ಮೇ 25. ಸಿಂಧನೂರು ಯೋಚನೆ ಮಾಡಿ ಯೋಜನೆಗಾಗಿ ನಿಮ್ಮ ಮತ ನನಗೆ ಕೊಡಿ ಶಿವಕುಮಾರ್ ಹಿರೇಮಠ ದಿನಾಂಕ 03-06-2024 ಸೋಮವಾರ, ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಸಮಯ ನಿಗದಿಯಾಗಿದ್ದು.
ಪದವೀಧರರ ಹಾಗೂ ಶಿಕ್ಷಣ ಕ್ಷೇತ್ರದ ಹಿತ ಕಾಪಾಡುವ ಉದ್ದೇಶದಿಂದ ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ ಒಮ್ಮೆ ಅವಕಾಶ ನೀಡಿದರೆ ವಿಧಾನ ಪರಿಷತ್ನಲ್ಲಿ ನಿಮ್ಮ ಧ್ವನಿಯಾಗಿ,ಪದವೀಧರ ಸಮಸ್ಯೆಗಳ ಕುರಿತು ಮತ್ತು ಅವುಗಳ ಪರಿಹಾರಕ್ಕಾಗಿ ಪರಿಷತ್ತಿನಲ್ಲಿ ಹೋರಾಟ ಮಾಡುತ್ತೇನೆ.
https://youtu.be/Bn80YMqCHhs?si=IgMIcl_zLFWQSeA0
ಇದುವರೆಗೂ ಪದವೀಧರರ ಬಗ್ಗೆ ಪರಿಷತ್ತಿನಲ್ಲಿ ನಮ್ಮ ಭಾಗದದಿಂದ ಆಯ್ಕೆಯಾದ ಪರಿಷತ್ತಿನ ಯಾವ ಸದಸ್ಯರು ಗಂಭೀರ ಚರ್ಚೆಯಾಗಲಿ ಅಥವಾ ಹೋರಾಟ ವಾಗಲಿ ಮಾಡದೇ,ಪದವೀಧರ ಕ್ಷೇತ್ರದ ಮತದಾರರ ಸಮಸ್ಯೆಗೆ ಸ್ಪಂದಿಸದೆ ಆಯ್ಕೆ ಮಾಡಿದ ಪದವೀಧರರಿಗೆ ಅನ್ಯಾಯ ಮಾಡಿದ್ದಾರೆ.
ಈಶಾನ್ಯ ಪದವೀಧರ ಕ್ಷೇತ್ರದಿಂದ 6 ವರ್ಷಗಳ ಹಿಂದೆ ಗೆದ್ದು ಹೋದವರು ಮತ್ತೆ ಕ್ಷೇತ್ರದ ಕಡೆ ಮುಖ ಮಾಡಿಲ್ಲ ಇದಕ್ಕೆ ಜನಪ್ರತಿನಿಧಿಗಳ ಉದಾಸೀನತೆ ಕಾರಣ.ನಿಮ್ಮೆಲ್ಲರ ಭಾವನೆಗಳ ಅರಿತು ತಮ್ಮ ಧ್ವನಿಯಾಗಿ,ಪದವೀಧರ ಕ್ಷೇತ್ರದ ಪ್ರಾಮಾಣಿಕ ಸೇವೆ ಮಾಡಬೇಕೆಂಬ ಯೋಚನೆ-ಯೋಜನೆ ಯ ಅಭಿಲಾಷೆಯೊಂದಿಗೆ ಜನಸಾಮಾನ್ಯರ ಪ್ರತಿನಿಧಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಸಿದ್ದೇನೆ.ನನಗೊಂದು ಅವಕಾಶ ಕೊಡಿ ಎಂದು ಈಶಾನ್ಯ ಪದವಿಧರ ಕ್ಷೇತ್ರದ ಪ್ರಜ್ಞಾವಂತ ಪದವೀಧರ ಮತದಾರರಲ್ಲಿ ಸವಿನಯ ಪ್ರಾರ್ಥನೆ ಇಂತಿ ನಿಮ್ಮ ವಿಶ್ವಾಸಿ ಶಿವಕುಮಾರ ಹಿರೇಮಠ ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ.













