ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ತೊಗಲುಗೊಂಬೆ ಕಲಾವಿದ ನಾಡೋಜ್ ಬಳಗಲ್ ವೀರಣ್ಣ ನಿಧನ

ಬಳ್ಳಾರಿ ಏ.02 ರಾಜ್ಯ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ತೊಗಲುಗೊಂಬೆ ಆಟ ಪ್ರಾತ್ಯಕ್ಷಿಕೆ ಕಲಾ ಶಿಬಿರ ನಡೆಸಿ ಹಲವಾರು ದೇಶ ವಿದೇಶಗಳಲ್ಲಿ ಗೊಂಬೆಯಾಟವನ್ನು ಗುರುತಿಸಿದಂತ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೆಮ್ಮೆಯ ಪುತ್ರ, ತೊಗಲು ಗೊಂಬೆಯ ದಂತ ಕಥೆ, ಹಿರಿಯ ಕಲಾವಿದ ಶ್ರೀ ನಾಡೋಜ ಬೆಳಗಲ್ಲು ವೀರಣ್ಣನವರು ಅವರು (91) ಚಳ್ಳಕೆರೆ ಮಾರ್ಗದ ಬಳಿ ರಸ್ತೆಯಲ್ಲಿ ಇಂದು ಬೆಳಗ್ಗೆ ವಾಹನ ಅಪಘಾತಕ್ಕೀಡಾಗಿ ನಿಧನವಾಗಿದ್ದಾರೆ ಎಂದು ತಿಳಿದು ಬಂದಿದೆ



ಗೊಂಬೆ ಆಡ್ಸೋನು ಮೇಲೆ ಕುಂತವ್ನೆಂದು ಹಾಡಿನಲ್ಲಿ ಕೇಳಿದ್ದುಂಟು ಆದರೆ ಗೊಂಬೆ ಆಡ್ಸೋರು ಬಳ್ಳಾರಿಯಲ್ಲಿ ಇದ್ದರು

ಹೌದು ಆತ್ಮೀಯ ಓದುಗರೇ ಬಳ್ಳಾರಿಯ ಬೆಳಗಲ್ ವೀರಣ್ಣ ಅವರು ಸುಪ್ರಸಿದ್ಧ ಗೊಂಬೆ ಆಟದ ತಂಡ ಮಹಾತ್ಮ ಗಾಂಧಿ ಅವರ ಜೀವನವನ್ನು ಆಧರಿಸಿ ಆಟವನ್ನು ಪ್ರದರ್ಶಿಸುತ್ತಿದ್ದರು ಬೆಳಗಲ್ ವೀರಣ್ಣ ಅವರು ಕಲಾವಿದರ ಮನೆತನದಲ್ಲಿ ಜನಿಸಿ ವೀರಣ್ಣ ಅವರು ಚಿಕ್ಕವರಿಂದಲೇ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು.



ಶ್ರೀ ಚಂದಯ್ಯ ಸ್ವಾಮಿಯವರು ತಮ್ಮ ನಾಟಕ ಕಂಪನಿಗೆ ಇವರನ್ನು ಆಹ್ವಾನಿಸಿದರು. ಅವರು ತಗೂಲುಗೊಂಬೆಯ ಆಟಗಳ ಕಲೆಯನ್ನು ಪುನರ್ಜೀವಗೊಳಿಸುವ ಚಟುವಟಿಕೆಗಳಲ್ಲಿ 1980 ರಿಂದ ತೊಡಗಿಕೊಂಡರು ರಾಮಾಯಣದ ಪಂಚವಟಿ ಕಥಾಭಾಗವನ್ನು ನಡೆಸಿಕೊಡುವಲ್ಲಿ ದಾಖಲೆಯನ್ನೇ ನಿರ್ಮಿಸಿದ್ದಾರೆ

ಇವರು ತಮ್ಮ ಗೊಂಬೆ ಆಟದ ಮೂಲಕ ಪ್ರವಾದಿ ಬಸವೇಶ್ವರ ಕಿತ್ತೂರು ಚೆನ್ನಮ್ಮ ಭಾರತ ಸ್ವತಂತ್ರ ಸಂಗ್ರಾಮ ಮಹಾತ್ಮ ಗಾಂಧಿ ಮುಂತಾದ ಕಥೆಗಳನ್ನು ನಿರೂಪಿಸುವಲ್ಲಿ ಪ್ರಸಿದ್ಧರು ಮತ್ತು ಗೌತಮ್ ಬುದ್ಧ ವಿವೇಕಾನಂದ ಮತ್ತು ಅಂಬೇಡ್ಕರ್ ಅವರ ಕಥೆಗಳನ್ನು ತೊಗಲು ಗೊಂಬೆಆಟ ಪ್ರದರ್ಶಿಸಿದ್ದರು

 

ಸ್ವಿಡ್ಜರ್ಲ್ಯಾಂಡ್ ಝಾರಿಚ್ ನ್ ರೆಯಿಡ್ ಬರ್ಗ್ ೬೦ನೇಯ ಭಾರತ -ಸ್ವಿಸ್ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಹ್ವಾನಿತರು ಜರ್ಮನಿಯ ಲಿಂಡನ್ ಮ್ಯೂಸಿಯಂ ಕೂಡ ಇವರನ್ನು ಆಹ್ವಾನಿಸಿತ್ತು ಜಗತ್ತಿನ ಇನ್ನೂ ಕೆಲವುಕಡೆ ಪ್ರದರ್ಶನ ನೀಡಿದ್ದಾರೆ

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಜಾನಪದ ಅಕಾಡೆಮಿಗಳ ಪ್ರಶಸ್ತಿಗಳು, ಕರ್ನಾಟಕ ಸರ್ಕಾರದ ಜಾನಪದ ಶ್ರೀ ಪ್ರಶಸ್ತಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಇನ್ನು ಹಲವು ಪ್ರಶಸ್ತಿಗಳ ಬಾಜಿನರು ಇವರ ಜನನ ಬಳ್ಳಾರಿ ಜಿಲ್ಲೆಯ ಬೆಳಗಲಿನಲ್ಲಿ ಅಕ್ಟೋಬರ್ ೦೬-೧೯೩೬ ರಂದು ಜನನವಾಯಿತು
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
 ಸಿಂಧನೂರಿನ ಯುವಕ ಕಾಣೆಯಾದ ಪ್ರಕರಣ: ಪೋಷಕರ ಕಣ್ಣೀರಿನ ಮನವಿಸುಳ್ಳು ದೂರುಗಳಿಗೆ ಕಡಿವಾಣ: 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್ಭ್ರೂಣಲಿಂಗ ಪತ್ತೆ–ಹತ್ಯೆ ಪ್ರಕರಣ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಜೈಲು ಪಾಲು“50 ವರ್ಷಗಳ ಬದುಕಿಗೆ 15 ದಿನಗಳ ಗಡುವು: ಗಾಂಧಿನಗರದ 80 ಬಡ ಕುಟುಂಬಗಳ ಮೇಲೆ ಜೆಸಿಬಿ ನೆರಳು!”ಪೊಲೀಸ್ ಪೇದೆ ಮದುವೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ – ಮಾನವೀಯತೆಗೆ ಮಾದರಿ ಘಟನೆನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತ!ಬರುವ ದಿನಗಳು ಅಶಾಂತಿ ಸೂಚನೆ – ಅನ್ನ ನೀರಿಗೆ ಆಹಾಕಾರ: ಕೋಡಿಮಠ ಸ್ವಾಮೀಜಿ ಭವಿಷ್ಯಚಲಿಸುತ್ತಿದ್ದ ಬಸ್ ಏಕಾಏಕಿ ಜಮೀನಿಗೆ ನುಗ್ಗಿದ ಘಟನೆ – ನೂರಕ್ಕೂ ಹೆಚ್ಚು ಪ್ರಯಾಣಿಕರು ಪಾರು!ಕಲಮಂಗಿ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ – ವಿದ್ಯಾರ್ಥಿಗಳ ಭರ್ಜರಿ ಸಾಧನೆ“ಬಿಸಿಲಿನ ಅಬ್ಬರ: ಕರ್ನಾಟಕಲ್ಲಿ ಲಾಕ್‌ಡೌನ್ ಬರುತ್ತಾ..?”625ಕ್ಕೆ 625: ರಾಯಚೂರು ಸುಖದೇವ್ ಸಾಧನೆಲೋಕಾಯುಕ್ತ ಬಲೆಗೆ ಬಿದ್ದ ಕೆರೂರ ಪಿ.ಎಸ್.ಐ. ಭೀಮಪ್ಪ ರಬಕವಿ80 ಅಡಿ ಕೆಳಗೆ ನೀರು: ಪೈದೊಡ್ಡಿ ವೃದ್ಧನ ಗೋಳು ಕೇಳುವರು ಯಾರು “ಪುರಾಣದ ಬಸವಣ್ಣ ಅಲ್ಲ — ಸಮಾಜ ಬದಲಿಸಿದ ಮನುಷ್ಯ ಬಸವಣ್ಣ”