ಟಿಕೆಟ್ ಘೋಷಣೆಯಾಗಿದ್ದಂತೆ ಬಿಜೆಪಿ ಅಭ್ಯರ್ಥಿಯಾದ ಕೆ ಕರಿಯಪ್ಪ ಅವರು ಸಿಂಧನೂರು ಸುಕಲ್ಪೇಟೆಯ ತಮ್ಮ ಚಿಕ್ಕಪ್ಪನವರಾದ ಹಾಗೂ ಮಾಜಿ ಸಂಸದರು ಈಗಿನ ಕೆಪೆಕ್ ಅಧ್ಯಕ್ಷರಾದ ಕೆ ವಿರುಪಾಕ್ಷಪ್ಪ ಅವರ ನಿವಾಸಕ್ಕೆ ತೆರಳಿ ಅವರ ಆಶೀರ್ವಾದ ಪಡೆದರು.

ಹೌದು ಕಾಂಗ್ರೆಸ್ನ ಕಟ್ಟಾಳು ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಅಪ್ಪಟ ಅಭಿಮಾನಿ ಜೊತೆಗೆ ತಾಲೂಕ ಯುವ ಕಾಂಗ್ರೆಸ್ ಉಪಾಧ್ಯಕ್ಷ ನಮ್ಮ ಪಕ್ಷದಲ್ಲಿ ನನ್ನನ್ನು ಕ್ಯಾರೆಯನ್ನಲ್ಲ ಇನ್ನೇನು ಕೆಲವೇ ದಿನಗಳಲ್ಲಿ ಎಲೆಕ್ಷನ್ ಕೂಡ ಹತ್ತಿರ ಬರುತ್ತಿದೆ ನನ್ನನ್ನು ಒಬ್ಬ ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಂತ ನೋಡದೆ ಚುನಾವಣೆಯ ಬಗ್ಗೆ ನಮಗೆ ಯಾವುದೇ ರೀತಿ ಮಾಹಿತಿ ನೀಡುತ್ತಿಲ್ಲ ಹಾಗೂ ಹೋಗುಗಳು ತಿಳಿಸುತ್ತಿಲ್ಲ ಪ್ರಚಾರದ ಬಗ್ಗೆ ಸಹ ತಿಳಿಸುತ್ತಿಲ್ಲ ಹೀಗಾದರೆ ನಾವು ಯಾಕೆ ಕಾಂಗ್ರೆಸ್ ಪಕ್ಷದಲ್ಲಿರಬೇಕು ಹೀಗಾಗಿ ನಾನು ನನ್ನ ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನಾಳೆ ದಿನ ನೀಡುತ್ತಿದ್ದೇನೆ ಮತ್ತು ಬಿಜೆಪಿ ಸೇರುತ್ತೇನೆ ಎಂದು ಪತ್ರಿಕೆಯ ಜೊತೆಗೆ ಮಾತನಾಡುತ್ತಾ ತಿಳಿಸಿದ್ದಾರೆ.













