ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ತೊಗಲುಗೊಂಬೆ ಕಲಾವಿದ ನಾಡೋಜ್ ಬಳಗಲ್ ವೀರಣ್ಣ ನಿಧನ

Advertisement
ಬಳ್ಳಾರಿ ಏ.02 ರಾಜ್ಯ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ತೊಗಲುಗೊಂಬೆ ಆಟ ಪ್ರಾತ್ಯಕ್ಷಿಕೆ ಕಲಾ ಶಿಬಿರ ನಡೆಸಿ ಹಲವಾರು ದೇಶ ವಿದೇಶಗಳಲ್ಲಿ ಗೊಂಬೆಯಾಟವನ್ನು ಗುರುತಿಸಿದಂತ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೆಮ್ಮೆಯ ಪುತ್ರ, ತೊಗಲು ಗೊಂಬೆಯ ದಂತ ಕಥೆ, ಹಿರಿಯ ಕಲಾವಿದ ಶ್ರೀ ನಾಡೋಜ ಬೆಳಗಲ್ಲು ವೀರಣ್ಣನವರು ಅವರು (91) ಚಳ್ಳಕೆರೆ ಮಾರ್ಗದ ಬಳಿ ರಸ್ತೆಯಲ್ಲಿ ಇಂದು ಬೆಳಗ್ಗೆ ವಾಹನ ಅಪಘಾತಕ್ಕೀಡಾಗಿ ನಿಧನವಾಗಿದ್ದಾರೆ ಎಂದು ತಿಳಿದು ಬಂದಿದೆ



ಗೊಂಬೆ ಆಡ್ಸೋನು ಮೇಲೆ ಕುಂತವ್ನೆಂದು ಹಾಡಿನಲ್ಲಿ ಕೇಳಿದ್ದುಂಟು ಆದರೆ ಗೊಂಬೆ ಆಡ್ಸೋರು ಬಳ್ಳಾರಿಯಲ್ಲಿ ಇದ್ದರು

ಹೌದು ಆತ್ಮೀಯ ಓದುಗರೇ ಬಳ್ಳಾರಿಯ ಬೆಳಗಲ್ ವೀರಣ್ಣ ಅವರು ಸುಪ್ರಸಿದ್ಧ ಗೊಂಬೆ ಆಟದ ತಂಡ ಮಹಾತ್ಮ ಗಾಂಧಿ ಅವರ ಜೀವನವನ್ನು ಆಧರಿಸಿ ಆಟವನ್ನು ಪ್ರದರ್ಶಿಸುತ್ತಿದ್ದರು ಬೆಳಗಲ್ ವೀರಣ್ಣ ಅವರು ಕಲಾವಿದರ ಮನೆತನದಲ್ಲಿ ಜನಿಸಿ ವೀರಣ್ಣ ಅವರು ಚಿಕ್ಕವರಿಂದಲೇ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು.



ಶ್ರೀ ಚಂದಯ್ಯ ಸ್ವಾಮಿಯವರು ತಮ್ಮ ನಾಟಕ ಕಂಪನಿಗೆ ಇವರನ್ನು ಆಹ್ವಾನಿಸಿದರು. ಅವರು ತಗೂಲುಗೊಂಬೆಯ ಆಟಗಳ ಕಲೆಯನ್ನು ಪುನರ್ಜೀವಗೊಳಿಸುವ ಚಟುವಟಿಕೆಗಳಲ್ಲಿ 1980 ರಿಂದ ತೊಡಗಿಕೊಂಡರು ರಾಮಾಯಣದ ಪಂಚವಟಿ ಕಥಾಭಾಗವನ್ನು ನಡೆಸಿಕೊಡುವಲ್ಲಿ ದಾಖಲೆಯನ್ನೇ ನಿರ್ಮಿಸಿದ್ದಾರೆ

ಇವರು ತಮ್ಮ ಗೊಂಬೆ ಆಟದ ಮೂಲಕ ಪ್ರವಾದಿ ಬಸವೇಶ್ವರ ಕಿತ್ತೂರು ಚೆನ್ನಮ್ಮ ಭಾರತ ಸ್ವತಂತ್ರ ಸಂಗ್ರಾಮ ಮಹಾತ್ಮ ಗಾಂಧಿ ಮುಂತಾದ ಕಥೆಗಳನ್ನು ನಿರೂಪಿಸುವಲ್ಲಿ ಪ್ರಸಿದ್ಧರು ಮತ್ತು ಗೌತಮ್ ಬುದ್ಧ ವಿವೇಕಾನಂದ ಮತ್ತು ಅಂಬೇಡ್ಕರ್ ಅವರ ಕಥೆಗಳನ್ನು ತೊಗಲು ಗೊಂಬೆಆಟ ಪ್ರದರ್ಶಿಸಿದ್ದರು

 

ಸ್ವಿಡ್ಜರ್ಲ್ಯಾಂಡ್ ಝಾರಿಚ್ ನ್ ರೆಯಿಡ್ ಬರ್ಗ್ ೬೦ನೇಯ ಭಾರತ -ಸ್ವಿಸ್ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಹ್ವಾನಿತರು ಜರ್ಮನಿಯ ಲಿಂಡನ್ ಮ್ಯೂಸಿಯಂ ಕೂಡ ಇವರನ್ನು ಆಹ್ವಾನಿಸಿತ್ತು ಜಗತ್ತಿನ ಇನ್ನೂ ಕೆಲವುಕಡೆ ಪ್ರದರ್ಶನ ನೀಡಿದ್ದಾರೆ

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಜಾನಪದ ಅಕಾಡೆಮಿಗಳ ಪ್ರಶಸ್ತಿಗಳು, ಕರ್ನಾಟಕ ಸರ್ಕಾರದ ಜಾನಪದ ಶ್ರೀ ಪ್ರಶಸ್ತಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಇನ್ನು ಹಲವು ಪ್ರಶಸ್ತಿಗಳ ಬಾಜಿನರು ಇವರ ಜನನ ಬಳ್ಳಾರಿ ಜಿಲ್ಲೆಯ ಬೆಳಗಲಿನಲ್ಲಿ ಅಕ್ಟೋಬರ್ ೦೬-೧೯೩೬ ರಂದು ಜನನವಾಯಿತು
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್