https://youtu.be/EXHZCzNyWsg?si=BqDB3oXJoBYTxnvE

ಇದೆ ಸಮಾಜದಿಂದ ಬಂದ ಬಂಗಾರಪ್ಪ ಅವರ ಕೊಡುಗೆ ಸಹ ರಾಜ್ಯಕ್ಕೆ ಅಪಾರವಾಗಿದೆ ಎಂದು ಹೇಳಿದರು. ಈ ವೇಳೆ ರಾಯಚೂರು ಲೋಕಸಭೆ ಕ್ಷೇತ್ರದ ಸಂಸದರಾದ ಜಿ.ಕುಮಾರ ನಾಯಕ ಅವರು ಮಾತನಾಡಿ, ಹಿರಿಯ ಸಮಾಜಸುಧಾರಕರು, ಸಂತರು ಬ್ರಹ್ಮ ಶ್ರೀನಾರಾಯಣ ಗುರುಗಳು ತಮ್ಮ ಆತ್ಮೋದ್ಧಾರಕ್ಕಾಗಿ ಶ್ರಮಿಸದೆ ಸಮಾಜದ ಏಳಿಗೆಗಾಗಿ, ಸಮಾಜದಲ್ಲಿನ ಮೇಲು-ಕೀಳು ವ್ಯವಸ್ಥೆಯನ್ನು ತೊಲಗಿಸುವ ಕೆಲಸಕ್ಕೆ ಕೈ ಹಾಕಿದವರು ನಾರಯಣಗುರುಗಳು. ಇವರು ಕಾರ್ಯ ಕೇವಲ ಕೇರಳಕ್ಕೆ ಮಾತ್ರ ಸೀಮೀತವಾಗದೆ ದೇಶದದ್ಯಾಂತ ಪ್ರಚಾರವನ್ನು ಪಡೆದರು. ಕನ್ನಡ ಕಂಪು ಹಬ್ಬಿಸಿದ ಡಾ. ರಾಜಕುಮಾರ್, ಪತ್ರಿಕಾ ಕ್ಷೇತ್ರದ ನೆಟಗಲ್ಪ್ಪ ಹಾಗೂ ಬಂಗಾರಪ್ಪ ಸಹ ಇದೆ ಸಮಾಜದವರು ಎಂದರು. ವಿಶೇಷ ಉಪನ್ಯಾಸಕರಾದ ನಾಗರಾಜ ಗಂಗಾವತಿ ಅವರು ಮಾತನಾಡಿ, ಬ್ರಹ್ಮ ಶ್ರೀ ನಾರಾಯಣಗುರುಗಳ ಜೀವನ, ವ್ಯಕ್ತಿತ್ವವನ್ನು ಪರಿಚಯಿಸಿ ಜಯಂತಿಗಳನ್ನು ಕುಣಿತಕ್ಕೆ ಸೀಮಿತಮಾಡದೆ ಅವರ ವಿಚಾರಗಳನ್ನು ತಿಳಿದುಕೊಳ್ಳುವ ಮತ್ತು ಪಾಲಿಸುವ ಕೆಲಸವಾಗಬೇಕೆಂದರು. ಇದೇ ಸಂದರ್ಭದಲ್ಲಿ ತಹಶೀಲ್ದಾರರಾದ ಸುರೇಶ ವರ್ಮಾ, ವಿವಿಧ ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರಾದ ಎನ್.ಬಸವರಾಜ ಗೌಡ, ಎಮ್. ನರಸಣ್ಣ ಗೌಡ ಇದ್ದರು.













