https://youtu.be/h03xkTAfAYg
ರೊಂದಿಗೆ ರಾಜ್ಯದಲೆಲ್ಲ ಕಡೆ ಪಕ್ಷದಿಂದ ಪಕ್ಷಕ್ಕೆ ಹಾರುವುದು ಸಾಮಾನ್ಯವಾಗಿ ಬಿಟ್ಟಿದೆ ಇಂದು ಸಿಂಧನೂರ್ನಲ್ಲಿ ಕೂಡ ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರಾಗಿದ್ದ ಲಿಂಗರಾಜು ಹೂಗಾರ್ ಮತ್ತು ಹಲವಾರು ಮುಖಂಡರು ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಕೆ ಕರಿಯಪ್ಪ ಮತ್ತು ಹನುಮೇಶ್ ಉಪ್ಪಾರ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ನಂತರ ಮಾತಾಡಿದ ನಗರಸಭೆ ಸದಸ್ಯರಾದ ಲಿಂಗರಾಜುಗಾರ ಅವರು ಜೆಡಿಎಸ್ ಪಕ್ಷದಿಂದ ಬೇಸರಗೊಂಡು ಇಂದು ನಾವು ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದೇವೆ ಆದರೆ ಇದಕ್ಕಿಂತ ಮುಂಚಿತವಾಗಿ ಕಾಂಗ್ರೆಸ್ನ ಹಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಒತ್ತಡ ಹಾಕಿದ್ದರು ಆದರೆ ನಾವು ಮಾನ್ಯ ಪ್ರಧಾನ ಮಂತ್ರಿಗಳ ಆಡಳಿತ ಮತ್ತು ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿಕೊಂಡು ಬಿಜೆಪಿ ಪಕ್ಷ ಸೇರಿಕೊಂಡಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.













