ ಮೂಲಕ ದಾನ ಧರ್ಮದ ಕೆಲಸ ಬಸನಗೌಡ ಬಾದರ್ಲಿ ಮಾಡಿದ್ದಾರೆ. ಅವರು ಮಾಡಿರುವ ಧರ್ಮಕ್ಕೆ ಜಯ ಸಿಗುತ್ತದೆ ಧರ್ಮವು ನಿಧಾನವಾಗಿ ಗೆಲ್ಲುತ್ತದೆ ಮತ್ತು ಆದಷ್ಟು ಬೇಗನೆ ಅವರಿಗೆ ಸ್ಥಾನಮಾನ ಅಧಿಕಾರ ಸಿಗಲಿ ಶೀಘ್ರ ಮೇವು ಅಧಿಕಾರ ಪ್ರಾಪ್ತಿರಸ್ತು ಎಂದರು.


ಮೂರು ಮೈಲ್ ಕ್ಯಾಂಪಿನ ರಂಬಾಪುರಿಯ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯರು, ಒಳಬಳ್ಳಾರಿ ಬಸವಲಿಂಗ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯರು ರೌಡಕುಂದಾ, ಬಂಗಾರಿಕ್ಯಾಂಪ್ ಸದಾನಂದ ಸ್ವಾಮೀಜಿ, ಮಾದಯ್ಯಸ್ವಾಮಿ ಗುರುವಿನ್ ತುರುವಿಹಾಳ, ಅಡವಿ ಅಮರೇಶ್ವರದ ಶಾಂತಮಲ್ಲ ಶಿವಾಚಾರ್ಯ, ತೋಂಟದಾರ್ಯ ಸ್ವಾಮೀಜಿ, ಶಂಭುಲಿಂಗಸ್ವಾಮೀಜಿ, ಮಹಾಂತ ಶಿವಾಚಾರ್ಯ ಸ್ವಾಮೀಜಿ, ಬಳಗಾನೂರು ಸಿದ್ದಬಸವಸ್ವಾಮೀಜಿ, ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಬಸಯ್ಯ ಸ್ವಾಮಿ ಗುಂಜಳ್ಳಿ, ಮಲ್ಲಯ್ಯ ಸ್ವಾಮೀಜಿ, ಚನ್ನಮಲ್ಲ ಸ್ವಾಮೀಜಿ, ಸಯ್ಯದ್‌ಬಾಬಾ ಖಾಜಿ, ಮೌಲನಾಖಾಜಿ, ಆ‌ರ್.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕ ಸೋಮನಗೌಡ ಬಾದರ್ಲಿ ಇದ್ದರು.



ಇದೇ ಸಂದರ್ಭದಲ್ಲಿ ಗುರು ವಂದನಾ ಕಾರ್ಯ ಕ್ರಮ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಶಿವಕುಮಾರ ಜವಳಿ, ಮುಖಂಡರಾದ ವೆಂಕಟೇಶ ರಾಗಲಪರ್ವಿ, ಶರಣಯ್ಯಸ್ವಾಮಿ, ಮೂಕಪ್ಪ ಗಾಂದಿನಗರ, ಶಂಕರ ಗೌಡ ಸೋಮನಗೌಡ ಬಾದರ್ಲಿ ಯುವ ಕಾಂಗ್ರೆಸ್ ನ ಅಧ್ಯಕ್ಷ ಅಬೀಬ್ ಖಾಜಾ ಸಾಬ್ ರೌಡಕುಂದ ಸೇರಿದಂತೆ ಸಾವಿರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್