ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ರಂಗಾಗಿರಲಿ ಬದುಕು ಕಳೆಗುಂದದಿರಲಿ ಮನ

Advertisement
ಆಧುನಿಕ ಜಗತ್ತಿನ ನಾಗಾಲೋಟದೊಂದಿಗೆ ಜನ ಜೀವನ ಓಡುತಿದೆ ಎಗ್ಗಿಲ್ಲದೇ.ಸಂಪತ್ತಿನ ಆಸೆಯೋ ಅಧಿಕಾರದ ದಾಹವೋ ಪ್ರತಿಷ್ಠೆಯ ಹಪಹಪಿಸಿ ಹೆಸರಿಗಾಗಿ ಸಂಬಂಧಗಳ ಕಡೆಗಣೆನೆ ಒತ್ತಡದ ನಡೆಯು ಕಳೆಗುಂದಿಸುತ್ತಿದೆ ಮನ ರಂಗಾದ ಬದುಕು ಭಂಗವಾಗುತ್ತಿದೆ ಸದ್ದಿಲ್ಲದೇ.

ಮಾನವ ಜೀವನದಲ್ಲಿ ನೋವು ಹತಾಶೆಗಳು ಸಹಜ ಇಂದಿನ ದುರ್ಬಲ ಮನ ಸಣ್ಣ ಸಣ್ಣ ವಿಷಯಕ್ಕೆ ಮುಂಗೋಪ ಪ್ರಾಣಾಪಾಯದಂತಹ ಕೃತ್ಯಕ್ಕೆ ಕೈಹಾಕುವ ಖಯಾಲಿ ನಡೆಯುತ್ತಿದೆ.

ಸಭಸ್ಯೆಗಳು ಬಂತೆಂದರೆ ದಿಗಿಲು ಏಕೆ ?ಅದರ ಉಪಶಮನದ ಹಾದಿಗೆ ಗಮನ ಹರಿಸಬೇಕೆ ವಿನಃ ಕೈ ಹೊತ್ತು ಕುಳಿತುಕೊಳ್ಳುವ ಬದಲು ಬುದ್ದಿವಂತಿಕೆಯ ಮಾತು ಕೇಳುವುದು ಹಿತ.ಆದರೆ ಇಂದಿನ ಯುವ ಪೀಳಿಗೆ ಬುದ್ದಿಮಾತಿಗೆ ಓಗೊಡದೇ ಮನೆ ಬಿಟ್ಟು ಹೋಗುವ ಮನಸು ಮಾಡುತ್ತಿದ್ದಾರೆ.

ಬದಲಾಗಬೇಕಿದೆ ಮನ ಮಂದಾರ ಕುಸುಮಗಳು ಭಂಗ ಪಡಿಸುವವರ ಕಡೆಗಣಿಸಿ ನೆಮ್ಮದಿಯ ನಾಳೆಗೆ ಭರವಸೆಯ ಬೆಳಕಾಗಬೇಕಿದೆ. ಹತಾಶೆಯ ಗುಂಗಿನಿಂದ ಹೊರಬಂದು ಜಗತ್ತಿನ ಅನೇಕ ಅವಕಾಶಗಳು ಬಾಚುವ ಅವಶ್ಯಕತೆ ಇದೆ.



ಮಂದಹಾಸದಿ ಮುಂದಿನ ದಿನಗಳನು ಆಸ್ವಾದಿಸ ಬೇಕಾಗಿದೆ. ಬೇಕು ಬೇಡಗಳ ಸರಿಯಾದ ನಿರ್ಧಾರದಿ ಅನಗತ್ಯ ವಿಚಾರಗಳನು ದೂರಿಕರಿಸಬೇಕು. ನಾಳೆಗಳನು ಬಂದಂತೆ ಸ್ವೀಕರಿಸಲು ಸಿದ್ಧರಾಗೋಣ ಬದ್ಧತೆಯ ಬಾಂದವ್ಯಕೆ ಸಿದ್ಧತೆಯ ಶುದ್ಧಿಯಲಿ ಪ್ರಮಾಣೀಕರಿಸಿ. ಕೊಳೆಯ ಕಿತ್ತೆಸೆದು ಸಮಾಲೋಚನೆಯಲಿ ಪರಾಮರ್ಶಿಸಿ ಮುಂದಿನ ನಡೆಯ ನಿರ್ಧಾರವಾಗಬೇಕು. ಕೇಡನು ಸೇಡನು ಬದಿಗಿರಿಸಿ ಹದವಾಗಿಸಿ ಬಾಳ ಪುಟವ ತೆರೆಯಿರಿ ರಂಗಿನ ಕನಸುಗಳೊಂದಿಗೆ ಸಾಧನೆಯ ಶಿಖರವೇರುವುದಕೆ ಸತ್ಸಂಗದ ಜೊತೆಗಿರಲಿ.ಅನವರತ ಪ್ರಯತ್ನ ಪ್ರಯೋಗಗಳು ನಿರಂತರವಿರಲಿ ಬೃಂಗದ ಬೆನ್ನೇರುವ ಬದಲು ಮುದ ನೀಡುವ ರಕ್ಷಿತ ಸಂಬಂಧಗಳೊಂದಿಗೆ ನಡೆ ನುಡಿ ಒಂದಾಗಿಸಿ ರಗಂಗಾಗಿರಲಿ ಕಳೆಗುಂದದೇ ಏನೆ ಬಂದರೂ ಎದುರಿಸುವ ಧೈರ್ಯವಿರಲಿ ಕಳೆ ಗುಂದಿದ ಮನವ ತಿಕ್ಕಿ ತೊಳೆದು ಮಿನುಗುವ ನಕ್ಷತ್ರವಾಗಲಿ ಬದುಕಿನ ಜಂಜಡವ ಕಳೆಯಲು ಉತ್ತಮ ಹವ್ಯಾಸ ನಂಬಿಕೆಯ ಒಡನಾಟದೊಂದಿಗೆ ಸಾಗಬೇಕಿದೆ.

 

ರೇಷ್ಮಾ ಕಂದಕೂರ ಶಿಕ್ಷಕಿ ಸಿಂಧನೂರು
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್