ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಹೊಸ ವರ್ಷ. ಹೊಸ ಬಟ್ಟೆ. ಹೊಸ ಭರವಸೆ ಡಾ.ಶಿವರಾಜ್ ಪಾಟೀಲ್

Advertisement
ಡಿಸೆಂಬರ್ 31.ಹೊಸ ವರ್ಷ. ಹೊಸ ಬಟ್ಟೆ. ಹೊಸ ಭರವಸೆ ಜಗತ್ತು ಸಂಗೀತ ಮತ್ತು ಪಾರ್ಟಿಗಳೊಂದಿಗೆ ಮಧ್ಯರಾತ್ರಿಯ ಕುಡಿದು ತಿಂದು ತೇಲಾಡುತ್ತ ಕೌಂಟ್‌ಡೌನ್‌ನಲ್ಲಿ ಮಗ್ನವಾಗಿದ್ದಾಗ, ನಮ್ಮ ನಡುವೆಯೇ ಒಂದು ಪುಟ್ಟ ಪವಾಡ ನಡೆಯುತ್ತಿತ್ತು.

ಕಠೋರ ವಾಸ್ತವ
ಕಸ ಆಯುವ ಸಮುದಾಯದ ಮಕ್ಕಳ ಪಾಲಿಗೆ ಹೊಸ ವರ್ಷವೆಂದರೆ ಉಳಿದ ದಿನಗಳಂತೆಯೇ ಸಾಮಾನ್ಯ. ಮೈ ನಡುಗಿಸುವ ಚಳಿಯಲ್ಲಿ ಸೂರ್ಯೋದಯಕ್ಕೂ ಮುನ್ನ ಎದ್ದು ಕಸದ ರಾಶಿಯಲ್ಲಿ ಪ್ಲಾಸ್ಟಿಕ್ ಆಯುವುದು ಅವರ ಬದುಕು. ಅವರಿಗೆ "ಹೊಸ ವರ್ಷ" ಎಂದರೆ ಎಂದಿಗೂ ಹೊಸ ಬಟ್ಟೆ ಅಥವಾ ಉಡುಗೊರೆಗಳಲ್ಲ; ಅದು ಬರಿ ಬದುಕಿನ ಹೋರಾಟವಷ್ಟೇ. ( ನಮ್ಮ ತರ ಹೊಸ ವರ್ಷ ಎಂದಾಕ್ಷಣ ಕೇಕ್ ಕಟ್ ಮಾಡಿಕೊಂಡು ಕುಪ್ಪಳಿಸಿ ಮನಸ್ಸಿನಲ್ಲಿ ತೇಲಾಡುತ್ತಾ ಸಂಭ್ರಮಚರಣೆ ಮಾಡುವುದಲ್ಲ )

ಬದಲಾವಣೆಯ ಹೆಜ್ಜೆ
ಈ ವರ್ಷ, ಸಹಾನಾ ಮಕ್ಕಳ ಆಸ್ಪತ್ರೆ ಮತ್ತು ಡಾ. ಶಿವರಾಜ್ ಅವರು ಅದ್ಧೂರಿ ಆಚರಣೆಗಳನ್ನು ಬದಿಗಿಟ್ಟು, ಮಾನವೀಯತೆಯನ್ನು ಆರಿಸಿಕೊಂಡರು. ಈ ನೂರು ಮಕ್ಕಳಿಗೆ ಹೊಸದಾದ, ಬೆಚ್ಚಗಿನ ಮತ್ತು ಬಣ್ಣಬಣ್ಣದ ಬಟ್ಟೆಗಳನ್ನು ಉಡುಗೊರೆಯಾಗಿ ಕೊಟ್ಟು ಹೊಸ ವರ್ಷವನ್ನು ಆಚರಿಸುವುದು ಸಂತೋಷದ ಸಂಗತಿ.

ಆ ಬದಲಾವಣೆಯ ಕ್ಷಣ:
ಆ ಮಕ್ಕಳ ಮುಖದಲ್ಲಿ ಮೂಡಿದ ಸಂತೋಷ ನಗು ಕೇವಲ ಬಟ್ಟೆಗಾಗಿ ಇರಲಿಲ್ಲ; ಅದು ಅವರಿಗೆ ನೀಡಿದ ಗೌರವ ಮತ್ತು ಘನತೆಗಾಗಿ ಇತ್ತು. ಪಟಾಕಿಗಳ ಬೆಳಕಿಗಿಂತ ಆ ಮಕ್ಕಳ ಕಣ್ಣಿನ ಮಿಂಚು ಹೆಚ್ಚು ಪ್ರಕಾಶಮಾನವಾಗಿತ್ತು.

ನಮಗೊಂದು ಪಾಠ
ತಮ್ಮ ಹೊಸ ಬಟ್ಟೆಗಳನ್ನು ಧರಿಸಿದ ಆ ಮಕ್ಕಳು, ಯಾರ ಬಳಿಯೂ ಏನನ್ನೂ ಬೇಡದೆ ಎಲ್ಲರಿಗೂ "ಹೊಸ ವರ್ಷದ ಶುಭಾಶಯ" ಕೋರುತ್ತಾ ಸಂತೋಷ ಹಂಚಿದರು.
ನಾವು ಒಂದು ರಾತ್ರಿಯ ಮೋಜು-ಮಸ್ತಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಮೊದಲು ಒಮ್ಮೆ ಯೋಚಿಸೋಣ: ಒಂದು ಜೊತೆ ಬಟ್ಟೆ. ಒಂದು ಬೆಚ್ಚಗಿನ ಸ್ವೆಟರ್. ಒಂದು ಪುಟ್ಟ ಪುಸ್ತಕ. ನಮಗೆ ಇದು ಸಣ್ಣ ವಿಷಯವಾಗಿರಬಹುದು, ಆದರೆ ಆ ಮಕ್ಕಳಿಗೆ ಇದು ಹೊಸ ಜೀವನದ ಭರವಸೆ.

ಈ ಹೊಸ ವರ್ಷ, ಸಂಭ್ರಮವು ಕರುಣೆಯ ರೂಪದಲ್ಲಿರಲಿ. ಸಂತೋಷವೆನ್ನುವುದು ಕೇವಲ ನಾವು ಅನುಭವಿಸುವ ವಸ್ತುವಾಗದೆ, ಇತರರಿಗೆ ಹಂಚುವ ಗುಣವಾಗಲಿ. ..
ಈ ಪುಣ್ಯದ ಕಾರ್ಯಕ್ಕೆ ನಮ್ಮೊಂದಿಗೆ ಕೈ ಜೋಡಿಸಿದವರು..
DR Sobhan. Nuclear medicine scientist. Liver pool. UK.
DR. Kirti Agarwal. Manipal hospital Bangalore.
Dr Gayatridevi. BGS Global MCH hospital. Bangaalore.
Dr. ಶಿವಾನಂದ ಕುಬ್ಸದ್ ಸರ್. ಮುಧೋಳ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್