ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಅವರು ಒಂದು ವಾರವೂ ಸಹ ಬಿಡದೆ ಇಲ್ಲಿಯವರೆಗೆ ಅಂದರೆ 100 ವಾರಗಳನ್ನು ಸ್ವಚ್ಛತೆಗಾಗಿ ಅರ್ಪಿಸಿ ಕಾರ್ಯವನ್ನು ನಿರ್ವಹಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನವು ಇನ್ನೂ ಉತ್ತರೋತ್ತರ ಸಾಧನೆಗಳನ್ನು ಮಾಡಿ ರಾಷ್ಟ್ರದಾದ್ಯಂತ ಗಮನ ಸೆಳೆದು ಕೀರ್ತಿಯನ್ನು ಪಡೆದುಕೊಂಡು ಮುನ್ನಡೆಯಲಿ ಎಂದು ಹೇಳಿದರು.

ಹಿರಿಯ ಶಿಕ್ಷಕರಾದ ಯಲ್ಲಪ್ಪ ಜಾಲಿಹಾಳ, ಮಹಮ್ಮದ್ ಹನೀಫ್, ಚನ್ನಬಸವಯ್ಯ ಗುಡದುರು, ಮಹಾಂತೇಶ ಮಸ್ಕಿ, ವಿರೇಶ ಸೌದ್ರಿ, ಬಾಲಸ್ವಾಮಿ, ರಾಮಸ್ವಾಮಿ, ಮೋಹನ್ ಕಟ್ಟಿಮನಿ, ಗೌರಮ್ಮ, ಗುಂಡುರಾವ್ ದೇಸಾಯಿ, ಕಳಕಪ್ಪ ಹಾದಿಮನಿ, ಮಹಾಂತೇಶ ಎಚ್, ಜಾಫರ್ಮಿಯ, ಇಂದೂಧರ ಸಾಲಿಮಠ, ಗೌರಮ್ಮ, ಅಭಿನಂದನ್ ಸಂಸ್ಧೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.













