ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಾರ್ವಜನಿಕರು ಏಕಾಏಕಿ ಪೋಲೀಸ್ ಠಾಣೆಯ ಎದರು ಪ್ರತಿಭಟನೆ

Advertisement
ಮೇ 09 ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ಗ್ರಾಮದ ಬಸವನಪೇಟೆಯ ಸಾರ್ವಜನಿಕರು ಸೋಮವಾರ ಏಕಾಏಕಿ ಪೋಲೀಸ್ ಠಾಣೆಗೆ ಮಹಿಳೆಯರು ಪ್ರತಿಭಟನೆ ಮಾಡಿದರು.ಕಾರಣ ನಾವುಗಳು ೧೫೦ ಕುಟುಂಬಗಳು ಸುಮಾರು ೩೫ ವರ್ಷಗಳಿಂದ ವಾಸವಿದ್ದು,ಈಗಾಗಲೆ ಮನೆಗಳ ನಿರ್ಮಿಸಿಕೊಂಡಿದ್ದು,ಕೂಲಿನಾಲಿ ಮಾಡುತ್ತಿದ್ದೇವೆ.ಈಗ ಖಾಸಗಿ ವ್ಯಕ್ತಿಯು ಈ ೫.೮೦ ಸೆ.ಭೂಮಿಯನ್ನು ಖರೀದಿ ಮಾಡಿಕೊಂಡಿದ್ದು,ಈಗ ಆ ವ್ಯಕ್ತಿಯಿಂದ ನಮ್ಮ ಮನೆಗಳನ್ನು ತೆರವು ಮಾಡುವುದಕ್ಕೆ ಮುಂದಾಗಬಹುದು. ಈಗಾಗಿ ನಮಗೆ ದಾರಿಯೇ ಇಲ್ಲದೆ ಅನಿವಾರ್ಯವಾಗಿ ಠಾಣೆಗೆ ಬರಬೇಕಾಯಿತು.ನಮ್ಮಗಳ ಅಭದ್ರತೆಗೆ ಎಡೆಮಾಡಿಕೊಟ್ಟಿದೆ ಎಂದು ನಿವಾಸಿ ಹಳ್ಳಿ ನಾಗಪ್ಪ ಖಾರವಾಗಿ ಮಾತನಾಡಿದರು.

ನಂತರ ಎದರು ಬಸವಣ್ಣ ಹತ್ತಿರ ನಿವಾಸಿಗಳು ಕೂಡಿಕೊಂಡು ಮಂಗಳವಾರದಂದು ಬಸವನಪೇಟೆಯಲ್ಲಿ ಬೆಳ್ಳಂಬೆಳಿಗ್ಗೆ ಪ್ರತಿಭಟನೆ ಮಾಡುತ್ತೇವೆ.ಬುಧವಾರ ನಡೆಯುವ ವಿಧಾನ ಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿದರು.

ಸಂಬಂಧಪಟ್ಟ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು,ತಹಶಿಲ್ದಾರರು ಸ್ಥಳಕ್ಕೆ ಬರೋವರೆಗೂ ನಾವು ಮತದಾನ ಮಾಡುವುದಿಲ್ಲ ಎಂದು ಎಚ್ಚರಿಸಿದರು.ಈ ಸಮಸ್ಯೆಯನ್ನು ಇಲ್ಲಿಗೆ ಅಧಿಕಾರಿಗಳು ಬಗೆಹರಿಸಬೇಕು ಎಂದು ಸಾರ್ವಜನಿಕರು ತಿಳಿಸಿದರು.

ಸರಿಯಾದ ಅರ್ಜಿಯೊಂದಿಗೆ ದಾಖಲೆ ನೀಡಿ,ಸಂಬಂಧಪಟ್ಟ ಅಧಿಕಾರಗಳನ್ನು ವಿಚಾರಿಸಿ ಎಂದು ಪೋಲೀಸ್ ಸಿಬ್ಬಂದಿ ಶಿವರಾಯಪ್ಪ ತಿಳಿಸಿ ಸಾರ್ವಜನಿಕರನ್ನು ಕಳುಹಿಸಿದರು.



ಈ ಸಂದರ್ಭದಲ್ಲಿ ನಿಂಗಮ್ಮ,ದೊಡ್ಡಬಸಮ್ಮ,ಯಲ್ಲಮ್ಮ,ವಡ್ಡರು ಹುಲಿಗೆಮ್ಮ,ಗುಳೆಮ್ಮ,ನೆನಕ್ಕಿ ಗೌರಮ್ಮ,ಬಿಚ್ಚುಗತ್ತಿ ಗಂಗಮ್ಮ,ತಿಮ್ಮಕ್ಕ,ಕಜ್ಜಿ ಯಲ್ಲಮ್ಮ,ಕುಂಬಾರು ಹನುಂತರಾಯ,ಡ್ರವರ್ ಹುಲುಗಪ್ಪ,ಕೊಳ್ಳಿ ಮೂಕಯ್ಯ,ವಡ್ಡರ್ ಶೇಖರ್,ದೊಡ್ಡ ಹೋನ್ನೂರ,ಬಿಚ್ಚುಗತ್ತಿ ಮಲ್ಲಯ್ಯ,ಬಿಚ್ಚಿಗತ್ತಿ ದೊಡ್ಡಬಸವ,ಬಿ.ಸೋಮನಾಯ್ಕ್,ಕೊಳ್ಳಿ ಸೋಮೇಶ್.ನೆನಕ್ಕಿ ನಾಗರಾಜ,ಕೊಳ್ಳಿ ಗಾದಿ,ಮಾಬುಸಾಬ್, ಹುಸೇನಿ, ಮೌಲಾಲಿ ಮತ್ತಿತರರು ಇದ್ದರು
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್