ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಮೊಬೈಲ್ ದಾಸರಾಗಬೇಡಿ, ವಿದ್ಯಾವಂತರಾಗಿ – ಡಿ.ವೈ.ಎಸ್.ಪಿ ಚಂದ್ರಶೇಖರ್ ಕರೆ

BB NEWS KANNADA

ಏಪ್ರಿಲ್ 11 

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಎಕ್ಸಲೆಂಟ್ ಪದವಿ ಮಹಾವಿದ್ಯಾಲಯದಲ್ಲಿ ಅಹಿಂದ ವಿದ್ಯಾರ್ಥಿ ಯುವಜನ ಒಕ್ಕೂಟ, ಸಿಂಧನೂರು ತಾಲೂಕ ವತಿಯಿಂದ “ಸಂವಿಧಾನಿಕ ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಐಕ್ಯತೆ ಬಲಗೊಳಿಸುವ” ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಕಾನೂನು ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

news_1775894875_0_492.webp

ಕಾರ್ಯಕ್ರಮವನ್ನು ಜ್ಯೋತಿ ಬಾಪುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಹಿರಿಯ ವಕೀಲರಾದ ರಾಯಪ್ಪ ಅವರು ಕಾನೂನು ಪಾಲನೆಯ ಮಹತ್ವ, ವಿದ್ಯಾರ್ಥಿಗಳ ಶಿಸ್ತು ಮತ್ತು ಶಿಕ್ಷಣದ ಅಗತ್ಯತೆ ಕುರಿತು ವಿವರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಿ.ವೈ.ಎಸ್.ಪಿ ಚಂದ್ರಶೇಖರ್ ನಾಯಕ್ ಅವರು ಸೈಬರ್ ಕ್ರೈಮ್ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. “ಮೊಬೈಲ್ ದಾಸರಾಗಬೇಡಿ, ವಿದ್ಯಾವಂತರಾಗಿ ಪ್ರಜ್ಞಾವಂತರಾಗಿ. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಹಿಡಿಯುವುದಕ್ಕಿಂತ ಪುಸ್ತಕ ಹಿಡಿದು ಓದಿ. ರೀಲ್ಸ್ ನೋಡುವ ಬದಲು ರಿಯಲ್ ಲೈಫ್ ಕಡೆ ಗಮನ ಹರಿಸಿ” ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇದೇ ವೇಳೆ ಅವರು ಗೌತಮ ಬುದ್ಧ ಅವರ ಪಂಚಶೀಲ ತತ್ವಗಳನ್ನು ವಿವರಿಸಿ, ಅಹಿಂಸೆ, ಸತ್ಯಸಂಧತೆ, ಪ್ರಾಮಾಣಿಕತೆ, ಶೀಲಪಾಲನೆ ಮತ್ತು ಮಾದಕ ವಸ್ತುಗಳ ತ್ಯಾಗವು ವ್ಯಕ್ತಿತ್ವ ವಿಕಾಸಕ್ಕೆ ಅಗತ್ಯವೆಂದು ಹೇಳಿದರು. “ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಅವರ ಭಾಷಣದಲ್ಲಿ ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಸಾಮ್ರಾಟ್ ಅಶೋಕ, ಕಾರ್ಲ್ ಮಾರ್ಕ್ಸ್ ಹಾಗೂ ಶಿಶುನಾಳ ಶರೀಫ್ ಅವರ ತತ್ವಗಳನ್ನೂ ಉಲ್ಲೇಖಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿರೇಶ್ ಉಪ್ಪಲದೊಡ್ಡಿ ಅವರು ಮಹಿಳಾ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು. ಪ್ರವೀಣ್ ದುಮತಿ ಅವರು ಮಹನೀಯರ ಹಾದಿಯನ್ನು ಅನುಸರಿಸುವ ಅಗತ್ಯತೆಯನ್ನು ತಿಳಿಸಿದರು. ಉಮೇಶ್ ಅವರು ಸಂವಿಧಾನದ ಅನುಚ್ಚೇದ 19 ಮತ್ತು 21ರ ಕುರಿತು ಹಾಗೂ ಶಿಕ್ಷಣ-ಉದ್ಯೋಗದ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ನೀಡಿದರು.

ನಂತರ ಮಾತನಾಡಿದ ಹಿರಿಯ ವಕೀಲರಾದ ರಾಯಪ್ಪ ಅವರು ತಮ್ಮ ಜೀವನ ಅನುಭವಗಳನ್ನು ಹಂಚಿಕೊಂಡು, “ನಾವು ಕಷ್ಟಪಟ್ಟು ಓದಿ ಇಂದಿನ ಮಟ್ಟಕ್ಕೇರಿದ್ದೇವೆ. ಈಗಿನ ವಿದ್ಯಾರ್ಥಿಗಳಿಗೆ ಎಲ್ಲಾ ಸೌಕರ್ಯಗಳಿವೆ. ದಿನಕ್ಕೆ 3-4 ಗಂಟೆ ಓದಿದರೂ ಸಾಕು, ನೀವು ಯಶಸ್ವಿಯಾಗಬಹುದು. ಮೊಬೈಲ್‌ಗಳಿಗೆ ದಾಸರಾಗದೆ ಶಿಕ್ಷಣದ ಕಡೆ ಗಮನ ಹರಿಸಿ” ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ಚಂದ್ರಶೇಖರ್, ರಾಯಪ್ಪ ವಕೀಲರು, ಪತ್ರಕರ್ತರಾದ ಎಸ್.ಎಸ್. ಜಿನೂರು, ದಲಿತ ಮುಖಂಡ ವೆಂಕಟೇಶ್ ಗಿರಿಜಾಲಿ, ಪ್ರಾಂಶುಪಾಲರಾದ ಮಂಜುನಾಥ್ ಸೋಮಲಾಪುರ, ಉಪನ್ಯಾಸಕರಾದ ಎಂ. ವೆಂಕರಾವ್, ಖಾಸಿಂ ಖುರೆಸಿ, ಬಸವರಾಜ್ ಯಾಪಲಪರ್ವಿ, ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು, ನೈತಿಕ ಮೌಲ್ಯಗಳು ಹಾಗೂ ಶಿಕ್ಷಣದ ಮಹತ್ವವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿತು.

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಮರಕ್ಕೆ ಕಾರು ಡಿಕ್ಕಿ: ಸಿಪಿಐ ರಘುನಾಥ್ ಸ್ಥಳದಲ್ಲೇ ದುರ್ಮರಣಗುತ್ತಿಗೆ ಪದ್ಧತಿ ವಿರೋಧಿಸಿ ಆಕ್ರೋಶ“ಕತ್ತು ಕೊಯ್ಯುವುದನ್ನು ನಿಲ್ಲಿಸಿ” – ಸರ್ಕಾರದ ವಿರುದ್ಧ ಆಕ್ರೋಶವಿಠಲಪುರದಲ್ಲಿ ಅಂಬೇಡ್ಕರ್ ಜಯಂತಿ ಉತ್ಸಾಹಭರಿತ ಆಚರಣೆಸಿಂಧನೂರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮೂವರ ಬಂಧನಮನುಸ್ಮೃತಿಯ ಕತ್ತಲೆಯಿಂದ ಸಂವಿಧಾನದ ಬೆಳಕಿನೆಡೆಗೆ ಅಂಬೇಡ್ಕರ್ ಎಂಬ ಯುಗಪುರುಷ ಮಸ್ಕಿಯಲ್ಲಿ ಬಿಜೆಪಿ V/S ಬಿಜೆಪಿ: ಅಭ್ಯರ್ಥಿ ಗೊಂದಲ, ಒಳಜಗಳ ಬಹಿರಂಗಕೊಪ್ಪಳದಲ್ಲಿ ಸದ್ದು ಮಾಡಿದ ಪ್ರಕರಣ: ವಿದ್ಯಾರ್ಥಿನಿಯರ ವಿಡಿಯೋಗಳ ಆರೋಪಕ್ಕೆ ಬೆಚ್ಚಿಬಿದ್ದ ಜನತೆಪ್ರೀತಿಯ ಹೆಸರಲ್ಲಿ ಮೋಸ: ಮದುವೆ ನಂಬಿಸಿ ಯುವತಿಗೆ ದ್ರೋಹ, ಪ್ರಕರಣ ದಾಖಲುಲೋಕಾಯುಕ್ತ ದಾಳಿ: ₹1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಮುಖ್ಯಾಧಿಕಾರಿ ಬಂಧನಲಂಚ ಪಡೆದ ಪಿ.ಡಿ.ಓಗೆ ಜೈಲು ಶಿಕ್ಷೆ: 7 ವರ್ಷಗಳ ಕಾರಾವಾಸ, ₹75 ಸಾವಿರ ದಂಡಮೊಬೈಲ್ ದಾಸರಾಗಬೇಡಿ, ವಿದ್ಯಾವಂತರಾಗಿ – ಡಿ.ವೈ.ಎಸ್.ಪಿ ಚಂದ್ರಶೇಖರ್ ಕರೆಪಿಯುಸಿ ಫಲಿತಾಂಶದಲ್ಲಿ ಯಡವಟ್ಟು 600 ಕ್ಕೆ 603 ಅಂಕ! ಕರೆಗೂ ಸ್ಪಂದಿಸದ ಅಧಿಕಾರಿ, ಲಕ್ಷಾಂತರ ಅಕ್ರಮ ಆರೋಪ – ರೌಡಕುಂದದಲ್ಲಿ ಗದ್ದಲಗು.ವಿ.ಸ.ಕಂ.ನಿ ಕ್ಕೆ ನಾಗರಾಜ್ ಗಸ್ತಿ ನಾಗರತ್ನ ವಾಗೀಶ್ ರಾರಾವಿ ಸೇರಿದಂತೆ 41 ಸದಸ್ಯರ ನಾಮ ನಿರ್ದೇಶನಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ