ಏಪ್ರಿಲ್ 17. ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಶ್ರೀ ಗಣೇಶ ದೇವಸ್ಥಾನ ದಿಂದ ಮೆರವಣಿಗೆ ಮೂಲಕ ಕೆ ಆರ್ ಪಿ ಪಿ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ್ ನೆಕ್ಕಂಟಿ ಅವರು ನಾಮಪತ್ರ ಸಲ್ಲಿಸಲು ಹೋಗುವ ಸಂದರ್ಭದಲ್ಲಿ ನೂರಾರು ಜನ ಸೇರಿದ್ದರಿಂದ ಬಾರಿವಾಹನದ ದಟ್ಟಣೆಯಿಂದಾಗಿ ಕುಷ್ಟಗಿ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂಭಾಗದಲ್ಲಿ ಸುಮಾರು ಗಂಟೆಗಳಕಾಲ ಸಾರ್ವಜನಿಕರು ಪರದಾಡುವಂತೆ ಪರಿಸ್ಥಿತಿ ಎದುರಾಯಿತು.

ಇದೆ ಸಂದರ್ಭದಲ್ಲಿ ಮಲ್ಕಾಪುರ್ ಗ್ರಾಮದಲ್ಲಿ ಅಗ್ನಿ ಸ್ಪರ್ಶಿಸಿ ದ ಕಾರಣ ನಂದಿಸಲು ಹೋಗುತ್ತಿದ್ದ ಅಗ್ನಿಶಾಮಕದಳದ ವಾಹನವು ಈ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡು ಸುಮಾರು ಅರ್ಧ ಗಂಟೆಗಳ ಕಾಲ ದಾರಿ ಇಲ್ಲದೆ ಸೈರನ್ ಹಾಕಿಕೊಂಡು ನಡು ರಸ್ತೆಯಲ್ಲಿ ನಿಂತುರುವುದನ್ನು ನೋಡಿದ ಸಾರ್ವಜನಿಕರು ಚುನಾವಣೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಸಾರ್ವಜನಿಕರು ವಾಹನ ಸವಾರರು ಇಡೀ ಶಾಪ ಹಾಕಿದ್ದಾರೆ.














