ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಲೋಕಾಯುಕ್ತ ಬಲೆಗೆ ಬಿದ್ದ ಕೆರೂರ ಪಿ.ಎಸ್.ಐ. ಭೀಮಪ್ಪ ರಬಕವಿ

ಸುಳ್ಳು ಕೇಸ್ ಬೆದರಿಕೆ: ₹1.70 ಲಕ್ಷ ಲಂಚ ಸ್ವೀಕರಿಸುವಾಗ ಅಧಿಕಾರಿಗಳು ಟ್ರ್ಯಾಪ್

BB NEWS KANNADA 

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಭೀಮಪ್ಪ ರಬಕವಿ ಎಂಬ ಪಿ.ಎಸ್.ಐ. ಹಾಗೂ ಪೊಲೀಸ್ ಪೇದೆ ಸಂತೋಷ ಬಿರಾದಾರ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.

ಪ್ರಕರಣದ ವಿವರ

ಕೆರೂರ ನಿವಾಸಿಯಾದ ಮುತ್ತಪ್ಪ ಹುಲ್ಲಪ್ಪ ನಾಯ್ಕರ ಅವರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ, ಬಾಗಲಕೋಟೆಗೆ ದೂರು ನೀಡಿದ್ದರು.

ಫಿರ್ಯಾದಿಯ ಪ್ರಕಾರ, ಏಪ್ರಿಲ್ 17ರಂದು ಅವರ ಸ್ನೇಹಿತ ಶಂಕ್ರಪ್ಪ ನೀಲಪ್ಪ ಬೂದಿಹಾಳರನ್ನು ಮೋಟಾರ್ ಸೈಕಲ್ (KA-29 EC-0914) ಸಮೇತ ಕೆರೂರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, “ಇಸ್ಪೀಟ್ ಆಡಿದ್ದೀಯಾ, ಬಡ್ಡಿ ವ್ಯವಹಾರ ಮಾಡಿದ್ದೀಯಾ” ಎಂದು ಸುಳ್ಳು ಆರೋಪ ಮಾಡಿ, ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ.

ಈ ವೇಳೆ ಪ್ರಕರಣ ದಾಖಲಿಸದೇ ಬಿಡಲು ₹1,70,000 ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಏಪ್ರಿಲ್ 18ರಂದು ಶಂಕ್ರಪ್ಪರನ್ನು ಠಾಣೆಯಿಂದ ಬಿಡಿಸಿ, “ಲಂಚದ ಹಣ ನೀಡಿದರೆ ಬೈಕ್‌ನ್ನು ಬಿಡುತ್ತೇವೆ” ಎಂದು ತಿಳಿಸಿದ್ದಾಗಿ ದೂರುದಲ್ಲಿ ಉಲ್ಲೇಖಿಸಲಾಗಿದೆ.

ಲೋಕಾಯುಕ್ತ ಟ್ರ್ಯಾಪ್

ಈ ಕುರಿತು ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಕಾರ್ಯಾಚರಣೆ ನಡೆಸಿ, ಪಿ.ಎಸ್.ಐ. ಭೀಮಪ್ಪ ರಬಕವಿ ಹಾಗೂ ಪೊಲೀಸ್ ಪೇದೆ ಸಂತೋಷ ಬಿರಾದಾರರು ₹1,70,000 ಲಂಚ ಸ್ವೀಕರಿಸುವಾಗ ಅವರನ್ನು ರಂಗೇಹತ್ತ ಹಿಡಿದಿದ್ದಾರೆ.

ಅಧಿಕಾರಿಗಳ ತಂಡ

ಈ ದಾಳಿಯನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಬಿ. ನಂದಗಾಂವಿ ಅವರ ಮಾರ್ಗದರ್ಶನದಲ್ಲಿ, ಡಿ.ಎಸ್.ಪಿ. ಸುರೇಶರೆಡ್ಡಿ ಸೇರಿದಂತೆ ಬಿ.ಎ. ಬಿರಾದಾರ, ಎಂ.ಬಿ. ಬಿರಾದಾರ ಹಾಗೂ ಎನ್.ಆರ್. ಖಿಲಾರೆ ನೇತೃತ್ವದಲ್ಲಿ ತಂಡ ಯಶಸ್ವಿಯಾಗಿ ನಡೆಸಿದೆ.

ಸಾರ್ವಜನಿಕರಲ್ಲಿ ಚರ್ಚೆ

ಈ ಘಟನೆ ಪೊಲೀಸ್ ಇಲಾಖೆಯ ನಿಷ್ಠೆ ಬಗ್ಗೆ ಪ್ರಶ್ನೆ ಎಬ್ಬಿಸಿದ್ದು, ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯ ನಾಗರಿಕರನ್ನು ಸುಳ್ಳು ಪ್ರಕರಣಗಳಿಂದ ಬೆದರಿಸಿ ಲಂಚ ಪಡೆಯುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಅಂತಿಮ ಮಾತು

ಲೋಕಾಯುಕ್ತ ಬಲೆಗೆ ಪಿ.ಎಸ್.ಐ. ಸಿಲುಕಿರುವ ಈ ಘಟನೆ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಇನ್ನೂ ಮುಂದುವರಿಯಬೇಕೆಂಬುದನ್ನು ಮತ್ತೊಮ್ಮೆ ನೆನಪಿಸಿದೆ. ಸಾರ್ವಜನಿಕರು ಇಂತಹ ಪ್ರಕರಣಗಳನ್ನು ಧೈರ್ಯವಾಗಿ ಬಹಿರಂಗಪಡಿಸಿದರೆ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ ಎಂಬುದು ಸ್ಪಷ್ಟವಾಗಿದೆ.

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಲೋಕಾಯುಕ್ತ ಬಲೆಗೆ ಬಿದ್ದ ಕೆರೂರ ಪಿ.ಎಸ್.ಐ. ಭೀಮಪ್ಪ ರಬಕವಿ80 ಅಡಿ ಕೆಳಗೆ ನೀರು: ಪೈದೊಡ್ಡಿ ವೃದ್ಧನ ಗೋಳು ಕೇಳುವರು ಯಾರು “ಪುರಾಣದ ಬಸವಣ್ಣ ಅಲ್ಲ — ಸಮಾಜ ಬದಲಿಸಿದ ಮನುಷ್ಯ ಬಸವಣ್ಣ” 41°C ಬಿಸಿಲಿನ ಬಲಿ ಆಗುತ್ತಿರುವ ಶ್ರಮಜೀವಿಗಳು“ಜೈಲಿನಲ್ಲಿರುವ ತಂದೆ… ಮಗಳ ಎಮೋಷನಲ್ ಪೋಸ್ಟ್ ವೈರಲ್!” ಸಿಂಧನೂರಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು: ಸಾರ್ವಜನಿಕರಲ್ಲಿ ಭಯದ ವಾತಾವರಣಸಿಂಧನೂರು ನಗರಸಭೆಗೆ ಹಡಪದ ಸಮಾಜದ ಬೇಡಿಕೆಗಳ ಮನವಿಚಿನ್ನದ ಪದಕ ವಿಜೇತ ಶ್ವೇತಾ ಮೇಟಿ BSC ಕಂಪ್ಯೂಟರ್ ಸೈನ್ಸ್‌ನಲ್ಲಿ 7ನೇ ರಾಂಕ್ಬಸ್–ಕಾರ್ ಡಿಕ್ಕಿಗೆ 6 ಮಂದಿ ಸಜೀವ ದಹನ – ನಿರ್ಲಕ್ಷ್ಯ ರಸ್ತೆಗೆ ಮತ್ತೆ ಬಲಿ!ಮರಕ್ಕೆ ಕಾರು ಡಿಕ್ಕಿ: ಸಿಪಿಐ ರಘುನಾಥ್ ಸ್ಥಳದಲ್ಲೇ ದುರ್ಮರಣಗುತ್ತಿಗೆ ಪದ್ಧತಿ ವಿರೋಧಿಸಿ ಆಕ್ರೋಶ“ಕತ್ತು ಕೊಯ್ಯುವುದನ್ನು ನಿಲ್ಲಿಸಿ” – ಸರ್ಕಾರದ ವಿರುದ್ಧ ಆಕ್ರೋಶವಿಠಲಪುರದಲ್ಲಿ ಅಂಬೇಡ್ಕರ್ ಜಯಂತಿ ಉತ್ಸಾಹಭರಿತ ಆಚರಣೆಸಿಂಧನೂರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮೂವರ ಬಂಧನಮನುಸ್ಮೃತಿಯ ಕತ್ತಲೆಯಿಂದ ಸಂವಿಧಾನದ ಬೆಳಕಿನೆಡೆಗೆ ಅಂಬೇಡ್ಕರ್ ಎಂಬ ಯುಗಪುರುಷ ಮಸ್ಕಿಯಲ್ಲಿ ಬಿಜೆಪಿ V/S ಬಿಜೆಪಿ: ಅಭ್ಯರ್ಥಿ ಗೊಂದಲ, ಒಳಜಗಳ ಬಹಿರಂಗ