
ಈ ಸಂದರ್ಭದಲ್ಲಿ ಮಾತನಾಡಿದ ಡಾಕ್ಟರ್ ಸಂತೋಷ್ ಅವರು ಬೇಸಿಗೆಯ ಬಿಸಿಲಿನ ವಾತಾವರಣದಲ್ಲಿ ಜನಗಳಿಗೆ ನೀರಿನ ತೊಂದರೆ ಹೆಚ್ಚಾಗಿರುವುದರಿಂದ ಅದರಲ್ಲೂ ಬಿಸಿಲ ಧಗೆಗೆ ಹಕ್ಕಿ-ಪಕ್ಷಿಗಳು ಬಾಯಾರಿ ಬಳಲುತ್ತಿರುತ್ತವೆ ಪಕ್ಷಿಗಳಿಗೆ ಇನ್ನಷ್ಟು ಕಷ್ಟಕರ ಸಂದರ್ಭ ಉಂಟಾದ ಈ ಸಮಯದಲ್ಲಿ ಪಕ್ಷಿಗಳಿಗಾಗಿ ಅರವಟ್ಟಿಗೆ ನಿರ್ಮಿಸಿ ನೀರನ್ನು ಪೂರೈಸುವ ಕಾರ್ಯಕ್ಕೆ ಮುಂದಾಗಿರುವ ಅಭಿನಂದನ್ ಸಂಸ್ಥೆಯ ಈ ಕಾರ್ಯ ಬಹಳಷ್ಟು ಶ್ಲಾಘನೀಯ ಇವರ ಈ ಕಾರ್ಯಗಳು ಹೀಗೆ ಮುಂದುವರೆಯಲಿ ಹಾಗೂ ಇನ್ನಷ್ಟು ಕೀರ್ತಿ ಇವರದಾಗಲಿ ಎಂದರು.

ಈ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಪದಾಧಿಕಾರಿಗಳಾದ ಶೃತಿ ಹಂಪರಗುಂದಿ, ಜಾಫರಮಿಯ, ಮಲ್ಲಿಕಾರ್ಜುನ ಬಡಿಗೇರ, ಬಸಲಿಂಗಪ್ಪ ಬಾದರ್ಲಿ ಮತ್ತಿತರರು ಭಾಗವಹಿಸಿದ್ದರು.













