ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಮನ್ ಕೀ ಬಾತ್ ವೀಕ್ಷಣೆಗಾಗಿ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ

📰 ಮನ್ ಕೀ ಬಾತ್ ವೀಕ್ಷಣೆಗಾಗಿ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ

📍ಸಿಂಧನೂರು | ಮಾ.29

ಭಾರತೀಯ ಜನತಾ ಪಕ್ಷ (ಬಿಜೆಪಿ) ನಗರ ಮತ್ತು ಗ್ರಾಮೀಣ ಮಂಡಲದ ಪದಾಧಿಕಾರಿಗಳು, ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಬಿಎಲ್ಎ-2 (BLA-2) ಬೂತ್ ಮಟ್ಟದ ಪ್ರತಿನಿಧಿಗಳಿಗೆ ಮಹತ್ವದ ಸೂಚನೆ ನೀಡಲಾಗಿದೆ.

ದೇಶದ ಪ್ರಧಾನಮಂತ್ರಿ Narendra Modi ಅವರ ಜನಪ್ರಿಯ ಕಾರ್ಯಕ್ರಮ “ಮನ್ ಕೀ ಬಾತ್” ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಪ್ರಸಾರವಾಗಲಿದ್ದು, ಕಾರ್ಯಕ್ರಮವನ್ನು ಸಂಘಟಿತವಾಗಿ ವೀಕ್ಷಣೆ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ.

ಈ ಕಾರ್ಯಕ್ರಮವು ಎಲ್ಲಾ ಪ್ರಮುಖ ಸುದ್ದಿ ವಾಹಿನಿಗಳು, ಮೊಬೈಲ್‌ನ NaMo App ಹಾಗೂ ಯೂಟ್ಯೂಬ್ ಮೂಲಕ ನೇರ ಪ್ರಸಾರವಾಗಲಿದೆ.

ನಗರ ಮತ್ತು ಗ್ರಾಮೀಣ ಮಂಡಲದ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಇರುವ ಬೂತ್‌ಗಳ ಪ್ರಕಾರ ಜನರನ್ನು ಸೇರಿಸಿ, ಮೊಬೈಲ್ ಅಥವಾ ಟಿವಿ ಮೂಲಕ ಮನ್ ಕೀ ಬಾತ್ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಬೇಕು. ವೀಕ್ಷಣೆ ಸಂದರ್ಭದ ಫೋಟೋಗಳನ್ನು ಕ್ಲಿಕ್ಕಿಸುವುದು ಕಡ್ಡಾಯವಾಗಿದ್ದು, ಆ ಫೋಟೋಗಳನ್ನು SARAL App ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ.

ಒಂದು ವೇಳೆ SARAL ಆ್ಯಪ್‌ನಲ್ಲಿ ಅಪ್ಲೋಡ್ ಮಾಡಲು ಸಾಧ್ಯವಾಗದಿದ್ದಲ್ಲಿ, ಬಿಎಲ್ಎ-2 ಗ್ರೂಪ್ ಅಥವಾ ನಗರ ಮಂಡಲದ ಗ್ರೂಪ್‌ಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವಂತೆ ತಿಳಿಸಲಾಗಿದೆ.

ಈ ಕುರಿತು ನಗರ ಮಂಡಲದ ಅಧ್ಯಕ್ಷರಾದ Siddaramesh Mannapur ಅವರು ಮಾತನಾಡಿ, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
“ಜನರ ಜೀವಕ್ಕೆ ಬೆಲೆ ಇಲ್ವಾ..? 8 ವರ್ಷಗಳಿಂದ ನರಳುತ್ತಿರುವ ತಡಕಲ್ ಗ್ರಾಮ!”ಸಾವಿನ ದವಡೆಯಿಂದ ತಾಯಿ-ಮಗುವಿಗೆ ಮರುಜನ್ಮ ನೀಡಿದ ಸಿಂಧನೂರು MCH ವೈದ್ಯರ ಸಾಹಸಸಿಂಧನೂರಿನಲ್ಲಿ ಭೀಕರ ಅಪಘಾತ : ಒಬ್ಬ ವಿದ್ಯಾರ್ಥಿನಿ ದುರ್ಮರಣ – ಮೂವರು ಗಂಭೀರಡೊನೇಷನ್ ಹಾವಳಿ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ ಶ್ರೀ ಶನೇಶ್ವರ ದೇವರ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ“ಸಿಂಧನೂರಿಗೆ ಒಳ್ಳೆ ಟೈಮ್” – ಬಾದರ್ಲಿಗೆ ಸಚಿವ ಸ್ಥಾನ ಫಿಕ್ಸಾ..?ಹಸಿರು ಹೋರಾಟ vs ಜಾಹೀರಾತು ಮಾಫಿಯಾ – ಸಿಂಧನೂರಿನಲ್ಲಿ ಏನಾಗುತ್ತಿದೆ?ಗಾಂಧಿ ಸರ್ಕಲ್ ಗಂಧದ ಸರ್ಕಲ್ ಆಯ್ತು!ವರ್ಷಗಳ ಪ್ರೇಮ ಸಂಬಂಧ ಮದುವೆ ಹಂತದಲ್ಲಿ ಮುರಿತ: ಯಾದಗಿರಿಯಲ್ಲಿ ವಿವಾದಕ್ಕೆ ತಿರುವುರಾಯಚೂರು ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿ ನೇಮಕದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಗೆಲುವು, ಸಮರ್ಥ್ ಶಾಮನೂರ್ ವಿಜಯಿಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವು, ಬಿಜೆಪಿಗೆ ಹಿನ್ನಡೆಗದಗ ಜಾತ್ರೆಯಲ್ಲಿ ಅವಘಡ: ಡಾನ್ಸಿಂಗ್ ಪ್ಲೇಟ್ ಮುರಿದು 18 ಮಂದಿಗೆ ಗಾಯಖಾಸಗಿ ಶಾಲೆಗಳ ಡೊನೇಷನ್ ದಂಧೆಗೆ ಕಡಿವಾಣ ಹಾಕಿ: ಎಸ್‌ಎಫ್‌ಐ ಆಗ್ರಹಕಣ್ಣಿಗೆ ಕಾಣದ ಅಪಾಯ: ಅತಿ ಹೆಚ್ಚಿನ ಯುವಿ ಕಿರಣಗಳಿಂದ ಆರೋಗ್ಯಕ್ಕೆ ಭೀತಿ