ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಿರಿಗೇರಿ ಬಸವನಪೇಟೆಯ ಗ್ರಾಮಸ್ಥರನ್ನು ಭೇಟಿಯಾದ ಚುನಾವಣಾಧಿಕಾರಿಗಳು

Advertisement
ಏಪ್ರಿಲ್ 08.ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದ ೧ ನೇ ವಾರ್ಡಿನ ಬಸವನಪೇಟೆಯ ಸಾರ್ವಜನಿಕರು ಮಾರ್ಚ್ ೨೩ ರಂದು ಸಿ.ಸಿ ರಸ್ತೆ,ಕುಡಿಯುವ ನೀರು,ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಇಲ್ಲವಾದಲ್ಲಿ ಚುನಾವಣೆ ಬಹಿಷ್ಕಾರ ಎಚ್ಚರಕೆ ನೀಡಿದ್ದರು.ಸ್ಥಳಕ್ಕೆ ಗ್ರಾ.ಪಂ ಸದಸ್ಯರಾದ ಸುಜಾತ ಕುಮಾರ್‌ಗೌಡರನ್ನು ಕರೆಯಿಸಿ ಅವರ ವಿರುದ್ದ ಹೌಹಾರಿದ್ದರು.ಈ ಸಂಬಂಧ ಮಾರ್ಚ ೨೫ ರಂದು ವಿಜಯವಾಣಿಯ ಪತ್ರಿಕೆಯಲ್ಲಿ ವರದಿ ಬಿತ್ತರಿಸಿತ್ತು.ಶನಿವಾರ ಬಸವನಪೇಟೆಯ ಸ್ಥಳಕ್ಕೆ ಚುನಾವಣಾಧಿಕಾರಿಗಳು,ತಾಲೂಕು ಅಧಿಕಾರಿಗಳು ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿದರು.

ಗ್ರಾಮಸ್ಥರಾದ ವಡ್ಡರ ಹುಲಿಗೆಮ್ಮ ಮಾತನಾಡಿ ಜನಪ್ರತಿನಿಧಿಗಳಾಗಲೀ,ಅಧಿಕಾರಿಗಳಾಗಲೀ ಬರೀ ಜೊಳ್ಳು ಆಶ್ವಾಸನೆ ನೀಡಿ ಸಬೂಬು ನೀಡುತ್ತಾ ಬಂದವರೇ ಜಾಸ್ತಿ,ಇಲ್ಲಿ ಆಯ್ಕೆಯಾಗಿ ಬಂದವರು ಇದೇ ರೀತಿ ಹೇಳುತ್ತಾ ಬಂದಿದ್ದಾರೆ.ಸರಿಯಾದ ರೀತಿಯಲ್ಲಿ ಮೂಲಭೂತ ಸೌಲಭ್ಯ ಒದಗಿಸದಿದ್ದಲ್ಲಿ ನಾವು ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಚುನಾವಣಾ ಅಧಿಕಾರಿಗಳ ಮುಂದೆ ಜೋರಾಗಿ ಹೇಳಿದರು.



ತಾಲೂಕು ಚುನಾವಣಾಧಿಕಾರಿಗಳಾದ ಕೆ.ಹೆಚ್.ಸತೀಸ್ ಮಾತನಾಡಿ ಸಂವಿಧಾನಬದ್ದ ಹಕ್ಕಾದ ಮತದಾನವನ್ನು ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.ಎಲ್ಲರೂ ಕೂಡ ಮತದಾನ ಮಾಡಿ,ಮಾಡಿಸಿ ಎಂದು ವಾಗ್ದಾನ ಮಾಡಿ ತಿಳಿಸಿದರು.ನಿಮಗೆ ೧೦ ದಿನಗಳೊಗೆ ಜೆಜೆಎಂ ಯೋಜನೆಯ ಮನೆಮನೆಗೆ ನಳದ ನೀರು,ನರೇಗಾದಡಿಯಲ್ಲಿ ಗ್ರಾಮಾಡಳಿತದ ಜೊತೆಗೆ ಮಾತನಾಡಿ ಸಿ.ಸಿ ರಸ್ತೆಯನ್ನು ಹಾಕಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.ಇನ್ಮುಂದೆ ಇತರಹದ ಸಮಸ್ಯೆ ಆಗದಂತೆ ಎಚ್ಚರ ವಹಿಸುತೇವೆ ಎಂದರು.

ನಂತರ ಎರಡು ವರ್ಷದ ಅಂದರೆ ಸೆ ೨ರಂದು ಬಸವನಪೇಟೆಯ ಕುಂಬಾರು ತಿಪ್ಪೇಶ್‌ನ ಮೂವರು ಮಕ್ಕಳಲ್ಲಿ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದರು.ಕುಟುಂಬದ ಮಕ್ಕಳ ತಾಯಿಯಾದ ಶ್ರೀದೇವಿಯನ್ನು ಮಾತನಾಡಿಸಿ ಧೈರ್ಯ ತುಂಬಿದರು.ಇನ್ನೊಬ್ಬ ಮಗುವಿನ ಶಿಕ್ಷಣವನ್ನು ಜವಬ್ದಾರಿಯಿಂದ ಓದಿಸಿ ಎಚ್ಚರಿಕೆ ವಹಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ತಹಿಶಿಲ್ದಾರಾದ ಎನ್.ಆರ್ ಮಂಜುನಾಥ ಸ್ವಾಮಿ,ತಾ.ಪಂ ಇಒ ಮಡಗಿನ ಬಸಪ್ಪ,ಸೆಕ್ಟರ್ ಅಧಿಕಾರಿ ರಾಘವೇಂದ್ರವರ್ಮ,ಪಿಡಿಒ ಶಿವಕುಮಾರ್ ಕೋರಿ,ಗ್ರಾಮ ಲೆಕ್ಕಾಧಿಕಾರಿಗಳಾದ ಕರ್ಣಂ ನಾಗರಾಜ್ ಇತರರು ಇದ್ದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್