ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಿಂಧನೂರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮೂವರ ಬಂಧನ

ಬಡ ಮಹಿಳೆಯರ ಮೇಲೆ ಮೋಸದ ಜಾಲ, ಯುವಕರು ಎಚ್ಚೆತ್ತುಕೊಳ್ಳಬೇಕೆಂಬ ಸಂದೇಶ ನೀಡಿದ ಘಟನೆ

ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಡಿಲಿನ ದಾಳಿ : ಯುವತಿಯ ರಕ್ಷಣೆ – ಮೂವರು ಆರೋಪಿಗಳು ಕಂಬನಿ ಮಿಡಿದ ಬಂಧನ!

 

ಸಿಂಧನೂರು, ಏ.14:

ತಾಲ್ಲೂಕಿನ ವಿರುಪಾಪೂರು ಸೀಮೆಯ ನ್ಯಾಷನಲ್ ಲೇಔಟ್‌ನಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಗ್ರಾಮೀಣ ಪೊಲೀಸರು ಸಿಡಿಲಿನಂತೆ ದಾಳಿ ನಡೆಸಿ, ಒಬ್ಬ ನಿರಪರಾಧ ಯುವತಿಯನ್ನು ರಕ್ಷಿಸಿ, ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಸಾರ್ವಜನಿಕರಲ್ಲಿ ಆತಂಕದ ಜೊತೆಗೆ ಜಾಗೃತಿ ಮೂಡಿಸಿದೆ.

ಖಚಿತ ಮಾಹಿತಿಯ ಆಧಾರದಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆಯ ಸಿಪಿಐ ವಿನಾಯಕ ಹಾಗೂ ಪಿಎಸ್‌ಐ ಮೌನೇಶ ರಾಠೋಡ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತು. ಈ ವೇಳೆ ಮಾಗಡಿ ತಾಲೂಕಿನ ಯುವತಿಯನ್ನು ರಕ್ಷಣೆ ಮಾಡಲಾಗಿದ್ದು, ಗಂಗಾನಗರದ ವಿಜಯಕುಮಾರ, ಗಂಗಾಧರ್ ಹಾಗೂ ಮಹಿಬೂಬಿಯಾ ಕಾಲೋನಿಯ ಶ್ಯಾಮಣ್ಣ ಎಂಬ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಆರೋಪಿ ವಿಜಯಕುಮಾರ ಪಂಪಣ್ಣ ಶೆಡ್ ಅನ್ನು ಬಾಡಿಗೆಗೆ ಪಡೆದು, ಬಡತನದಲ್ಲಿರುವ ಮಹಿಳೆಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಮೋಸ ಮಾಡಿ, ಹಣದ ಆಮಿಷ ತೋರಿಸಿ ಅವರನ್ನು ಈ ಅಕ್ರಮ ದಂಧೆಗೆ ತಳ್ಳುತ್ತಿದ್ದನೆಂಬುದು ತಿಳಿದುಬಂದಿದೆ. ಅಲ್ಲದೆ, ತನ್ನ ಪರಿಚಯದ ಗ್ರಾಹಕರಿಗೆ ಮಹಿಳೆಯರ ಫೋಟೋಗಳನ್ನು ಕಳುಹಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ.

ಈ ಘಟನೆ ಸಿಂಧನೂರು ತಾಲೂಕು ಮಾತ್ರವಲ್ಲದೆ ರಾಯಚೂರು ಜಿಲ್ಲೆಯಲ್ಲಿ ಯುವ ಸಮುದಾಯದ ಕಣ್ಣುತೆರೆಸುವಂತಾಗಿದೆ. ಸುಲಭ ಹಣದ ಆಸೆಗೆ ಬಲಿಯಾಗುವುದು ಜೀವನವನ್ನೇ ಹಾಳುಮಾಡುತ್ತದೆ ಎಂಬ ಸಂದೇಶವನ್ನು ಈ ಪ್ರಕರಣ ಮತ್ತೊಮ್ಮೆ ಸಾರಿದೆ.

👉 ಯುವಕರು ಎಚ್ಚೆತ್ತುಕೊಳ್ಳಬೇಕು.

👉 ಇಂತಹ ಅಕ್ರಮ ಚಟುವಟಿಕೆಗಳಿಗೆ ಬಲಿಯಾಗಬಾರದು.

👉 ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.

ಗ್ರಾಮೀಣ ಪೊಲೀಸರ ಈ ದಿಟ್ಟ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಮಾಜವನ್ನು ಕಾಡುತ್ತಿರುವ ಇಂತಹ ಅಕ್ರಮಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಹೋರಾಟ ಮುಂದುವರಿಸಲಿದೆ ಎಂಬ ವಿಶ್ವಾಸ ಜನರಲ್ಲಿ ಬಲವಾಗುತ್ತಿದೆ.

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಮರಕ್ಕೆ ಕಾರು ಡಿಕ್ಕಿ: ಸಿಪಿಐ ರಘುನಾಥ್ ಸ್ಥಳದಲ್ಲೇ ದುರ್ಮರಣಗುತ್ತಿಗೆ ಪದ್ಧತಿ ವಿರೋಧಿಸಿ ಆಕ್ರೋಶ“ಕತ್ತು ಕೊಯ್ಯುವುದನ್ನು ನಿಲ್ಲಿಸಿ” – ಸರ್ಕಾರದ ವಿರುದ್ಧ ಆಕ್ರೋಶವಿಠಲಪುರದಲ್ಲಿ ಅಂಬೇಡ್ಕರ್ ಜಯಂತಿ ಉತ್ಸಾಹಭರಿತ ಆಚರಣೆಸಿಂಧನೂರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮೂವರ ಬಂಧನಮನುಸ್ಮೃತಿಯ ಕತ್ತಲೆಯಿಂದ ಸಂವಿಧಾನದ ಬೆಳಕಿನೆಡೆಗೆ ಅಂಬೇಡ್ಕರ್ ಎಂಬ ಯುಗಪುರುಷ ಮಸ್ಕಿಯಲ್ಲಿ ಬಿಜೆಪಿ V/S ಬಿಜೆಪಿ: ಅಭ್ಯರ್ಥಿ ಗೊಂದಲ, ಒಳಜಗಳ ಬಹಿರಂಗಕೊಪ್ಪಳದಲ್ಲಿ ಸದ್ದು ಮಾಡಿದ ಪ್ರಕರಣ: ವಿದ್ಯಾರ್ಥಿನಿಯರ ವಿಡಿಯೋಗಳ ಆರೋಪಕ್ಕೆ ಬೆಚ್ಚಿಬಿದ್ದ ಜನತೆಪ್ರೀತಿಯ ಹೆಸರಲ್ಲಿ ಮೋಸ: ಮದುವೆ ನಂಬಿಸಿ ಯುವತಿಗೆ ದ್ರೋಹ, ಪ್ರಕರಣ ದಾಖಲುಲೋಕಾಯುಕ್ತ ದಾಳಿ: ₹1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಮುಖ್ಯಾಧಿಕಾರಿ ಬಂಧನಲಂಚ ಪಡೆದ ಪಿ.ಡಿ.ಓಗೆ ಜೈಲು ಶಿಕ್ಷೆ: 7 ವರ್ಷಗಳ ಕಾರಾವಾಸ, ₹75 ಸಾವಿರ ದಂಡಮೊಬೈಲ್ ದಾಸರಾಗಬೇಡಿ, ವಿದ್ಯಾವಂತರಾಗಿ – ಡಿ.ವೈ.ಎಸ್.ಪಿ ಚಂದ್ರಶೇಖರ್ ಕರೆಪಿಯುಸಿ ಫಲಿತಾಂಶದಲ್ಲಿ ಯಡವಟ್ಟು 600 ಕ್ಕೆ 603 ಅಂಕ! ಕರೆಗೂ ಸ್ಪಂದಿಸದ ಅಧಿಕಾರಿ, ಲಕ್ಷಾಂತರ ಅಕ್ರಮ ಆರೋಪ – ರೌಡಕುಂದದಲ್ಲಿ ಗದ್ದಲಗು.ವಿ.ಸ.ಕಂ.ನಿ ಕ್ಕೆ ನಾಗರಾಜ್ ಗಸ್ತಿ ನಾಗರತ್ನ ವಾಗೀಶ್ ರಾರಾವಿ ಸೇರಿದಂತೆ 41 ಸದಸ್ಯರ ನಾಮ ನಿರ್ದೇಶನಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ