ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ತೆಕ್ಕಲಕೋಟೆ ಪಟ್ಟಣದಲ್ಲಿ ರಂಜಾನ್ ಹಬ್ಬದ ಆಚರಣೆ

Advertisement
ಏಪ್ರಿಲ್ 22.ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಹೊರವಲಯದಲ್ಲಿರುವ ಸುನ್ನೀ ಈದ್ಗಾ ಮೈದಾನದಲ್ಲಿ ಮುಸ್ಲೀಂ ಬಾಂಧವರು ಸೇರಿ ಶ್ರದ್ಧೆ ಭಕ್ತಿ ದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಮರಿಗೆ ಪವಿತ್ರವಾದ ಮಾಸ ರಂಜಾನ್. ಈ ಒಂದು ತಿಂಗಳು ಮುಂಜಾನೆಯ ಸೂರ್ಯೋದಯ ಮುಂಚೆ ಯಿಂದ ಸೂರ್ಯಸ್ತದತನಕ ಹನಿ ನೀರನ್ನು ಸೇವಿಸದೆ ಅನ್ನ ಆಹಾರ ಪಾನಿಯವನ್ನು ತೊರೆದು ಅಲ್ಲಾಹನ (ದೇವನ) ಆದೇಶ ಪಾಲಿಸಿದ ಉಪವಾಸಿಗರಿಗಾಗಿ ಅಲ್ಲಾಹನು ಉಡುಗೊರೆಯ ರೂಪದಲ್ಲಿ ನೀಡಿದ ಈದುಲ್ ಫಿತರ್ (ರಂಜಾನ್) ಹಬ್ಬವನ್ನು ಮುಸ್ಲಿಮರು ಆಚರಿಸುತ್ತಾರೆ. ಹಗಲು ಹೊತ್ತಿನಲ್ಲಿ ಕಣ್ಣಮುಂದೆ ಅನ್ನ ಹಾರ ಇದ್ದರೂ, ದೇವನ (ಅಲ್ಲಾಹನ) ಮೇಲಿನ ಭಯದಿಂದ ಅದನ್ನು ಸಂಪೂರ್ಣ ತೆರೆಯುತ್ತಾರೆ.

https://youtu.be/ku7VNsVGYLs

ರಾತ್ರಿ ಹೊತ್ತಿನಲ್ಲಿ ವಿಶೇಷ ರೀತಿಯ ಪ್ರಾರ್ಥನೆ ಸಲ್ಲಿಸುತ್ತಾರೆ . ಈ ಪ್ರಾರ್ಥನೆಗೆ ತರಾವೀಹ್ ಎಂದು ಕರೆಯುತ್ತಾರೆ.

ಈ ತರವೀಹ್ ನವಾಜ್ ಮಾಡಿದರೆ ಪುಣ್ಯ ಸಿಗುತ್ತದೆ ಎಂಬ ಮುಸ್ಲಿಮರ ವಾಡಿಕೆ. ಈದುಲ್ ಫಿತರ್ ಹಬ್ಬದ ಸಂಭ್ರಮ ಆರಂಭವಾಗುತ್ತದೆ. ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಮಕ್ಕಳು ಮೆಹೆಂದಿ ಹಚ್ಚುವುದರಲ್ಲಿ ತುಳಿಸಿಕೊಳ್ಳುತ್ತಾರೆ. ಮನೆಯ ಮಹಿಳೆಯರು ವಿವಿಧ ರೀತಿಯ ಆಹಾರ ಖಾದ್ಯಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ ಹೀಗೆ ಹಬ್ಬದ ಸಂಭ್ರಮದಲ್ಲಿ ತೊಡಗುತ್ತಾರೆ.

ಈ ಹಬ್ಬದ ವಿಶೇಷ ಎಂದರೆ ಝಕಾತ್ ನೀಡುವುದು. ಝಕಾತ್ ಎಂದರೆ ಬಡವನಿರಲಿ, ಬಲ್ಲಿದನಿರಲಿ ಪ್ರತಿಯೊಬ್ಬ ಮುಸ್ಲಿಮನಿಗೆ ಕಡ್ಡಾಯವಾಗಿದೆ. ಈ ಝಕಾತ್ ಈದ್ ನವಾಜ್ ಗಿಂತ ಮುಂಚಿತವಾಗಿ ದಾನ ಮಾಡಬೇಕು. ಇದರ ಉದ್ದೇಶ ಯಾವ ಮುಸ್ಲಿಮರೂ ಹಬ್ಬದ ಸಂಭ್ರಮದಿಂದ ವಂಚಿತವಾಗಬಾರದೆಂದು ಆಗಿದೆ.

ಝಕಾತ್ ಎಂದರೆ ಎರಡುವರೆ ಕಿಲೋ ಗ್ರಾಂ ನಷ್ಟು ಆಯಾ ಪ್ರದೇಶದ ಪ್ರಮುಖ ಆಹಾರ ಧಾನ್ಯವನ್ನು ದಾನವಾಗಿ ಮಾಡಬೇಕು.ಇದರಲ್ಲಿ ಅಕ್ಕಿ ಬೇಳೆ ಗೋಧಿ ಇತ್ಯಾದಿ ಯಾವುದಾದರೂ ಒಂದು ಆಹಾರಧಾನ್ಯವನ್ನು ನೀಡಬಹುದು.ಇದು ತನ್ನ ದೈನಂದಿನ ಖರ್ಚಿನಿಂದ ಉಳಿದ ಮತ್ತದಿಂದ ನೀಡುವುದು ಪ್ರತಿಯೊಬ್ಬನ ಕರ್ತವವಾಗಿದೆ.

ಗಂಡು ಮಕ್ಕಳಾದರೂ ಹೆಣ್ಣು ಮಕ್ಕಳಾದರೂ ಝಕಾತ್ ನೀಡುವುದು ಅದು ಕಡ್ಡಾಯವಾಗಿದೆ. ಈ ಝಕಾತ್ ಬಡವರ ಮನೆಯನ್ನು ಹುಡುಕಿ ನೀಡುವುದು ಇದರ ವಿಶೇಷವಾಗಿದೆ. ಝಕಾತ್ ಮಾಡದೇ ಇದ್ದರೆ ಅವನಿಗೆ ಹಬ್ಬ ಆಚರಿಸಲು ನೈತಿಕ ಇರುವುದಿಲ್ಲ. ಇದಕ್ಕೆ ಇಸ್ಲಾಂ ಧರ್ಮದಲ್ಲಿ ಅಷ್ಟೊಂದು ಪ್ರಾಮುಖ್ಯತೆ ನೀಡಲಾಗುತ್ತದೆ. ಹಬ್ಬಕ್ಕೆ ಈದ್ರ್ ಫಿತರ್ ಎಂದು ಕರೆಯಲಾಗುತ್ತದೆ. ಎಂದು

ಖತೀಬ (ಧರ್ಮ ಗುರು) ರಿಂದ ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಸಮಸ್ತ ಮುಸ್ಲಿಂ ಬಂಧುಗಳು ಪ್ರಾರ್ಥನೆ ಸಲ್ಲಿಸಿದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್