ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಪಿಯುಸಿ ಫಲಿತಾಂಶದಲ್ಲಿ ಯಡವಟ್ಟು 600 ಕ್ಕೆ 603 ಅಂಕ!

600ಕ್ಕೆ 603 ಅಂಕ! ಪಿಯುಸಿ ಫಲಿತಾಂಶದಲ್ಲಿ ಭಾರೀ ಗೊಂದಲ – ವಿದ್ಯಾರ್ಥಿನಿ, ಪಾಲಕರಲ್ಲಿ ಆತಂಕ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 600 ಅಂಕಗಳಿಗೆ 603 ಅಂಕ ನೀಡಿರುವ ಘಟನೆ ಭಾರೀ ಸಂಚಲನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಪ್ರಕಟಿಸಿದ ಫಲಿತಾಂಶದಲ್ಲಿ ಈ ಗಂಭೀರ ದೋಷ ಕಂಡುಬಂದಿದ್ದು, ವಿದ್ಯಾರ್ಥಿನಿ ಹಾಗೂ ಪಾಲಕರಲ್ಲಿ ಆತಂಕ ಹೆಚ್ಚಿಸಿದೆ.

ಮಾನ್ವಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಈ ವರ್ಷ ಪರೀಕ್ಷೆ ಬರೆದಿದ್ದು, ಫಲಿತಾಂಶದಲ್ಲಿ ಗರಿಷ್ಠ ಅಂಕಗಳಿಗಿಂತಲೂ ಹೆಚ್ಚು ಅಂಕಗಳು ಬಂದಿರುವುದು ಎಲ್ಲರನ್ನೂ ಆಶ್ಚರ್ಯಕ್ಕೀಡಾಗಿಸಿದೆ.

news_1775818309_0_542.webp

 

⚠️ ಕಾಲೇಜು ಆಡಳಿತದ ಪ್ರತಿಕ್ರಿಯೆ

ಈ ಕುರಿತು ಸಂಬಂಧಪಟ್ಟ ಕಾಲೇಜಿನ ಆಡಳಿತ ಮಂಡಳಿಯನ್ನು ಸಂಪರ್ಕಿಸಿದಾಗ, “ಈ ವಿಷಯ ನಮ್ಮ ಗಮನಕ್ಕೂ ಬಂದಿದೆ. ಇದರಲ್ಲಿ ನಾವು ನೇರವಾಗಿ ಏನೂ ಮಾಡಲು ಸಾಧ್ಯವಿಲ್ಲ. ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ತಿಳಿಸುತ್ತೇವೆ. ಕಳೆದ ವರ್ಷಗಳಲ್ಲೂ 600ಕ್ಕೆ 657 ಅಂಕಗಳು ಬಂದ ಉದಾಹರಣೆಗಳಿವೆ. ಈ ಪ್ರಕರಣದಲ್ಲಿಯೂ ಅಧಿಕಾರಿಗಳು ಪರಿಶೀಲಿಸಿ ಸರಿಪಡಿಸುತ್ತಾರೆ” ಎಂದು ತಿಳಿಸಿದ್ದಾರೆ.

😟 ವಿದ್ಯಾರ್ಥಿನಿ ಹಾಗೂ ಪಾಲಕರಲ್ಲಿ ಆತಂಕ

ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆ ಬರೆದ ಬಳಿಕ ಇಂತಹ ಫಲಿತಾಂಶದ ದೋಷಗಳು ಉಂಟಾದರೆ, ತಮ್ಮ ನಿಜವಾದ ಅಂಕಗಳು ಯಾವುವು ಎಂಬುದೇ ತಿಳಿಯದ ಸ್ಥಿತಿ ಉಂಟಾಗುತ್ತದೆ. ಈ ಘಟನೆ ವಿದ್ಯಾರ್ಥಿನಿ ಹಾಗೂ ಆಕೆಯ ಪಾಲಕರಲ್ಲಿ ಆತಂಕ ಮೂಡಿಸಿದೆ. ಪಾಲಕರು ಕೂಡಲೇ ಈ ದೋಷವನ್ನು ಸರಿಪಡಿಸಿ ನಿಖರವಾದ ಫಲಿತಾಂಶ ನೀಡಬೇಕೆಂದು ಆಗ್ರಹಿಸಿದ್ದಾರೆ.

🔥 ವಿದ್ಯಾರ್ಥಿ ಸಂಘಟನೆಗಳ ಆಕ್ರೋಶ

ಈ ಕುರಿತು ವಿದ್ಯಾರ್ಥಿ ಸಂಘಟನೆಯ ಮುಖಂಡ ಪ್ರವೀಣ್ ಕುಮಾರ್ ಧುಮುತಿ ತೀವ್ರ ಆಕ್ರೋಶ ವ್ಯಕ್ತಪಡಿಸಿ,“600ಕ್ಕೆ 603 ಅಂಕ ನೀಡಿರುವುದು ವ್ಯವಸ್ಥೆಯ ವೈಫಲ್ಯವೇ ಅಥವಾ ಅಕ್ರಮವೇ ಎಂಬುದು ತನಿಖೆಯಾಗಬೇಕು. ಫಲಿತಾಂಶದ ದೋಷಗಳಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಎಡವಟ್ಟಿನಿಂದ ಅನಾಹುತಗಳು ಸಂಭವಿಸಿದರೆ ಅದಕ್ಕೆ ಯಾರು ಹೊಣೆ?”ಎಂದು ಪ್ರಶ್ನಿಸಿದ್ದಾರೆ. ಅವರು ಮುಂದುವರಿಸಿ, “ಪರೀಕ್ಷಾ ಮಂಡಳಿ ಹಾಗೂ ಮೌಲ್ಯಮಾಪನದಲ್ಲಿ ನಡೆದಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಪ್ರವೀಣ್ ಕುಮಾರ್ ಧುಮುತಿ ಒತ್ತಾಯಿಸಿದ್ದಾರೆ.

⚖️ ತಕ್ಷಣ ಕ್ರಮಕ್ಕೆ ಒತ್ತಾಯ

ಈ ಘಟನೆಯ ಹಿನ್ನೆಲೆದಲ್ಲಿ ಸಾರ್ವಜನಿಕರು ಹಾಗೂ ಪಾಲಕರು, ಫಲಿತಾಂಶದ ಗೊಂದಲವನ್ನು ತಕ್ಷಣ ನಿವಾರಿಸಿ, ನಿಖರ ಅಂಕಗಳನ್ನು ಪ್ರಕಟಿಸುವಂತೆ ಹಾಗೂ ಇಂತಹ ದೋಷಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಆಗ್ರಹಿಸಿದ್ದಾರೆ.

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಮರಕ್ಕೆ ಕಾರು ಡಿಕ್ಕಿ: ಸಿಪಿಐ ರಘುನಾಥ್ ಸ್ಥಳದಲ್ಲೇ ದುರ್ಮರಣಗುತ್ತಿಗೆ ಪದ್ಧತಿ ವಿರೋಧಿಸಿ ಆಕ್ರೋಶ“ಕತ್ತು ಕೊಯ್ಯುವುದನ್ನು ನಿಲ್ಲಿಸಿ” – ಸರ್ಕಾರದ ವಿರುದ್ಧ ಆಕ್ರೋಶವಿಠಲಪುರದಲ್ಲಿ ಅಂಬೇಡ್ಕರ್ ಜಯಂತಿ ಉತ್ಸಾಹಭರಿತ ಆಚರಣೆಸಿಂಧನೂರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮೂವರ ಬಂಧನಮನುಸ್ಮೃತಿಯ ಕತ್ತಲೆಯಿಂದ ಸಂವಿಧಾನದ ಬೆಳಕಿನೆಡೆಗೆ ಅಂಬೇಡ್ಕರ್ ಎಂಬ ಯುಗಪುರುಷ ಮಸ್ಕಿಯಲ್ಲಿ ಬಿಜೆಪಿ V/S ಬಿಜೆಪಿ: ಅಭ್ಯರ್ಥಿ ಗೊಂದಲ, ಒಳಜಗಳ ಬಹಿರಂಗಕೊಪ್ಪಳದಲ್ಲಿ ಸದ್ದು ಮಾಡಿದ ಪ್ರಕರಣ: ವಿದ್ಯಾರ್ಥಿನಿಯರ ವಿಡಿಯೋಗಳ ಆರೋಪಕ್ಕೆ ಬೆಚ್ಚಿಬಿದ್ದ ಜನತೆಪ್ರೀತಿಯ ಹೆಸರಲ್ಲಿ ಮೋಸ: ಮದುವೆ ನಂಬಿಸಿ ಯುವತಿಗೆ ದ್ರೋಹ, ಪ್ರಕರಣ ದಾಖಲುಲೋಕಾಯುಕ್ತ ದಾಳಿ: ₹1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಮುಖ್ಯಾಧಿಕಾರಿ ಬಂಧನಲಂಚ ಪಡೆದ ಪಿ.ಡಿ.ಓಗೆ ಜೈಲು ಶಿಕ್ಷೆ: 7 ವರ್ಷಗಳ ಕಾರಾವಾಸ, ₹75 ಸಾವಿರ ದಂಡಮೊಬೈಲ್ ದಾಸರಾಗಬೇಡಿ, ವಿದ್ಯಾವಂತರಾಗಿ – ಡಿ.ವೈ.ಎಸ್.ಪಿ ಚಂದ್ರಶೇಖರ್ ಕರೆಪಿಯುಸಿ ಫಲಿತಾಂಶದಲ್ಲಿ ಯಡವಟ್ಟು 600 ಕ್ಕೆ 603 ಅಂಕ! ಕರೆಗೂ ಸ್ಪಂದಿಸದ ಅಧಿಕಾರಿ, ಲಕ್ಷಾಂತರ ಅಕ್ರಮ ಆರೋಪ – ರೌಡಕುಂದದಲ್ಲಿ ಗದ್ದಲಗು.ವಿ.ಸ.ಕಂ.ನಿ ಕ್ಕೆ ನಾಗರಾಜ್ ಗಸ್ತಿ ನಾಗರತ್ನ ವಾಗೀಶ್ ರಾರಾವಿ ಸೇರಿದಂತೆ 41 ಸದಸ್ಯರ ನಾಮ ನಿರ್ದೇಶನಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ