ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

೯ ನೇ ವಾರ್ಡಿನ ಮುಖ್ಯ ರಸ್ತೆಯ ಮೇಲೆ ಗಬ್ಬು ನಾರುತ್ತಿರುವ ಚರಂಡಿ ನೀರು...!!!

Advertisement
ಏಪ್ರಿಲ್ 30.ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ಗ್ರಾಮದ ಶನಿವಾರ ರಾತ್ರಿ ಸುರಿದ ಬಾರಿ ಮಳೆಗೆ ೪ ನೇ ವಾರ್ಡಿನ ರಸ್ತೆಯ ಮೇಲೆ ಚರಂಡಿ ನೀರು ಹರಿದು ಕಾಲುವೆಯಂತೆಯಾಗಿದೆ.ಸಾರ್ವಜನಿಕರು,ಬೈಕ್ ಸವಾರರು,ಗಬ್ಬು ನಾರುತ್ತಿರುವ ಚರಂಡಿಯ ನೀರಿನ ಮೇಲೆ ನಡೆದು ಹೋಗಬೇಕು.ರೋಗರುಜಿನಗಳಿಗೆ ಬಲಿಯಾಗಬೇಕಾ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.

೪ ವಾರ್ಡಿನ ಸದಸ್ಯರಾದ ಕುರುಬರು ದ್ಯಾವಣ್ಣ ಮಾತನಾಡಿ ಗ್ರಾಮದಲ್ಲಿರುವ ೩೧ ವಾರ್ಡ್ಗಳಲ್ಲಿನ ಹರಿಯುವ ಚರಂಡಿ ನೀರು ೪ನೇ ವಾರ್ಡಿನ ಭಾಗಕ್ಕೆ ಬರುತ್ತದೆ.೪ ವರ್ಷದಿಂದ ಮಳೆ ಬಂದರೆ ಸಾಕು ಈ ಸಮಸ್ಯೆ ಬಗ್ಗೆ ಹೇಳುತ್ತಾ ಬಂದಿದೆಯಾದರೂ ಪರಿಹಾರ ಮಾಡುವವರಿಲ್ಲ.ಈಗಾಗಲೆ ಪಿಡಿಒ ಗಮನಕ್ಕೆ ತಂದಾದರೂ ಒಮ್ಮೆ ಸ್ವಚ್ಚತೆ ಮಾಡಿಸಿದ್ದು ಹಣವು ಬಿಡುಗಡೆಯಾಗಿಲ್ಲ ಈ ಬಗ್ಗೆ ಅಧಿಕಾರಿಗಳ ಇತ್ತ ಗಮನ ಹರಿಸಿಲ್ಲ ಕ್ರಮ ಕೈಗೊಂಡಿಲ್ಲ.ಗ್ರಾಮದ ಪ್ರತಿಯೊಂದು ವಾರ್ಡಿನ ಸಮಸ್ಯೆ ಇದು.ಗ್ರಾ ಪಂಚಾಯಿತಿಯ ಸದಸ್ಯರ ಗೋಳಾದರೆ ಇನ್ನು ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಾರೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.ಸಮಸ್ಯೆಯನ್ನು ಬಗೆಹರಿಸುವುದಾಗಲೀ ಪರಿಶೀಲನೆ ಮಾಡುವುದಕ್ಕಾಲೀ ಆಗಮಿಸಿಲ್ಲ.

ನನ್ನ ಅವಧಿಯಲ್ಲಿ ಯಾವುದೇ ಅನುದಾನ ನಿಲ್ಲಿಸಿಲ್ಲ ಆಯಾ ವಾರ್ಡಿನ ಸದಸ್ಯರಿಗೆ ಅನುದಾನ ನೀಡಿದ್ದೇನೆ.ಅನದಾನವನ್ನು ಯಾವುದಕ್ಕೆ ನೀಡಿರುತ್ತೇವೆ ಅದಕ್ಕೆ ಸರಿಯಾದ ರೀತಿಯಲ್ಲಿ ಸದ್ಬಳಗೆ ಮಾಡಿದರೆ ಈ ಸಮಸ್ಯೆ ಉದ್ಬವ ಆಗುತ್ತಿರಲಿಲ್ಲ.ವಾರ್ಡಿನ ಸದಸ್ಯರುಗಳು ಸಮಸ್ಯೆಯನ್ನು ನೋಡಿ ಬಗೆಹರಿಸಬೇಕು.ನನಗೆ ನೀಡಿ ಕೆಲಸ ನಾವಾದರು ಮಾಡುತೇವೆ.ಎಲ್ಲ ಸಮಸ್ಯೆಗಳು ಚುನಾವಣಾ ಸಮಯದಲ್ಲೇ ಬಂದರೆ ಈ ಸಮಯದಲ್ಲಿ ಎನು ಮಾಡಲು ಸಾಧ್ಯ ತಾತ್ಕಾಲಿಕವಾಗಿ ಸ್ವಚ್ಚತೆ ಮಾಡಿಸುತ್ತೇನೆ ಎಂದು ಗ್ರಾಂ.ಪಂ. ಪಿ.ಡಿ.ಓ ಶಿವಕುಮಾರ ಕೋರಿ ಹೇಳಿದರು.

 
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ